"ಮಾನ್ಯ ಜಿಲ್ಲಾಧಿಕಾರಿಗಳ ನ್ಯಾಯಾಲಯ " ಅದು .
ಆವತ್ತು , ತಾಲೂಕಿನ "ಮುಖ್ಯ ವೈದ್ಯಾಧಿಕಾರಿ , ಪೊಲೀಸ್ ಇನ್ಸ್ಪೆಕ್ಟರ್ " ಮತ್ತು .....ಸರ್ಕಾರಿ ಆಸ್ಪತ್ರೆಯ ಜವಾನ "ಶಿವಪ್ಪ "ಹೊರಗಡೆ ಕುಳಿತಿದ್ದರು .
ಆವತ್ತಿನ ವಿಚಾರಣೆಯಲ್ಲಿ "ಶಿವಪ್ಪ "ಎಂಬ ಸರಕಾರಿ ಜವಾನನ "ಭವಿಷ್ಯ" ನಿರ್ಧಾರ ಮಾಡಲಿದ್ದು , ಪಕ್ಕ ಕುಳಿತ ಇನ್ಸಪೆಕ್ಟರ್ ....ಹಾಗೂ ಮುಖ್ಯ ಆರೋಗ್ಯ ಅಧಿಕಾರಿಯ ಮುಖದಲ್ಲಿ , "ಅವಹೇಳನೆಯ "ನಗು ಕಂಡುಬರುತ್ತಿತ್ತು.
ಜಿಲ್ಲಾಧಿಕಾರಿಗಳು ಬಂದ ನಂತರ , ಅಲ್ಲಿನ ಜವಾನ ಕೂಗಿ ಹೇಳಿದ್ದ .
"ಎಲ್ಲರೂ ಒಳಗೆ ಬರಬೇಕೆಂದು ".
ಎಲ್ಲರೂ ಒಳಗೆ ನಡೆದಿದ್ದರು , ಕೊನೆಯಲ್ಲಿ ಶಿವಪ್ಪ ಮಾತ್ರ ,ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ಹೋಗಿ ನಿಂತಿದ್ದ .
ಅಷ್ಟರಲ್ಲೇ ಒಳಗೆ ನಮಸ್ಕರಿಸಿ , ನುಗ್ಗಿ ಬಂದಿದ್ದ ಸರ್ಕಾರಿ ವಕೀಲ ,ರಾಜೀವ ನಾಯ್ಕ .
ಎದುರಿಗಿನ ಜಿಲ್ಲಾಧಿಕಾರಿಗಳಾದ ಚಕ್ರವರ್ತಿ ಅವರಿಗೆ , ಎಲ್ಲವೂ ನಿಚ್ಚಳ ಆಗಿತ್ತು .
ಶಿವಪ್ಪ ಕುಡಿದು ಬಂದು , ಉದ್ಯೋಗ ಮಾಡಿದ ಎಂದು .
ಅದಕ್ಕಾಗಿ ಆತ , ಸತ್ತವರ ಬಳಿ "ನೂರು ರೂಪಾಯಿ ಲಂಚ ಪಡೆದಿದ್ದಾನೆ " ಎಂಬುದು ಕೂಡ .
ವಿಚಾರಣೆ ಎಂಬುದು ಕೇವಲ ಒಂದು ಭಾಗ ಅಷ್ಟೇ , ಅವನನ್ನು ಕೆಲಸದಿಂದ "ವಜಾ "ಮಾಡಲು ...
ಎಂಬುದು ಕೂಡ ಅರಿತಿದ್ದರು ಅವರು.
ಶಿವಪ್ಪ ಒಳಗೆ ಇದ್ದ "ಕಟಕಟೆಯಲ್ಲಿ "ನಿಂತಿದ್ದ .
ಆತನ ಮುಖದಲ್ಲಿ ಮಾತ್ರ ಆವತ್ತು , ಹಿಂದೆಂದೂ ಕಾಣದ ದುಃಖ ಇತ್ತು.
ಚಕ್ರವರ್ತಿ ಸಾಹೇಬರು ಕೂಡ , ಆತನ ಕಡೆ ನೋಡಿದರು ಕನಿಕರದಿಂದ .
ಅಷ್ಟರಲ್ಲಿ ಶುರು ಮಾಡಿದ್ದ , ತನ್ನ ವಾದವನ್ನು ಸರಕಾರಿ ವಕೀಲ ಪಂಡಿತ್ .
ಸ್ವಾಮಿ , ಇಲ್ಲಿ ನಿಂತವನು "ಶಿವಪ್ಪ "ಎಂದು .
ಸರಕಾರಿ ಆಸ್ಪತ್ರೆಯಲ್ಲಿ , ಮೂವತ್ತು ವರ್ಷದಿಂದ ಕೆಲಸ ಮಾಡುತ್ತಿದ್ದಾನೆ .
"ಡೀ ದರ್ಜೆಯ ನೌಕರನಾಗಿ ".
"ಅವನ ಮೇಲಿನ ಮೊದಲ ಆರೋಪ ....ಕುಡಿದು ಕೆಲಸ ಮಾಡಿದ ಎಂದು .
ಹಾಗೂ ಎರಡನೇ ಆರೋಪ ..... ಸುಟ್ಟ ಗಾಯದಿಂದ ಮೃತಪಟ್ಟ "ಹೆಂಗಸಿನ "ಶರೀರ ಪೋಸ್ಟ್ ಮಾರ್ಟಂ ಮಾಡಲು .....ಅವರ ತಂದೆಯಿಂದಲೇ ನೂರು ರೂಪಾಯಿ "ಲಂಚ " ತೆಗೆದುಕೊಂಡಿದ್ದ ಎಂಬುದು".
ಸರಕಾರಿ ವಕೀಲ ಇಷ್ಟು ಹೇಳಿ , ತನ್ನ ವಾದ ಹೇಗೆ ಇದೆ ಎಂದು? ....ಒಳಗೆ ಕುಳಿತ , ಪೋಲಿಸ್ ಇನ್ಸ್ಪೆಕ್ಟರ್ ಕಡೆ ನೋಡಿದ ಆತ .
ಅವರ ಕಣ್ಣಲ್ಲಿ ಕೂಡ ಮೆಚ್ಚುಗೆ .
ಒಂದು ಉತ್ತಮ ಕೆಲಸದಲ್ಲಿ ಇದ್ದವರು , ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದವರು ....ಒಬ್ಬ ಸಣ್ಣ ನೌಕರನ ವಿರುದ್ಧ ನಿಂತು ಬಿಟ್ಟಿದ್ದರು ಆವತ್ತು .
ತಾವು ಎಷ್ಟು "ಪ್ರಾಮಾಣಿಕರು "ಎಂದು ತೋರಿಸಿಕೊಳ್ಳಲು.
ಕೇಳುತ್ತಾ ಇದ್ದ ಶಿವಪ್ಪ , ತನ್ನ ಮೇಲಿನ ಆರೋಪವನ್ನು .
ಯಾವುದೂ "ಸುಳ್ಳು "ಇರಲಿಲ್ಲ .
ಮುಂದೆ ವಕೀಲ ನುಡಿದಿದ್ದ.
"ಸ್ವಾಮಿ ಅದಕ್ಕೆ ಸಂಬಂಧಪಟ್ಟಂತೆ ಇರುವ ಎಲ್ಲಾ "ದಾಖಲೆಗಳನ್ನು ", ನಿಮ್ಮಮುಂದೆ ಈಗಾಗಲೇ ಹಾಜರು ಮಾಡಿದ್ದೇನೆ .
ಅದನ್ನು ಪರಿಗಣಿಸಿ ತಾವು , ಅಲ್ಲಿ ನಿಂತಿರುವ "ಆರೋಪಿಯನ್ನು "ತಕ್ಷಣಕ್ಕೆ ಜಾರಿಗೆ ಬರುವಂತೆ ...ಕೆಲಸದಿಂದ ವಜಾ ಮಾಡಬೇಕೆಂದು
ಕೋರಿಕೆ " ಎಂದು , ಕೈ ಮುಗಿದು ಕುಳಿತಿದ್ದ .
ಎಲ್ಲರಿಗೂ ಅರಿವು ಇತ್ತು , ಶಿವಪ್ಪ ಕೆಲಸದಿಂದ ವಜಾ ಆಗುತ್ತಾನೆ ಎಂದು .
"ನಿನ್ನ ಕಡೆ ವಾದ ಮಾಡಲು ಯಾರು ಇಲ್ಲವೇ " ಎಂದು ಕೇಳಿದ್ದರು , ಜಿಲ್ಲಾಧಿಕಾರಿ ಚಕ್ರವರ್ತಿಯವರು .
ಅದೊಂದು "ಪ್ರಕ್ರಿಯೆ "ಮಾತ್ರ ಉಳಿದಿತ್ತು ಅಷ್ಟೇ.
ಕೈ ಮುಗಿದು ಹೇಳಿದ್ದ ಶಿವಪ್ಪ .
"ಯಾರನ್ನೂ ಕೂಡ ವಾದ ಮಾಡಲು , ನಾ ನೇಮಕ ಮಾಡಿಲ್ಲ ಸ್ವಾಮಿ "ಎಂದು .
"ಎಲ್ಲವೂ ಸತ್ಯವೇ ಅವರು ಹೇಳಿದ್ದು .
ಆದರೆ ತಾವು ದಯವಿಟ್ಟು , ನನ್ನ ಐದು ನಿಮಿಷದ ಮಾತು ಕೇಳಿ" ಎಂದು ವಿನಂತಿ ಮಾಡಿದ್ದ .
"ಕುಡಿದಿದ್ದು ಹೌದು ಮಹಾ ಸ್ವಾಮಿ , ಯಾಕೆ
ಅಂದರೆ ".....
ಆತನ ಕಣ್ಣಲ್ಲಿ ನೀರಿತ್ತು .
"ಆದರೆ ನಾನು "ಕುಡುಕನಲ್ಲ "ಮಹಾಸ್ವಾಮಿ .
ಆದರೆ ಈ "ಪೋಸ್ಟ್ ಮಾರ್ಟಂ "ಮಾಡಲು ಹೋಗುವಾಗ , ಅದು ನನಗೆ ಅದು ಬೇಕೆ ಬೇಕು .
ಈ ಮೂವತ್ತು ವರ್ಷದಿಂದ , ನಾನು ಇದನ್ನೇ ಮಾಡಿದ್ದೇನೆ ಕೂಡ" .
ಚಕ್ರವರ್ತಿ ಅವರಲ್ಲಿ ಕುತೂಹಲ .
ಈತನಲ್ಲಿ ಮಾತನಾಡಲು , ಏನು ವಿಷಯ ಇರುತ್ತೆ ಎಂದು.
"ಅಲ್ಲಿ ಸತ್ತವರ ದೇಹವನ್ನು ಕೊಯ್ದು , ಅದರಲ್ಲಿ ವೈದ್ಯರು ಹೇಳಿದ ಅಂಗವನ್ನು ತೆಗೆದು ...ಮತ್ತೆ ಶರೀರವನ್ನು "ಹೊಲಿಯುವ "ಕೆಲಸ ನನ್ನದು .
ಮಾಮೂಲಿ ಮನಸು ಅದಕ್ಕೆ ಒಗ್ಗುವುದಿಲ್ಲ .
ಯಾಕೆ ಅಂದರೆ , ಸತ್ತ ಸಣ್ಣ ಮಕ್ಕಳ "ತಲೆ "ಒಡೆದು ,ಅವರ ಮೆದುಳಿನ ಭಾಗ ತೆಗೆಯಬೇಕು .
ಅದು ಕೂಡ , ಅವರ ತಲೆಗೆ "ಸುತ್ತಿಗೆ "ಪೆಟ್ಟು ಹಾಕಿ".
ಶಿವಪ್ಪ ಭಾವುಕನಾಗಿ ಹೋಗಿದ್ದ .
ಅಲ್ಲಿನ ಪ್ರತಿ ಚಿತ್ರ , ಅವನ ಕಣ್ಣ ಮುಂದೆ ಬರುತ್ತಿತ್ತು.
"ದೇಹ ಸತ್ತಿರಬಹುದು ಸ್ವಾಮಿ , ಆದರೆ ಅದನ್ನು ಮತ್ತಷ್ಟು ಹಿಂಸಿಸಿ ...ಅದರ ಎದೆಯ ಭಾಗವನ್ನು , ಹೊಟ್ಟೆಯನ್ನು ಕೊಯ್ದು ...ಅದರ "ತುಣುಕು "ಇಡುವ ಕೆಲಸ ನನ್ನದು , ವೈದ್ಯರು ಹೇಳಿದ ಹಾಗೆ .
ಕಡೆಗೆ ಕೂಡ ...ಅದನ್ನು ಸೇರಿಸಿ ಹೊಲೆಯಬೇಕು ನಾನು , ಪೇಟೆಯಲ್ಲಿ ಸಿಗುವ ಹಗ್ಗದಿಂದ .
ಬಿಗಿದು ಹೋದ ಮಾಂಸದಲ್ಲಿ , "ಸೂಜಿ " ಬರೋಲ್ಲ ಸ್ವಾಮಿ , ಅದಕ್ಕೆ ದೊಡ್ಡ "ದಬ್ಬಣ "ಬೇಕು .
ಎಂತಹ ಹಣೆಬರಹ ನೋಡಿ ನನ್ನದು " .
ಎಂದು ಅಲ್ಲೇ ಕುಸಿದು ಕುಳಿತಿದ್ದ ಆತ .
ಕಣ್ಣಲ್ಲಿ "ಧಾರಾಕಾರವಾಗಿ " ನೀರು ಹರಿದು ಹೋಗುತ್ತಿತ್ತು .
ಚಕ್ರವರ್ತಿ ಸಾಹೇಬರಿಗೆ ಕೂಡ , ಎಲ್ಲೋ ಮನಸಿಗೆ ತಾಗಿದ ಹಾಗಿತ್ತು ಮಾತು .
" ನೀರು ಏನಾದರೂ ಬೇಕ ಶಿವಪ್ಪ "ಎಂದು ಕೇಳಿದ್ದರು .
"ಗಂಡನಿಂದ "ಸುಟ್ಟು "ಕರಕಲು ಆದ ಹೆಂಗಸು , ಬೈಕ್ ಮೇಲಿಂದ ಬಿದ್ದ ಮಕ್ಕಳು...
ಸಾಲ ತೀರಿಸಲು ಆಗದ "ರೈತನ "ಶರೀರ .
ಈಜಲು ಹೋದ