Listen

Description

Like it? Subscribe! 

ರಸವೆ ಜನನ, ವಿರಸ ಮರಣ, ಸಮರಸವೆ ಜೀವನ’ ಇದು ಜೀವನದ ಕಷ್ಟ-ಸುಖಗಳನ್ನು ಎಲ್ಲ ಸ್ತರಗಳಲ್ಲೂ ಅನುಭವಿಸಿ, ಜೀವನದ ಕುದಿಯಲ್ಲಿ ಬೆಂದ ಬೇಂದ್ರೆ ತತ್ವ. ’ಬೆಂದರೆ ಬೇಂದ್ರೆ’ ಎನ್ನುವುದು ಈಗ ಕನ್ನಡ ಪಡೆನುಡಿ.  ಅದಕ್ಕೆ, ಅವರು ಕಾಲ ಕಳೆದಂತೆ ಇನ್ನೂ ರೆಲೆವಂಟ್ ಆಗುತ್ತ ಹೋಗುತ್ತಾರೆ; ಬೇಂದ್ರೆ ಅಜ್ಜ ಬಹಳ ಹತ್ತಿರವಾಗುತ್ತಾನೆ. ಬಂಡಾಯದ ಬಿಸಿ ಆರಿದರೂ, ನವ್ಯದ ಪ್ರತಿಮೆಗಳು ಮಾಸಿದರೂ ಬೇಂದ್ರೆ ಬಾಳಗೀತೆ ಮತ್ತೆ ಮತ್ತೆ ನವ ಉದಯವನ್ನು ತಳೆಯುತ್ತದೆ. ಒಮ್ಮೆ ಭಾವಗೀತೆಯಾಗಿ ಮನ ಸೂರೆಗೊಳ್ಳುತ್ತದೆ; ಇನ್ನೊಮ್ಮೆ ಭಕ್ತಿಗೀತೆಯಾಗಿ ಬೆಳಕು ತೋರುತ್ತದೆ. ಮತ್ತೊಮ್ಮೆ ಜಾನಪದವಾಗಿ ಮಣ್ಣಿನ ವಾಸನೆ ಬೀರುತ್ತದೆ. ಕೆಲವೊಮ್ಮೆ ’ಆನ ತಾನನ’ ಎಂದು ಸುಲಭವಾಗಿ ಕಂಡರೂ, ಮಾಂತ್ರಿಕನ ಮುಷ್ಟಿಯಲ್ಲಿನ ಬಟ್ಟೆಯಂತೆ ಎಳೆದಷ್ಟೂ ಉದ್ದವಾಗಿ ಹರಿಯುತ್ತದೆ. ಇದೆ ಈ ಗಾರುಡಿಗನ ಗಮ್ಮತ್ತು. more ....  

Read   at https://kannadakali.com/publications/podcasts

Watch at https://www.youtube.com/channel/UCCON6n4lEgj6NsPqCLZdDSw

Listen at https://anchor.fm/kannadakali