Look for any podcast host, guest or anyone
Showing episodes and shows of

Vishweshwar Dixit

Shows

Secret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada GuttuFort Builders - ಕೋಟೆ ಕಟ್ಟುವರು - Kōṭe Kaṭṭuvaru👍 Like it? ...... ⁠⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠⁠📧 ⁠⁠⁠⁠⁠⁠⁠⁠⁠⁠⁠⁠⁠⁠Subscribe to our newsletterಕೋಟೆ ಕಟ್ಟುವರು ಒಂದು ಸ್ವ-ರಚಿತ ಕವನ ವಾಚನವಿಶ್ವೇಶ್ವರ ದೀಕ್ಷಿತಮುನ್ನುಡಿ:ತಾನು ಎನ್ನುವ ಅರಿವು ಜೀವದ ಕುರುಹು. ಅಮೀಬದಂಥ ಏಕಕೋಶ ಜೀವಿಯಿಂದ ಹಿಡಿದು, ಅತ್ಯಂತ ಸಂಕೀರ್ಣ ಮನುಷ್ಯನ ವರೆಗೂ, ತಾನು ಎನ್ನುವುದು ಬೇರೆ ಬೇರೆ ಸ್ತರದಲ್ಲಿ ಇದೆ. ಮನುಷ್ಯನಲ್ಲಿ ಅದು ಪರಾಕಾಷ್ಠತೆಗೆ ಏರಿದೆ. ಒಂದು ರೀತಿಯಲ್ಲಿ, ಅದು ಕರಾಳತೆಯ ಕಡೆಗೆ ಹೊರಳಿದೆ. ತನ್ನ ಬದುಕು ಉಳಿವಿಗಾಗಿ ಅಲ್ಲದೆ, ಪ್ರಾಣಿ ಪ್ರಾಣಿಗಳಲ್ಲಿ ಅಲ್ಲದೆ, ತಮ್ಮತಮ್ಮಲ್ಲೆ ಭೇದ ಭಾವಗಳನ್ನು ಕಲ್ಪಿಸಿಕೊಳ್ಳುತ್ತ, ಇತರರ ಜೀವನವನ್ನು ಹಾಳು ಮಾಡುವುದೆ ಗುರಿಯಾದಂತೆ ಕಾಣುತ್ತದೆ. ಪರರ ನಷ್ಟವೇ ತನ್ನ ಲಾಭ, ಪರರ ದುಃಖವೇ ತನ್ನ ಸುಖ, ಪರರ ಕ್ಷೋಭೆಯೆ ತನಗೆ ಶಾಂತಿ ಎನ್ನುವಂತಾಗಿದೆ. ಇದು ಹಿಂದಿನಿಂದಲೆ ಹತ್ತಿಕೊಂಡ ಪಿಡುಗು. "ಮನುಷ್ಯ ಜಾತಿ ತಾನೊಂದೆ ವಲಂ" ಎಂದ ಪಂಪನ ಮಾತನ್ನು ಯಾರೂ ಕೇಳಿಸಿಕೊಳ್ಳುವುದಿಲ್ಲ. ಆರು ಶತಮಾನಗಳ ನಂತರದ ಸರ್ವಜ್ಞನ ನುಡಿ "ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು, ಸುಡುವಗ್ನಿಯೊಂದೆ ಇರುತಿರಲು, ಕುಲಗೋತ್ರ ನಡುವೆ ಎತ್ತಣದು? ಸರ್ವಜ್ಞ."ಯಾರಿಗೂ ಕೇಳುವುದೆ ಇಲ್ಲ.ಅಸಮಾನತೆ ಇದ್ದಾಗಲೂ ಸಮಾನತೆಯಿಂದ ಬಾಳುವುದು ಮನುಷ್ಯತ್ವ ಎಂದಾದರೆ ಅದು ವಿರಳವಾಗಿದೆ. ಸಮಾನತೆ ಇದ್ದಾಗಲೂ ಅಸಮಾನತೆ ಕಲ್ಪಿಸಿಕೊಳ್ಳುವುದೆ ಈಗ ಮನುಷ್ಯನ ಕುರುಹಾಗಿದೆ. ವಿಚಿತ್ರವೆಂದರೆ, ಇಂಥ ಕರಾಳತೆಯನ್ನು ಮೀರುವ ಶಕ್ತಿ ಕೂಡ ಇರುವುದು ಮನುಷ್ಯನಲ್ಲಿಯೆ. ಹಾಗಾಗಿ, ಆಯ್ಕೆ ಮಾಡಿಕೊಳ್ಳಲು ಮನುಷ್ಯ ಸ್ವತಂತ್ರನೇ ಎಂದು ಪ್ರಶ್ನಿಸುವಂತಾಗಿದೆ.ಕೋಟೆ ಕಟ್ಟುವರು ಕಟ್ಟುವರು : ಮನೆ ಸುತ್ತ, ಮನ ಸುತ್ತ ಕಾಂಕ್ರೀಟು ಕಟ್ಟಿಗೆ ಉಸುಕು ಇಟ್ಟಿಗೆ ಅರಳು ಮರಳು ಏನೆಲ್ಲ ವಿಷಯಗಳ ಬೆರೆಸಿ ಕೋಟೆ ಕಟ್ಟುವರು. ಅದು ಇದು ಎಂದು ಗೆರೆ ಎಳೆಯುವರು; ನಾನು ನನ್ನವರೆಂದು, ನೀನು ನಿನ್ನವರೆಂದು ಗೋಡೆ ಕಟ್ಟುವರು. ಅವರು ಇವರೆಂದು ಕಂದಕ ತೋಡುವರು; ಒಳಗೆ ಹೊರಗೆಂದು ಪೊರೆ ಬೆಳೆಸಿಕೊಳ್ಳುವರು. ಕುಲ ಜಾತಿ ನೀತಿ ಎಂದು ಬೇರೆ ಎಣಿಸಿಕೊಳ್ಳುವರು; ಮತ ಪಂಥ ಎಂದು ಕವಲೊಡೆದುಕೊಳ್ಳುವರು. ಮನಸು ಮುಚ್ಚಿ ಕನಸಲ್ಲಿ ನನಸು ಕಟ್ಟುವರು. ಕಣ್ಣು ಮುಚ್ಚಿ ಇರವನ್ನೆ ಅಲ್ಲಗಳೆಯುವರು;ಕಟ್ಟಿ ಅರಳಿಸಿ ಆದರಿಸುವರು : ಏಳು ಸುತ್ತಿನ ಮಲ್ಲಿಗೆ, ಎಸಳು ಎಸಳಿನ ಗುಲಾಬಿ, ತಂಪು ಕಂಪಿನ ಸವಿಕುಡಿಕೆ; ಮಕರಂದ ಆನಂದ ಪಾನಕ್ಕೆ ಅತ್ಮೀಯ ಆಹ್ವಾನ; ಕೋಟೆ ಕಾವಲಿಗಲ್ಲ - ಕರೆದು ಆದರಿಸಲೆಂದು.ಕಟ್ಟಿ ಕೆಡವುವರು : ಎಳೆ ಎಳೆಯ ಸುತ್ತಿ, ಮೈ ಸುತ್ತ ಪೊರೆ ಬೆಳೆಸಿ, ಗೂಡಲ್ಲಿ ಗೂಢವಾಯಿತು ಧ್ಯಾನಸ್ಥ ಚಿಟ್ಟೆಮರಿ; ರೂಪಾಂತರದ ಚಮತ್ಕಾರ; ಜೀವ ಸಂತತ ಸಾಕ್ಷಾತ್ಕಾರ. ಕೋಟೆ ಕಾವಲಿಗಲ್ಲ‌ - ಹರಿದು ಹೊರಬರಲೆಂದು, ಮನ ತೆರೆದು ತೋರಿಸಲೆಂದು.ಆಯ್ಕೆ ನಮ್ಮದು.ನಿಮ್ಮವನೇ ಆದ, ವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, ನವಂಬರ್‌ ೧, ೨೦೨೫.ಕೋಟೆ ಕಟ್ಟುವರು.ಕವನ ಮತ್ತು ವಾಚನ: ವಿಶ್ವೇಶ್ವರ ದೀಕ್ಷಿತ.--------The Fort BuilderA self-composed poem readingVishweshwara DixitPreface:The awareness of self is the essence of life. From a single-celled organism like an amoeba to the most complex human being, self is at different levels. In man, it has risen to its peak. In a way, it has turned towards darkness. It seems that it is not just for its own survival, not just among animals,but among themselves; while imagining differences where they do not exist, it seems that it's aim is to ⁠... continued hereTherefore, it has become questionable whether man has freedom to choose.Poem: Fort Builders(They) build forts: Around the house, Around the mind Mixing concrete, wood, Sand and bricks, And all kinds of matters. Saying this and that They draw the lines; Saying I and mine, You and yours, They build walls. Saying those and these They dig ditches; Saying inside(rs) and ou
2025-11-0605 minThe Banter League2025-11-0557 minThe Banter League2025-10-301h 04The Banter League2025-10-221h 10The Banter League2025-10-1550 minThe Banter League2025-10-021h 08The Banter League2025-09-2548 minThe Banter League2025-09-171h 11The Banter League2025-09-1241 minThe Banter League2025-08-291h 00The Banter League2025-08-201h 00The Banter League2025-08-151h 14Secret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuನಮೋ ಎನ್ನಿರೇ ನಮೋ - You Say Hello, I say namO!👍 Like it? ...... ⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠📧 ⁠⁠⁠⁠⁠⁠⁠⁠⁠⁠⁠⁠⁠Subscribe to our newsletter⁠ದೂರವಾಣಿ "ಟ್ರಿನ್ ಟ್ರಿನ್" ಎಂದ ತಕ್ಷಣ "ಹಲೋ!" ಎನ್ನುವುದು ಸಾಮಾನ್ಯ. ಹಲೋ(ಹೆಲೋ hello) ಎಂದರೆ ಏನು? ಇದರ ಉತ್ಪತ್ತಿ ಹೇಗೆ? ಹಲೋ ಎನ್ನುವ ಶಬ್ದ ಬಳಕೆಯಲ್ಲಿ ಬಂದದ್ದು ಹೇಗೆ? ಇದನ್ನು ಕಂಡು ಹಿಡಿದವರು ಯಾರು? ಇದು ಅಚ್ಚಗನ್ನಡ ಪದವೆ? ಅಲ್ಲವಾದರೆ ಇದಕ್ಕೊಂದು ಅಚ್ಚಗನ್ನಡದ ಸಮಾನ ಪದ ಇದೆಯೆ? ಹೀಗೆ ಪ್ರಶ್ನೆಗಳನ್ನು ಕೇಳುತ್ತ ಹೋಗಬಹದು.Hello ಶಬ್ದದ ಹುಟ್ಟುಹಲೋ ಯಾವುದೋ ಲ್ಯಾಟಿನ್‌, ಗ್ರೀಕ್‌, ಅಥವಾ ಜರ್ಮನ್‌ ಮೂಲದ ಪದ ಇರಬೇಕು ಅಂದುಕೊಳ್ಳುವುದು ಸಹಜ. ಹೆಕ್ಕಿ ನೋಡಿದರೆ, ಇದು ಪ್ರಾಚೀನ ಶಬ್ದವೇನಲ್ಲ. ಟ್ರಿನ್ ಟ್ರಿನ್ ಎಂದು ಕರೆ ಗಂಟೆ ಹೊಡೆದುಕೊಳ್ಳುತ್ತಿರುವ ದೂರವಾಣಿಯನ್ನು ಎತ್ತಿಕೊಳ್ಳಲಾಗಿದೆ ಎಂದು ಸೂಚಿಸಲು ಆ ಕಡೆ ಫೋನ್ ಎತ್ತಿಕೊಂಡವರು ಹೇಳುವುದಕ್ಕೆ ಈ ಪದ ಹುಟ್ಟಿದ್ದು. ಟೆಲೆಫೋನ್ ಕಂಡು ಹಿಡಿದ ಅಲೆಕ್ಸ್ಯಾಂಡರ್ ಗ್ರಾಹಮ್ ಬೆಲ್ ಇದಕ್ಕೆ ಕಾರಣ ಎಂದುಕೊಳ್ಳುವುದು ಸಹಜ. ಆಶ್ಚರ್ಯವೆಂದರೆ ಇದನ್ನು ಪ್ರಚಲಿತಗೊಳಿಸಿದವ ಥಾಮಸ್ ಆಲ್ವಾ ಎಡಿಸನ್.ದೇಶದ ತುಂಬ ದೂರವಾಣಿ ಕೇಂದ್ರಗಳನ್ನು ಸ್ಥಾಪಿಸುವ ಹೊಣೆಯನ್ನು ಅಮೆರಿಕ ಸರಕಾರ ಎಡಿಸನ್‌ಗೆ ಕೊಟ್ಟಿತ್ತು. ತನ್ನ ಆ ಪ್ರಭಾವವನ್ನು ಉಪಯೋಗಿಸಿ ಎಡಿಸನ್ ಹಲೋ ಬಳಕೆಯನ್ನು ಕಡ್ಡಾಯಗೊಳಿಸಿದನು. ದೂರವಾಣಿ ಹೊತ್ತಿಗೆಗಳಲ್ಲಿ ಹಲೋ ಬಳಕೆಯನ್ನು ನಿಗದಿಸಿದನು.ಅಪರೇಟರುಗಳು ಹಲೋ ಅನ್ನುವುದು ಸಾಮಾನ್ಯವಾಯಿತು. ಅಂತೆಯೆ, ಮುಂಚಿನ ದೂರವಾಣಿ ಆಪರೇಟರುಗಳು "ಹಲೋ ಹುಡುಗಿಯರು" (hello girls)ಎಂದು ಹೆಸರಾಗಿದ್ದರು.೧೮೮೦ರಲ್ಲಿ ನಡೆದ ಟೆಲಿಫ಼ೋನ್ ಕಂಪನಿಗಳ ಮೊದಲ ಸಮಾವೇಶದಲ್ಲಿ ಇನ್ನೊಂದು ಪರಂಪರೆ ಹುಟ್ಟಿಕೊಂಡಿತು. ಪ್ರತಿನಿಧಿಗಳು ಎದೆಗೆ ಅಂಟಿಸಿಕೊಂಡ ಹೆಸರು ಚೀಟಿಗಳ ಮೇಲೆ "ಹಲೋ" ಎನ್ನುವ ಶಬ್ದ ದೊಡ್ಡದಾಗಿ ಇತ್ತು. ಈಗ ಯಾವ ಸಮ್ಮೇಳನ ಸಮಾವೇಶಗಳಲ್ಲು ಕಂಡುಬರುವುದು ಪರಿಚಿತ "ಹಲೋ, ನನ್ನ ಹೆಸರು ..."ದೂರವಾಣಿಯಲ್ಲಿ ಅಲ್ಲದೆ, ಎದುರುಗೊಂಡಾಗ ಕೂಡ, ಕೈ ಕುಲುಕುತ್ತ, ಹಲೋ ಎನ್ನಬಹುದು.ಹಲೋಗೆ ಸಮಾನ ಕನ್ನಡ ಪದ?ಇಂತಹ ಬಹೂಪಯೋಗಿ ಹಲೋಗೆ ಸಮಾನ ಶಬ್ದ ಬೇರೆ ಯಾವ ಭಾಷೆಯಲ್ಲಾದರು ಉಂಟೆ? ಸಂಸ್ಕೃತವೆ ಇದಕ್ಕೆ ಉತ್ತರ. ಅದು "ನಮಃ."ನಮಗೆ ಪರಿಚಿತವಿರುವ ’ನಮಸ್ಕಾರ’, ’ನಮಸ್ತೇ’ ಕೂಡ ’ನಮಃ’ದಿಂದೆ ಬಂದವುಗಳು. ಆದರೆ, ʼನಮಃʼ ದ ವಿಸರ್ಗ, ಕನ್ನಡಕ್ಕೆ ಅಷ್ಟೇ ಅಲ್ಲ, ಯಾವ ಇತರ ಭಾರತೀಯ ಭಾಷೆಗೂ ಒಗ್ಗುವುದಿಲ್ಲ. ಅದಕ್ಕೇ ʼತೇʼ, ʼಕಾರʼ ಗಳನ್ನು ಸೇರಿಸಿಕೊಂಡು ನಮಸ್ತೇ ನಮಸ್ಕಾರ ಅಂತ ಮಾಡಿಕೊಂಡಿರುವುದು.ಸಂಸ್ಕೃತದ ’ನಮಃ’ ಶಬ್ದದ ಒಂದು ರೂಪವಾದ ’ನಮೋ’, ಸಂಧಿ ಸಮಾಸಗಳ ಗೊಡವೆ ಇಲ್ಲದೆ, ಎಲ್ಲಡೆ ಬಳಸಬಹುದಾದ ಸೌಮ್ಯ ಪದ. ʼನಮʼ ದ ಕೊನೆಗೆ ಸೇರಿಕೊಂಡ ದೀರ್ಘ ಸ್ವರ ʼಓʼ (ನಮ+ಓ) ಸಂಬೋಧನಾತ್ಮಕ ನಮ್ರತೆಯ ಸೂಚಕ ಕೂಡ. ನಮೋ - a small word with a big heart - ಚಿಕ್ಕ, ಚೊಕ್ಕ, ಬಹೂಪಯೋಗಿ ಶಬ್ದ. ದೂರವಾಣಿ ಕರೆಯನ್ನು ಉತ್ತರಿಸಬಹುದು, ಎದುರುಗೊಂಡಾಗಲೂ ಹೇಳಬಹುದು. ಸ್ವಲ್ಪ ಎಳೆದು ನಮೋಽಽ ಎಂದರೆ ಸಾಕು, ಎಲ್ಲ ಸದ್ಭಾವಗಳೂ ಹೊಮ್ಮುವವು. ಹೀಗೆ ನಮೋ ಕೃತಕವಲ್ಲ - ಯಾರೂ ಅದನ್ನು ಹುಟ್ಟಿಸಲಿಲ್ಲ. ಇದು ಪುರಾತನ ದೇವವಾಣಿ.ನಮೋ ಎಂದು ಕಾಗದವನ್ನು ಪ್ರಾರಂಭಿಸಬಹುದು. ಮೇಲಾಗಿ, ಪತ್ರ ಮುಗಿಸಲೂ ನಮೋ ಹೇಳಬಹುದು.ಹಲೋ vs ನಮೋಸಂದರ್ಭ : ಬರವಣಿಗೆ ಅಥವಾ ಮಾತುಕತೆ ಆರಂಭದಲ್ಲಿ ಮಾತ್ರ ಹಲೋ ಬಳಸಬಹುದು ; ಆದರೆ "ನಮೋ" ಎಲ್ಲ ಸಂದರ್ಭಗಳಲ್ಲಿ ಹೊಂದಿಕೊಳ್ಳುತ್ತದೆ—ಆರಂಭ, ಅಂತ್ಯ, ವಿದಾಯ, ಸ್ವಾಗತ.ಆರೋಗ್ಯ : ಆರೋಗ್ಯದ ನೋಟದಿಂದಲೂ ʼನಮೋʼದ್ದೆ ಮೇಲುಗೈ! ಅಂದರೆ, ಕೈಜೋಡಿಸಿ ʼನಮೋʼ ಎನ್ನುತ್ತ ದೂರದಿಂದಲೆ ನಮಸ್ಕಾರ ಮಾಡಿದರಾಯ್ತು. ಹೆಲೋ ಹೇಳುತ್ತ ಬೇರೊಬ್ಬರನ್ನು ಮುಟ್ಟಿ ಕೈ ಕುಲುಕುವ ಅವಶ್ಯಕತೆ ಇಲ್ಲ. ವಿಶೇಷವಾಗಿ, ೨೦೨೦ರ ಕೋವಿಡ್‌ ವೈರಾಣು ಪ್ಯಾಂಡೆಮಿಕ್ ಸಮಯದಲ್ಲಿ ಇಂಥ ʼನಮೋ-ನಮಸ್ಕಾರʼ ಸಂಪ್ರದಾಯವನ್ನು ಅಳವಡಿಸಿಕೊಂಡಾಗ, ಮುಜುಗರ ಅಲ್ಲದೆ ಆಪತ್ತಿನಿಂದ ಜನರನ್ನು ಉಳಿಸಿದ್ದು ನಿಜ.ಭಾಷೆ : ಹಲೋ ವಿದೇಶಿ – ನಮೋ ಸ್ವದೇಶಿ. ಮೇಲಾಗಿ, ನಮೋ ಸಾಂಸ್ಕೃತಿಕ ಗುರುತ್ವ ಉಳ್ಳ, ಶುದ್ಧ ಭಾರತೀಯತೆಯ ಸಂಕೇತನೀವು ವಿಚಾರಿಸುತ್ತಿರುವುದು ಸರಿ. ಎದುರುಗೊಂಡಾಗ ಮತ್ತು ಸೇರುವಾಗ, ಕಾಗದ-ಪತ್ರ ಮತ್ತು ಇ-ಮೆಲ್ ಬರೆಯುವಾಗ ಮಾತ್ರವಲ್ಲ, ಬೀಳ್ಕೊಡುವಾಗ ಮತ್ತು ಅಗಲುವಾಗ ಕೂಡ ನಮೋ ಎನ್ನಬಹುದು. ವಿದಾಯ ಹೇಳಲು ಹಲೋ ಎನ್ನಬಹುದೆ? ಪತ್ರದ ಮುಕ್ತಾಯದಲ್ಲಿ ಹಲೋ ಬರೆಯಬಹುದೆ? ಸಾಧ್ಯವಿಲ್ಲ!ಹಲೋ ಕೂಡ ಕನ್ನಡ!ಎಡಿಸನ್‌ಗೆ ಸಂಸ್ಕೃತ ಭಾಷೆ ಪರಿಚಿತವಿತ್ತ
2025-08-0509 minSecret of Kannada ಕನ್ನಡದ ಗುಟ್ಟು Kannadada Guttu2025-05-2903 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಈತ ಸತ್ಯನಾರಾಯಣ! This is Satyanarayana! By Dr. Srinivasa Havanur👍 Like it? ...... ⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠📧 ⁠⁠⁠⁠⁠⁠⁠⁠⁠⁠⁠Subscribe to our newsletter[ಈ ಮಹತ್ವದ ಸಂಶೋಧನ ಲೇಖನವನ್ನು ಡಾ. ಶ್ರೀನಿವಾಸ ಹಾವನೂರರು ನನಗೆ ಹಲವಾರು ವರ್ಷಗಳ ಹಿಂದೆಯೆ ಕಳಿಸಿದ್ದರು. ಅಂದು ನಾನು ಹೊರತರುತ್ತಿದ್ದ "ಕನ್ನಡ ಕಲಿ" ಮ್ಯಗ್‌ಝೀನ್‌ನಲ್ಲಿ ಕಾರಣಾಂತರಗಳಿಂದ ಪ್ರಕಟಿಸಲಾಗಲಿಲ್ಲ. ಕಡತದಲ್ಲಿ, ಹುದುಗಿ ಹೋಗಿದ್ದ ಈ ಲೇಖನ ಮತ್ತೆ ಕೈಗೆ ಸಿಕ್ಕಿದೆ. ಸತ್ಯನಾರಾಯಣ ಅಂದರೆ ಯಾರು? ಉಳಿದ ನಾರಾಯಣರೆಲ್ಲ ಸುಳ್ಳು ದೇವರುಗಳೆ? ಈತ ವೇದ ಪುರಾಣಗಳಲ್ಲಿ ಇಲ್ಲ! ಹಾಗಾದರೆ ಈತ ಹುಟ್ಟಿಕೊಂಡದ್ದು ಹೇಗೆ? ಯಾವಾಗ? ನಿಜವೋ ಮೂಢ ನಂಬಿಕೆಯೋ, ಒಳ್ಳಯದೋ ಕೆಟ್ಟದ್ದೋ? ಈತ ವಿಷ್ಣುವೆ? ಕೋಟಿ ದೇವ-ದೇವತೆಗಳಲ್ಲಿ ಈತನ ಸ್ಥಾನ ಯಾವುದು? ಈತನ ಜನಪ್ರಿಯತೆಯ ಗುಟ್ಟೇನು? ಹೀಗೆ, ಹಾವನೂರರು ಈ ಲೇಖನದಲ್ಲಿ ಸತ್ಯನಾರಾಯಣನ ಸತ್ಯಾಸತ್ಯತೆಯನ್ನೆ ಕೆದಕಿ ನೋಡಿದ್ದಾರೆ. ಎಲ್ಲಿಯ ವರೆಗೆ ಸತ್ಯನಾರಾಯಣನ ಪೂಜೆ ನಡೆಯುತ್ತದೋ ಅಲ್ಲಿಯ ವರೆಗೆ ಈ ಲೇಖನ ಪ್ರಸ್ತುತವೆ. ಹಾಗಾಗಿ, ಇದನ್ನು ಸಂಕೋಚವಿಲ್ಲದೆ ಇಂದು ನಿಮ್ಮ ಮುಂದೆ ಇಡುತ್ತಿದ್ದೇನೆ. - ವಿಶ್ವೇಶ್ವರ ದೀಕ್ಷಿತ ]ಪೂರ್ತಿ ಲೇಖನವನ್ನು ಇಲ್ಲಿ ಓದಿ: https://kannadakali.com/article/culture/satyanarayana.html 0:00 ಆರಂಭ0:10 ಮುಮ್ಮಾತು01:50.0 ದೇವ ದೇವತೆಗಳ ಪೈಪೋಟಿ06:42.5 ದೇವ‌ ಒಬ್ಬ; ನಾಮ ಹಲವು 40:42.5 ಉಪದೇವತೆಗಳಿಗೇ ಉಪಚಾರ04:39.0 ರೇವಾಖಂಡದ ಅರೆ ಸತ್ಯ06:04.0 ಸತ್ಯನಾರಾಯಣನ ಹುಟ್ಟು ಎಂದು?06:34.0 ಪುರಾಣ ಕಾಲವೆ?59:18.5 ಮಧ್ಯ ಕಾಲೀನವೆ?04:42.5 ಇತ್ತೀಚೆ, ಎರಡು ಶತಮಾನಗಳ ಹಿಂದೆಯೆ?10:48.0 ಡಾ| ಡಿ. ಡಿ. ಕೋಸಂಬಿ ಏನು ಹೇಳುತ್ತಾರೆ?54:42.5 ನಿಜವೋ? ಪ್ರಾಮಾಣಿಕವೋ?13:29.0 ಸತ್ಯನಾರಾಯಣ ಪ್ರಸಾದ43:42.5 ಸತ್ಯನಾರಾಯಣ = ವಿಷ್ಣು?45:42.5 ಪೂಜೆಯ ಸಾರ್ವತ್ರಿಕತೆ31:42.5 ಪೂಜೆ: ಅಂದು - ಇಂದು
2025-05-0517 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಕಂತು ೩: ಭಜ ಗೋವಿಂದಂ (ಮೋಹಮುದ್ಗರ) Bhaja Govindam - ಆದಿ ಶಂಕರ ಮತ್ತು ಶಿಷ್ಯರು👍 Like it? ...... ⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠📧 ⁠⁠⁠⁠⁠⁠⁠⁠⁠⁠Subscribe to our newsletter⁠"ಭಜ ಗೋವಿಂದಂ" ಎಂದೇ ಪ್ರಸಿದ್ಧವಾದ, ಆದಿ ಶಂಕರ ರಚಿತ "ಮೋಹಮುದ್ಗರ", ‌ ಮಾಯೆಯ ನೆತ್ತಿಗೆ ನೇರ ಗದಾಪ್ರಹಾರ ಮಾಡಿ ನಮ್ಮ ನಿಜ‌ ಸ್ವರೂಪದತ್ತ ದಾರಿ ತೋರಿಸುವ ಕೃತಿ. ಬಾಳಿನ ಗುರಿ ಏನು? ಗಳಿಕೆಯ ಆಸೆ ಏಕೆ? ಸತ್ಯ ಯಾವುದು, ಮಿಥ್ಯೆ ಯಾವುದು? ಪ್ರಾಪಂಚಿಕ ಹೊರ ತಿಳಿವೋ, ತನ್ನ ಒಳ ತಿಳಿವೋ? ಇವೆಲ್ಲವನ್ನೂ ನೇರವಾಗಿ ಉತ್ತರಿಸುತ್ತ ಶಂಕರರು, ಸಂಸಾರದ ಪೊಳ್ಳುತನ, ಮನುಷ್ಯನ ಡಂಬಾಚಾರ, ವ್ಯರ್ಥ ಹೋರಾಟಗಳನ್ನು ಬಯಲಿಗೆ ಎಳೆಯುತ್ತಾರೆ. ನೈಜವನ್ನು ಕಂಡುಕೊಳ್ಳಲು ಅನುಸರಿಸಬೇಕಾದ ವೇದಾಂತ ತತ್ವಗಳನ್ನು ಇಲ್ಲಿ ಬಿಗಿಯಾಗಿ ಹೆಣೆದಿದ್ದಾರೆ. ಪಲ್ಲವಿ ಎಂದು ಗಣಿಸಲಾದ ಮೊದಲ ನುಡಿ ಮತ್ತು ಮುಂದಿನ ಹನ್ನೆರಡು ನುಡಿಗಳನ್ನು ಸ್ವತಃ ಶಂಕರರು ರಚಿಸಿದ್ದಾರೆ. ಇವನ್ನು "ದ್ವಾದಶ ಮಂಜರಿಕಾ ಸ್ತೋತ್ರ" (ಹನ್ನೆರಡು ಹೂಗಳ ಗೊಂಚಲು) ಎಂದು ಗುರುತಿಸಲಾಗಿದೆ. ಇವುಗಳಿಂದ ಸ್ಫೂರ್ತಿಗೊಂಡ ಅವರ ಹದಿನಾಲ್ಕು ಶಿಷ್ಯರು ಒಂದೊಂದು ನುಡಿಗಳನ್ನು ಸೇರಿಸಿದರು; ಅದೇ ಚತುರ್ದಶ ಮಂಜರಿಕಾ ಸ್ತೋತ್ರ. ಮತ್ತೆ ನಾಲ್ಕು ನುಡಿಗಳನ್ನು ಶಂಕರರು ರಚಿಸಿ ಒಟ್ಟು ೩೧ ನುಡಿಗಳ ಮೋಹ ಮುದ್ಗರವನ್ನು ಪೂರ್ತಿಗೊಳಿಸಿದರು.ಇದರ ಸರಳ ಕನ್ನಡ ಅನುವಾದ ಇಲ್ಲಿದೆ ಪದ್ಯರೂಪದಲ್ಲಿ.ಕಂತು ೧: ನುಡಿ ೧ – ೧೩, ಪಲ್ಲವಿಯೊಡನೆ ಹನ್ನೆರಡು ಹೂಗಳ ಗೊಂಚಲುಕಂತು ೨: ನುಡಿ ೧೪ – ೨೭ಚತುರ್ದಶ ಮಂಜರಿಕಾಕಂತು ೩: ನುಡಿ ೨೮ – ೩೧ಕಂತು ೩ ಉಪಸಂಹಾರಕನ್ನಡಕ್ಕೆ: ನೆನೆ ಗೋವಿಂದನ, ವಿಶ್ವೇಶ್ವರ ದೀಕ್ಷಿತ----ಕೆಲವರು ಕೆಲವು ಪದಗಳ ಅನುವಾದದ ಬಗ್ಗೆ ಕೇಳಿದ್ದೀರಿ. ನನ್ನ ವಿಚಾರ ಹೀಗಿದೆ:ಡುಕೃಂಕರಣೇ:ಸಾಮಾನ್ಯವಾಗಿ ಇದನ್ನು (ಇಡಿಯ) ವ್ಯಾಕರಣ ಎಂದು ತಿಳಿಯಲಾಗಿದೆ. ಭಾಷೆ, ಆಲೋಚನೆಗಳು ಮತ್ತು ಜ್ಞಾನವನ್ನು ಹಿಡಿದಿಡುವ ಮತ್ತು ಸಂವಹಿಸುವ ಸಾಧನವಾದರೆ, ವ್ಯಾಕರಣವು ಹಾಗೆ ಮಾಡಲು ಒಂದು ಚೌಕಟ್ಟು ಮತ್ತು ನಿಯಮಗಳನ್ನು ಒದಗಿಸುತ್ತದೆ. ಆದಾಗ್ಯೂ ನಿಯಮಗಳೇ ನಿಜವಾದ ಜ್ಞಾನವಲ್ಲ. ಜ್ಞಾನ ಸಂವಹನೆಗೆ ಅಗತ್ಯವಿದ್ದರೂ ವ್ಯಾಕರಣವೇ (syntax)ಗುರಿಯಲ್ಲ. ವ್ಯಾಕರಣ (syntax)ಮೇಲ್ಮೈ ಜ್ಞಾನವಾದರೆ, ಅರ್ಥ (symantics)ಆಂತರಿಕ ನೈಜ ಜ್ಞಾನವಾಗಿದೆ. ರೂಪ(form)ವನ್ನೆ ಸ್ವರೂಪ(substance)ಎಂದು ತಿಳಿಯುವುದು ಮೌಢ್ಯ. ಶಂಕರರು, "ಭಜ ಗೋವಿಂದಂ" ರಚನೆಯ ಉದ್ದಕ್ಕೂ, ಆಚರಣೆಗಳು, ಭೌತಿಕತೆ, ನಡವಳಿಕೆಗಳು, ಮತ್ತು ಜೀವನ ನಿಯಮಗಳು ಎಲ್ಲವನ್ನೂ ಮೀರಿ, ಅವುಗಳ ಟೊಳ್ಳುತನವನ್ನು ಕಂಡು, ನಮ್ಮ ನೈಜ ಸ್ವರೂಪವನ್ನು ಅರಿತುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳುತ್ತಾರೆ. ಆ ಭಾವದಲ್ಲಿ, "ಒಳ ತಿಳಿವು" ಆಂತರಿಕ ಮತ್ತು ನಿಜವಾದ ಜ್ಞಾನವಾದರೆ "ಡುಕೃಂಕರಣೆ"ಯನ್ನು "ಹೊರ ತಿಳಿವು" ಎಂದು ಅನುವಾದಿಸಿದ್ದೇನೆ.ಈ ಕೆಲವು ಕೊಂಡಿಗಳು ತಿಳಿದುಕೊಳ್ಳಲು ಸಹಕಾರಿಯಾಗಬಹುದು:⁠https://nivedita2015.wordpress.com/2015/09/25/grammatical-aspects-in-bhaja-govindam-verse-1/⁠⁠https://www.reddit.com/r/sanskrit/comments/5z3e1m/translating_dukrjkarane_any_hints/⁠ಮೂಢಮತೇ: ಇದಕ್ಕೆ ಕೆಲವರು "ಮಂದಮತಿ" ಅಥವ ಕೇವಲ "ಮನವೇ" ಎನ್ನಬಹುದಲ್ಲ ಎಂದಿದ್ದಾರೆ. ಮೊದಲನೆಯದಾಗಿ, ಇಲ್ಲಿ ಮೂಢ ಎನ್ನುವುದಕ್ಕೆ ಅಜ್ಞ/ತಿಳಿಗೇಡಿ ಎನ್ನುವ ಸಾಮಾನ್ಯ ಅರ್ಥ ಇದೆ. ಭ್ರಮೆಗೊಳಗಾದವ, ಮರುಳ, ಮಂಕು ಹಿಡಿದವ ಎನ್ನುವದು ಇಲ್ಲಿ ಔಚಿತ್ಯಪೂರ್ಣವಾಗಿದೆ. ಅಂದರೆ ಮಾಯೆಯ ಜಾಲದಲ್ಲಿ ಸಿಕ್ಕು, ತನ್ನ ನಿಜ ಸ್ವರೂಪವನ್ನು ಅರಿಯದೆ, ಬೇರೆಯದಕ್ಕೆ ತಾ ಎಂದು ಅಂಟಿಕೊಂಡಿರುವವ ಎನ್ನುವುದು ಶಂಕರರ ತಾತ್ವಿಕ ವಿಚಾರಕ್ಕೆ ಹೊಂದಿಕೆಯಾಗುತ್ತದೆ. "ಮತಿ" ಎಂದರೆ ವಿವೇಚನೆಯ ಶಕ್ತಿ ಉಳ್ಳದ್ದು; ಮನಸ್ಸು ಎನ್ನುವುದಕ್ಕಿಂತ ವಿಶಿಷ್ಟವಾದದ್ದು. ವಿವೇಕ ಚೂಡಾಮಣಿಯ ಕರ್ತೃ ಆದ ಶಂಕರರು ಇದನ್ನು ಉದ್ದೇಶಪೂರ್ವಕ ಉಪಯೋಗಿಸಿದ್ದಾರೆ. ಆದ್ದರಿಂದ ಇದನ್ನು "ಮನ" ಎಂದು ಬದಲಾಯಿಸುವುದು ತಕ
2025-02-2605 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಕಂತು 2: ಭಜ ಗೋವಿಂದಂ (ಮೋಹಮುದ್ಗರ) Bhaja Govindam - ಆದಿ ಶಂಕರ ಮತ್ತು ಶಿಷ್ಯರು👍 Like it? ...... ⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠📧 ⁠⁠⁠⁠⁠⁠⁠⁠⁠⁠Subscribe to our newsletter⁠"ಭಜ ಗೋವಿಂದಂ" ಎಂದೇ ಪ್ರಸಿದ್ಧವಾದ, ಆದಿ ಶಂಕರ ರಚಿತ "ಮೋಹಮುದ್ಗರ", ‌ ಮಾಯೆಯ ನೆತ್ತಿಗೆ ನೇರ ಗದಾಪ್ರಹಾರ ಮಾಡಿ ನಮ್ಮ ನಿಜ‌ ಸ್ವರೂಪದತ್ತ ದಾರಿ ತೋರಿಸುವ ಕೃತಿ. ಬಾಳಿನ ಗುರಿ ಏನು? ಗಳಿಕೆಯ ಆಸೆ ಏಕೆ? ಸತ್ಯ ಯಾವುದು, ಮಿಥ್ಯೆ ಯಾವುದು? ಪ್ರಾಪಂಚಿಕ ಹೊರ ತಿಳಿವೋ, ತನ್ನ ಒಳ ತಿಳಿವೋ? ಇವೆಲ್ಲವನ್ನೂ ನೇರವಾಗಿ ಉತ್ತರಿಸುತ್ತ ಶಂಕರರು, ಸಂಸಾರದ ಪೊಳ್ಳುತನ, ಮನುಷ್ಯನ ಡಂಬಾಚಾರ, ವ್ಯರ್ಥ ಹೋರಾಟಗಳನ್ನು ಬಯಲಿಗೆ ಎಳೆಯುತ್ತಾರೆ. ನೈಜವನ್ನು ಕಂಡುಕೊಳ್ಳಲು ಅನುಸರಿಸಬೇಕಾದ ವೇದಾಂತ ತತ್ವಗಳನ್ನು ಇಲ್ಲಿ ಬಿಗಿಯಾಗಿ ಹೆಣೆದಿದ್ದಾರೆ. ಪಲ್ಲವಿ ಎಂದು ಗಣಿಸಲಾದ ಮೊದಲ ನುಡಿ ಮತ್ತು ಮುಂದಿನ ಹನ್ನೆರಡು ನುಡಿಗಳನ್ನು ಸ್ವತಃ ಶಂಕರರು ರಚಿಸಿದ್ದಾರೆ. ಇವನ್ನು "ದ್ವಾದಶ ಮಂಜರಿಕಾ ಸ್ತೋತ್ರ" (ಹನ್ನೆರಡು ಹೂಗಳ ಗೊಂಚಲು) ಎಂದು ಗುರುತಿಸಲಾಗಿದೆ. ಇವುಗಳಿಂದ ಸ್ಫೂರ್ತಿಗೊಂಡ ಅವರ ಹದಿನಾಲ್ಕು ಶಿಷ್ಯರು ಒಂದೊಂದು ನುಡಿಗಳನ್ನು ಸೇರಿಸಿದರು; ಅದೇ ಚತುರ್ದಶ ಮಂಜರಿಕಾ ಸ್ತೋತ್ರ. ಮತ್ತೆ ನಾಲ್ಕು ನುಡಿಗಳನ್ನು ಶಂಕರರು ರಚಿಸಿ ಒಟ್ಟು ೩೧ ನುಡಿಗಳ ಮೋಹ ಮುದ್ಗರವನ್ನು ಪೂರ್ತಿಗೊಳಿಸಿದರು.ಇದರ ಸರಳ ಕನ್ನಡ ಅನುವಾದ ಇಲ್ಲಿದೆ ಪದ್ಯರೂಪದಲ್ಲಿ.ಕಂತು ೧: ನುಡಿ ೧ – ೧೩, ಪಲ್ಲವಿಯೊಡನೆ ಹನ್ನೆರಡು ಹೂಗಳ ಗೊಂಚಲುಕಂತು ೨: ನುಡಿ ೧೪ – ೨೭ಚತುರ್ದಶ ಮಂಜರಿಕಾಕಂತು ೩: ನುಡಿ ೨೮ – ೩೧ಉಪಸಂಹಾರಕನ್ನಡಕ್ಕೆನೆನೆ ಗೋವಿಂದನವಿಶ್ವೇಶ್ವರ ದೀಕ್ಷಿತ----ಕೆಲವರು ಕೆಲವು ಪದಗಳ ಅನುವಾದದ ಬಗ್ಗೆ ಕೇಳಿದ್ದೀರಿ. ನನ್ನ ವಿಚಾರ ಹೀಗಿದೆ:ಡುಕೃಂಕರಣೇ:ಸಾಮಾನ್ಯವಾಗಿ ಇದನ್ನು (ಇಡಿಯ) ವ್ಯಾಕರಣ ಎಂದು ತಿಳಿಯಲಾಗಿದೆ. ಭಾಷೆ, ಆಲೋಚನೆಗಳು ಮತ್ತು ಜ್ಞಾನವನ್ನು ಹಿಡಿದಿಡುವ ಮತ್ತು ಸಂವಹಿಸುವ ಸಾಧನವಾದರೆ, ವ್ಯಾಕರಣವು ಹಾಗೆ ಮಾಡಲು ಒಂದು ಚೌಕಟ್ಟು ಮತ್ತು ನಿಯಮಗಳನ್ನು ಒದಗಿಸುತ್ತದೆ. ಆದಾಗ್ಯೂ ನಿಯಮಗಳೇ ನಿಜವಾದ ಜ್ಞಾನವಲ್ಲ. ಜ್ಞಾನ ಸಂವಹನೆಗೆ ಅಗತ್ಯವಿದ್ದರೂ ವ್ಯಾಕರಣವೇ (syntax)ಗುರಿಯಲ್ಲ. ವ್ಯಾಕರಣ (syntax)ಮೇಲ್ಮೈ ಜ್ಞಾನವಾದರೆ, ಅರ್ಥ (symantics)ಆಂತರಿಕ ನೈಜ ಜ್ಞಾನವಾಗಿದೆ. ರೂಪ(form)ವನ್ನೆ ಸ್ವರೂಪ(substance)ಎಂದು ತಿಳಿಯುವುದು ಮೌಢ್ಯ. ಶಂಕರರು, "ಭಜ ಗೋವಿಂದಂ" ರಚನೆಯ ಉದ್ದಕ್ಕೂ, ಆಚರಣೆಗಳು, ಭೌತಿಕತೆ, ನಡವಳಿಕೆಗಳು, ಮತ್ತು ಜೀವನ ನಿಯಮಗಳು ಎಲ್ಲವನ್ನೂ ಮೀರಿ, ಅವುಗಳ ಟೊಳ್ಳುತನವನ್ನು ಕಂಡು, ನಮ್ಮ ನೈಜ ಸ್ವರೂಪವನ್ನು ಅರಿತುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳುತ್ತಾರೆ. ಆ ಭಾವದಲ್ಲಿ, "ಒಳ ತಿಳಿವು" ಆಂತರಿಕ ಮತ್ತು ನಿಜವಾದ ಜ್ಞಾನವಾದರೆ "ಡುಕೃಂಕರಣೆ"ಯನ್ನು "ಹೊರ ತಿಳಿವು" ಎಂದು ಅನುವಾದಿಸಿದ್ದೇನೆ.ಈ ಕೆಲವು ಕೊಂಡಿಗಳು ತಿಳಿದುಕೊಳ್ಳಲು ಸಹಕಾರಿಯಾಗಬಹುದು:⁠https://nivedita2015.wordpress.com/2015/09/25/grammatical-aspects-in-bhaja-govindam-verse-1/⁠⁠https://www.reddit.com/r/sanskrit/comments/5z3e1m/translating_dukrjkarane_any_hints/⁠ಮೂಢಮತೇ: ಇದಕ್ಕೆ ಕೆಲವರು "ಮಂದಮತಿ" ಅಥವ ಕೇವಲ "ಮನವೇ" ಎನ್ನಬಹುದಲ್ಲ ಎಂದಿದ್ದಾರೆ. ಮೊದಲನೆಯದಾಗಿ, ಇಲ್ಲಿ ಮೂಢ ಎನ್ನುವುದಕ್ಕೆ ಅಜ್ಞ/ತಿಳಿಗೇಡಿ ಎನ್ನುವ ಸಾಮಾನ್ಯ ಅರ್ಥ ಇದೆ. ಭ್ರಮೆಗೊಳಗಾದವ, ಮರುಳ, ಮಂಕು ಹಿಡಿದವ ಎನ್ನುವದು ಇಲ್ಲಿ ಔಚಿತ್ಯಪೂರ್ಣವಾಗಿದೆ. ಅಂದರೆ ಮಾಯೆಯ ಜಾಲದಲ್ಲಿ ಸಿಕ್ಕು, ತನ್ನ ನಿಜ ಸ್ವರೂಪವನ್ನು ಅರಿಯದೆ, ಬೇರೆಯದಕ್ಕೆ ತಾ ಎಂದು ಅಂಟಿಕೊಂಡಿರುವವ ಎನ್ನುವುದು ಶಂಕರರ ತಾತ್ವಿಕ ವಿಚಾರಕ್ಕೆ ಹೊಂದಿಕೆಯಾಗುತ್ತದೆ. "ಮತಿ" ಎಂದರೆ ವಿವೇಚನೆಯ ಶಕ್ತಿ ಉಳ್ಳದ್ದು; ಮನಸ್ಸು ಎನ್ನುವುದಕ್ಕಿಂತ ವಿಶಿಷ್ಟವಾದದ್ದು. ವಿವೇಕ ಚೂಡಾಮಣಿಯ ಕರ್ತೃ ಆದ ಶಂಕರರು ಇದನ್ನು ಉದ್ದೇಶಪೂರ್ವಕ ಉಪಯೋಗಿಸಿದ್ದಾರೆ. ಆದ್ದರಿಂದ ಇದನ್ನು "ಮನ" ಎಂದು ಬದಲಾಯಿಸುವುದು ತಕ್ಕುದಲ್ಲ ಎನಿಸುತ್ತದೆ. ಮೇಲ
2025-02-2612 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಕಂತು ೧: ಭಜ ಗೋವಿಂದಂ (ಮೋಹಮುದ್ಗರ) Bhaja Govindam - ಆದಿ ಶಂಕರ ಮತ್ತು ಶಿಷ್ಯರು👍 Like it? ...... ⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠📧 ⁠⁠⁠⁠⁠⁠⁠⁠⁠Subscribe to our newsletter"ಭಜ ಗೋವಿಂದಂ" ಎಂದೇ ಪ್ರಸಿದ್ಧವಾದ, ಆದಿ ಶಂಕರ ರಚಿತ "ಮೋಹಮುದ್ಗರ", ‌ ಮಾಯೆಯ ನೆತ್ತಿಗೆ ನೇರ ಗದಾಪ್ರಹಾರ ಮಾಡಿ ನಮ್ಮ ನಿಜ‌ ಸ್ವರೂಪದತ್ತ ದಾರಿ ತೋರಿಸುವ ಕೃತಿ. ಬಾಳಿನ ಗುರಿ ಏನು? ಗಳಿಕೆಯ ಆಸೆ ಏಕೆ? ಸತ್ಯ ಯಾವುದು, ಮಿಥ್ಯೆ ಯಾವುದು? ಪ್ರಾಪಂಚಿಕ ಹೊರ ತಿಳಿವೋ, ತನ್ನ ಒಳ ತಿಳಿವೋ? ಇವೆಲ್ಲವನ್ನೂ ನೇರವಾಗಿ ಉತ್ತರಿಸುತ್ತ ಶಂಕರರು, ಸಂಸಾರದ ಪೊಳ್ಳುತನ, ಮನುಷ್ಯನ ಡಂಬಾಚಾರ, ವ್ಯರ್ಥ ಹೋರಾಟಗಳನ್ನು ಬಯಲಿಗೆ ಎಳೆಯುತ್ತಾರೆ. ನೈಜವನ್ನು ಕಂಡುಕೊಳ್ಳಲು ಅನುಸರಿಸಬೇಕಾದ ವೇದಾಂತ ತತ್ವಗಳನ್ನು ಇಲ್ಲಿ ಬಿಗಿಯಾಗಿ ಹೆಣೆದಿದ್ದಾರೆ. ಪಲ್ಲವಿ ಎಂದು ಗಣಿಸಲಾದ ಮೊದಲ ನುಡಿ ಮತ್ತು ಮುಂದಿನ ಹನ್ನೆರಡು ನುಡಿಗಳನ್ನು ಸ್ವತಃ ಶಂಕರರು ರಚಿಸಿದ್ದಾರೆ. ಇವನ್ನು "ದ್ವಾದಶ ಮಂಜರಿಕಾ ಸ್ತೋತ್ರ" (ಹನ್ನೆರಡು ಹೂಗಳ ಗೊಂಚಲು) ಎಂದು ಗುರುತಿಸಲಾಗಿದೆ. ಇವುಗಳಿಂದ ಸ್ಫೂರ್ತಿಗೊಂಡ ಅವರ ಹದಿನಾಲ್ಕು ಶಿಷ್ಯರು ಒಂದೊಂದು ನುಡಿಗಳನ್ನು ಸೇರಿಸಿದರು; ಅದೇ ಚತುರ್ದಶ ಮಂಜರಿಕಾ ಸ್ತೋತ್ರ. ಮತ್ತೆ ನಾಲ್ಕು ನುಡಿಗಳನ್ನು ಶಂಕರರು ರಚಿಸಿ ಒಟ್ಟು ೩೧ ನುಡಿಗಳ ಮೋಹ ಮುದ್ಗರವನ್ನು ಪೂರ್ತಿಗೊಳಿಸಿದರು.ಇದರ ಸರಳ ಕನ್ನಡ ಅನುವಾದ ಇಲ್ಲಿದೆ ಪದ್ಯರೂಪದಲ್ಲಿ.ಕಂತು ೧: ನುಡಿ ೧ – ೧೩, ಪಲ್ಲವಿಯೊಡನೆ ಹನ್ನೆರಡು ಹೂಗಳ ಗೊಂಚಲುಕಂತು ೨: ನುಡಿ ೧೪ – ೨೭ಚತುರ್ದಶ ಮಂಜರಿಕಾಕಂತು ೩: ನುಡಿ ೨೮ – ೩೧ಉಪಸಂಹಾರಕನ್ನಡಕ್ಕೆನೆನೆ ಗೋವಿಂದನವಿಶ್ವೇಶ್ವರ ದೀಕ್ಷಿತ----ಕೆಲವರು ಕೆಲವು ಪದಗಳ ಅನುವಾದದ ಬಗ್ಗೆ ಕೇಳಿದ್ದೀರಿ. ನನ್ನ ವಿಚಾರ ಹೀಗಿದೆ:ಡುಕೃಂಕರಣೇ:ಸಾಮಾನ್ಯವಾಗಿ ಇದನ್ನು (ಇಡಿಯ) ವ್ಯಾಕರಣ ಎಂದು ತಿಳಿಯಲಾಗಿದೆ. ಭಾಷೆ, ಆಲೋಚನೆಗಳು ಮತ್ತು ಜ್ಞಾನವನ್ನು ಹಿಡಿದಿಡುವ ಮತ್ತು ಸಂವಹಿಸುವ ಸಾಧನವಾದರೆ, ವ್ಯಾಕರಣವು ಹಾಗೆ ಮಾಡಲು ಒಂದು ಚೌಕಟ್ಟು ಮತ್ತು ನಿಯಮಗಳನ್ನು ಒದಗಿಸುತ್ತದೆ. ಆದಾಗ್ಯೂ ನಿಯಮಗಳೇ ನಿಜವಾದ ಜ್ಞಾನವಲ್ಲ. ಜ್ಞಾನ ಸಂವಹನೆಗೆ ಅಗತ್ಯವಿದ್ದರೂ ವ್ಯಾಕರಣವೇ (syntax)ಗುರಿಯಲ್ಲ. ವ್ಯಾಕರಣ (syntax)ಮೇಲ್ಮೈ ಜ್ಞಾನವಾದರೆ, ಅರ್ಥ (symantics)ಆಂತರಿಕ ನೈಜ ಜ್ಞಾನವಾಗಿದೆ. ರೂಪ(form)ವನ್ನೆ ಸ್ವರೂಪ(substance)ಎಂದು ತಿಳಿಯುವುದು ಮೌಢ್ಯ. ಶಂಕರರು, "ಭಜ ಗೋವಿಂದಂ" ರಚನೆಯ ಉದ್ದಕ್ಕೂ, ಆಚರಣೆಗಳು, ಭೌತಿಕತೆ, ನಡವಳಿಕೆಗಳು, ಮತ್ತು ಜೀವನ ನಿಯಮಗಳು ಎಲ್ಲವನ್ನೂ ಮೀರಿ, ಅವುಗಳ ಟೊಳ್ಳುತನವನ್ನು ಕಂಡು, ನಮ್ಮ ನೈಜ ಸ್ವರೂಪವನ್ನು ಅರಿತುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳುತ್ತಾರೆ. ಆ ಭಾವದಲ್ಲಿ, "ಒಳ ತಿಳಿವು" ಆಂತರಿಕ ಮತ್ತು ನಿಜವಾದ ಜ್ಞಾನವಾದರೆ "ಡುಕೃಂಕರಣೆ"ಯನ್ನು "ಹೊರ ತಿಳಿವು" ಎಂದು ಅನುವಾದಿಸಿದ್ದೇನೆ.ಈ ಕೆಲವು ಕೊಂಡಿಗಳು ತಿಳಿದುಕೊಳ್ಳಲು ಸಹಕಾರಿಯಾಗಬಹುದು:https://nivedita2015.wordpress.com/2015/09/25/grammatical-aspects-in-bhaja-govindam-verse-1/https://www.reddit.com/r/sanskrit/comments/5z3e1m/translating_dukrjkarane_any_hints/ಮೂಢಮತೇ: ಇದಕ್ಕೆ ಕೆಲವರು "ಮಂದಮತಿ" ಅಥವ ಕೇವಲ "ಮನವೇ" ಎನ್ನಬಹುದಲ್ಲ ಎಂದಿದ್ದಾರೆ. ಮೊದಲನೆಯದಾಗಿ, ಇಲ್ಲಿ ಮೂಢ ಎನ್ನುವುದಕ್ಕೆ ಅಜ್ಞ/ತಿಳಿಗೇಡಿ ಎನ್ನುವ ಸಾಮಾನ್ಯ ಅರ್ಥ ಇದೆ. ಭ್ರಮೆಗೊಳಗಾದವ, ಮರುಳ, ಮಂಕು ಹಿಡಿದವ ಎನ್ನುವದು ಇಲ್ಲಿ ಔಚಿತ್ಯಪೂರ್ಣವಾಗಿದೆ. ಅಂದರೆ ಮಾಯೆಯ ಜಾಲದಲ್ಲಿ ಸಿಕ್ಕು, ತನ್ನ ನಿಜ ಸ್ವರೂಪವನ್ನು ಅರಿಯದೆ, ಬೇರೆಯದಕ್ಕೆ ತಾ ಎಂದು ಅಂಟಿಕೊಂಡಿರುವವ ಎನ್ನುವುದು ಶಂಕರರ ತಾತ್ವಿಕ ವಿಚಾರಕ್ಕೆ ಹೊಂದಿಕೆಯಾಗುತ್ತದೆ. "ಮತಿ" ಎಂದರೆ ವಿವೇಚನೆಯ ಶಕ್ತಿ ಉಳ್ಳದ್ದು; ಮನಸ್ಸು ಎನ್ನುವುದಕ್ಕಿಂತ ವಿಶಿಷ್ಟವಾದದ್ದು. ವಿವೇಕ ಚೂಡಾಮಣಿಯ ಕರ್ತೃ ಆದ ಶಂಕರರು ಇದನ್ನು ಉದ್ದೇಶಪೂರ್ವಕ ಉಪಯೋಗಿಸಿದ್ದಾರೆ. ಆದ್ದರಿಂದ ಇದನ್ನು "ಮನ" ಎಂದು ಬದಲಾಯಿಸುವುದು ತಕ್ಕುದಲ್ಲ ಎನಿಸುತ್ತದೆ. ಮೇಲಾಗಿ, ಮೂಲದಲ್ಲಿ ಇರುವ ಮೂಢ ಪದವನ್ನು ಬಿಟ್ಟ
2025-02-1011 minSecret of Kannada ಕನ್ನಡದ ಗುಟ್ಟು Kannadada Guttu2024-10-1504 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಕಂತು ೨: ಟಕಟಕ ಜೋಕು, ಇನ್ನೂ ಬೇಕು ! Knock-Knock Jokes! -ನಾಕು ಜೋಕು, ಬೇಕೇ ಬೇಕು !👍 Like it? ...... ⁠⁠⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠⁠⁠⁠⁠⁠Subscribe to our newsletter⁠⁠⁠📞 ⁠⁠⁠Subscribe to WhatsApp ಕನ್ನಡ ಕಂಪು⁠ಇಗೋ! ಮೊತ್ತ ಮೊದಲ ಬಾರಿಗೆ ಕನ್ನಡದಲ್ಲಿ ನಾಕ್-ನಾಕು ಜೋಕುಗಳು! ಮಕ್ಕಳಿಗೆ ಮುದ ನೀಡುವ knock-knock ಜೋಕುಗಳು ಇಂಗ್ಲಿಷಲ್ಲಿ ಸರ್ವೇ ಸಾಮಾನ್ಯ. ೨೦ನೆ ಶತಮಾನದ ಆರಂಭದಿಂದಲೆ ಅಮೆರಿಕದ ಇತಿಹಾಸದಲ್ಲಿ ಚಿಗುರೊಡೆದ ನಾಕ್-ನಾಕು ಜೋಕುಗಳು ಇಂದೂ ಜನಪ್ರಿಯವಾಗಿವೆ. ವಿಶೇಷವಾಗಿ ಮಕ್ಕಳಿಗೆ ಪ್ರಿಯವಾದರೂ, ದೊಡ್ಡವರನ್ನೂ ನಗಿಸಬಹುದು. ಇವು ಹಾಸ್ಯ ಚಟಾಕಿಗಳೋ, ಮಕ್ಕಳ ಮುದ್ದು ಮಾತುಗಳೋ ಅಥವ ಪೆದ್ದು ಗೊಜಗುಟ್ಟುವಿಕೆಗಳೋ ಇನ್ನೂ ಇತ್ಯರ್ಥವಾಗಿಲ್ಲ! [ಹೆಚ್ಚಿನ ಮಾಹಿತಿಗೆ: ಕೆಳಗೆ ನಮೂದಿಸಿರುವ ⁠ನ್ಯಾಶನಲ್‌ ಪಬ್ಲಿಕ್‌ ರೇಡಿಯೋದ ಲೇಖನ⁠ವನ್ನು ಓದಿ. [https://www.npr.org/sections/npr-history-dept/2015/03/03/389865887/the-secret-history-of-knock-knock-jokes]ಕನ್ನಡದಲ್ಲಿ ಇವು ಮೊದಲ ನಾಕ್-ನಾಕು ಜೋಕುಗಳು ಎನ್ನಬಹುದು. ಓದಿ ನಲಿಯಿರಿ. ಇಂಥ ಅಥವ ಬೇರೆ ತರಹದ ನಾಕು ನಾಕ್-ನಾಕು ಜೋಕುಗಳನ್ನು ನೀವೂ ರಚಿಸಿ, ಕಾಮೆಂಟು ಹಾಕಿರಿ. ಮಾದರಿ ಜೋಕುಗಳು ಬೇಕಾಗಿದ್ದರೆ, "⁠knock-knock Jokes" ಅಂತ ಗೂಗಲಿಸದರೆ ⁠ಸಾವಿರಾರು ಜೋಕುಗಳು ಸಿಗುತ್ತವೆ [https://www.google.com/search?q=knock+knock+jokes]ಎಚ್ಚರಿಕೆ! ನಾಕು-ನಾಕು ಜೋಕುಗಳನ್ನು ಬೇರೆ ಭಾಷೆಯಿಂದ ಕಾಪಿ ಹೊಡೆಯಲು ಸಾಧ್ಯವಿಲ್ಲ! ಕೆಳಗಿನವುಗಳನ್ನು ಮಾದರಿಯಾಗಿ ಇಟ್ಟುಕೊಂಡು ಸ್ವಂತ ಟಕ-ಟಕ ಯಾ ಕಟ-ಕಟ ಜೋಕುಗಳನ್ನು ಕಟ್ಟಿರಿ ಯಾ ಕುಟ್ಟಿರಿ.ಇಲ್ಲಿನ ಕೆಲವು ಜೋಕುಗಳು, ⁠ಕನ್ನಡ ಕಲಿ ಮ್ಯಗ್‌ಝೀನ್‌ ಸಂಪುಟ ೧, ಸಂಚಿಕೆ ೨, ಜೂನ್ ೨೦೦೬,⁠ ರಲ್ಲಿ ಪ್ರಕಟವಾಗಿದ್ದವು.[https://www.scribd.com/doc/36032085/V01I02-Kannada-Kali-ಕನ-ನಡ-ಕಲಿ-June-2006] ಪುಟ ೫ರಲ್ಲಿ ಪ್ರಕಟವಾಗಿದ್ದವು-------- ಕಂತು ೨ --------ಟಕ-ಟಕ, ಟಕ್ ಯಾರು ಅಲ್ಲಿ?ದ್ರಾಕ್ಷಿ. ಯಾರು ದ್ರಾಕ್ಷಿ?ಕೊಳ್ಳಾಗಿನ ರುದ್ರಾಕ್ಷಿ ಸರ!‌ಟಕ-ಟಕ, ಟಕ್ ಯಾರು ಅದು?ಮಾರಿ. ಯಾ ಮಾರಿ?ಸೈಬರ್‌ ಕಳ್ಳಿ!ಟಕ-ಟಕ, ಟಕ್ ಯಾರು ಅಲ್ಲಿ?ಒತ್ತು. ಯಾ ಒತ್ತು?ಯಾವತ್ತು ಆದರೆ ಏನು? ಇವತ್ತೇ!ಟಕ-ಟಕ, ಟಕ್ ಯಾರು ಅದು?ದನ. ಯಾರೋ ದನ?ಅಳುತ್ತ ಕೂತಿರೋ ರೋದನ!ಟಕ-ಟಕ, ಟಕ್ ಯಾರು ಅದು?ಮಿನಿ. ಯಾ ಮಿನಿ?ರಾತ್ರಿ ಬರುವವಳು!ಟಕ-ಟಕ, ಟಕ್ ಯಾರು ಅಲ್ಲಿ?ಮತ್ತ. ಮತ್ ಯಾರು?ಮತ್ಯಾರು? ನಾನೇ!!ಟಕ-ಟಕ, ಟಕ್ ಯಾರು ಅದು?ಹತ್ತ. ಹತ್ ಯಾರು?ಹೌದು, ಹತ್ಯಾರು, ಇರೀತೀನಿ ಹುಷಾರು!!ಟಕ-ಟಕ, ಟಕ್ ಯಾರು ಅದು?ನಾ. ನಾ ಯಾರು?ನಾಯರು, ನಾ ಗೋವಿಂದ ನಾಯರು, ನೀ ಯಾರು?---ಕನ್ನಡ ಕಲಿ ಬಿತ್ತರಿಕೆ ಸಪ್ಟಂಬರ ೨೭, ೨೦೨೪Kannada Kali Bittarike September 27, 2024ಟಕಟಕ ಜೋಕು : ಇನ್ನೂ ಬೇಕುನಾಕ್-ನಾಕು ಜೋಕು : ಬೇಕೇ ಬೇಕುಕಂತು ೧ ಜೋಕು ನಿರೂಪಕರು: ಗಗನ ಗೂಗ್ಲೆ ಮತ್ತು ಸಪ್ನಾ ಗೂಗ್ಲೆ
2024-09-2703 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಕಂತು ೧: ಟಕಟಕ ಜೋಕು, ಇನ್ನೂ ಬೇಕು ! Knock-Knock Jokes! -ನಾಕು ಜೋಕು, ಬೇಕೇ ಬೇಕು !👍 Like it? ...... ⁠⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠⁠⁠⁠⁠Subscribe to our newsletter⁠⁠📞 ⁠⁠Subscribe to WhatsApp ಕನ್ನಡ ಕಂಪುಇಗೋ! ಮೊತ್ತ ಮೊದಲ ಬಾರಿಗೆ ಕನ್ನಡದಲ್ಲಿ ನಾಕ್-ನಾಕು ಜೋಕುಗಳು! ಮಕ್ಕಳಿಗೆ ಮುದ ನೀಡುವ knock-knock ಜೋಕುಗಳು ಇಂಗ್ಲಿಷಲ್ಲಿ ಸರ್ವೇ ಸಾಮಾನ್ಯ. ೨೦ನೆ ಶತಮಾನದ ಆರಂಭದಿಂದಲೆ ಅಮೆರಿಕದ ಇತಿಹಾಸದಲ್ಲಿ ಚಿಗುರೊಡೆದ ನಾಕ್-ನಾಕು ಜೋಕುಗಳು ಇಂದೂ ಜನಪ್ರಿಯವಾಗಿವೆ. ವಿಶೇಷವಾಗಿ ಮಕ್ಕಳಿಗೆ ಪ್ರಿಯವಾದರೂ, ದೊಡ್ಡವರನ್ನೂ ನಗಿಸಬಹುದು. ಇವು ಹಾಸ್ಯ ಚಟಾಕಿಗಳೋ, ಮಕ್ಕಳ ಮುದ್ದು ಮಾತುಗಳೋ ಅಥವ ಪೆದ್ದು ಗೊಜಗುಟ್ಟುವಿಕೆಗಳೋ ಇನ್ನೂ ಇತ್ಯರ್ಥವಾಗಿಲ್ಲ! [ಹೆಚ್ಚಿನ ಮಾಹಿತಿಗೆ: ಕೆಳಗೆ ನಮೂದಿಸಿರುವ ನ್ಯಾಶನಲ್‌ ಪಬ್ಲಿಕ್‌ ರೇಡಿಯೋದ ಲೇಖನವನ್ನು ಓದಿ. [https://www.npr.org/sections/npr-history-dept/2015/03/03/389865887/the-secret-history-of-knock-knock-jokes]ಕನ್ನಡದಲ್ಲಿ ಇವು ಮೊದಲ ನಾಕ್-ನಾಕು ಜೋಕುಗಳು ಎನ್ನಬಹುದು. ಓದಿ ನಲಿಯಿರಿ. ಇಂಥ ಅಥವ ಬೇರೆ ತರಹದ ನಾಕು ನಾಕ್-ನಾಕು ಜೋಕುಗಳನ್ನು ನೀವೂ ರಚಿಸಿ, ಕಾಮೆಂಟು ಹಾಕಿರಿ. ಮಾದರಿ ಜೋಕುಗಳು ಬೇಕಾಗಿದ್ದರೆ, "knock-knock Jokes" ಅಂತ ಗೂಗಲಿಸದರೆ ಸಾವಿರಾರು ಜೋಕುಗಳು ಸಿಗುತ್ತವೆ [https://www.google.com/search?q=knock+knock+jokes]ಎಚ್ಚರಿಕೆ! ನಾಕು-ನಾಕು ಜೋಕುಗಳನ್ನು ಬೇರೆ ಭಾಷೆಯಿಂದ ಕಾಪಿ ಹೊಡೆಯಲು ಸಾಧ್ಯವಿಲ್ಲ! ಕೆಳಗಿನವುಗಳನ್ನು ಮಾದರಿಯಾಗಿ ಇಟ್ಟುಕೊಂಡು ಸ್ವಂತ ಟಕ-ಟಕ ಯಾ ಕಟ-ಕಟ ಜೋಕುಗಳನ್ನು ಕಟ್ಟಿರಿ ಯಾ ಕುಟ್ಟಿರಿ.ಇಲ್ಲಿನ ಕೆಲವು ಜೋಕುಗಳು, ಕನ್ನಡ ಕಲಿ ಮ್ಯಗ್‌ಝೀನ್‌ ಸಂಪುಟ ೧, ಸಂಚಿಕೆ ೨, ಜೂನ್ ೨೦೦೬, ರಲ್ಲಿ ಪ್ರಕಟವಾಗಿದ್ದವು.[https://www.scribd.com/doc/36032085/V01I02-Kannada-Kali-ಕನ-ನಡ-ಕಲಿ-June-2006] ಪುಟ ೫ರಲ್ಲಿ ಪ್ರಕಟವಾಗಿದ್ದವು------- ಕಂತು ೧ -------ಟಕ-ಟಕ, ಟಕ್ ಯಾರು ಅಲ್ಲಿ?ಮಂಗಲಾ. ಮಂಗಲಾ ಯಾರು?ಲಾಯರು ನಾನು, ಮಂಗ ನೀನು. ಲಗೂನ ತಗೀ ಬಾಗಿಲ!ಟಕ-ಟಕ, ಟಕ್ ಯಾರು ಅದು?ಸುಮ ನಾ ಸುಮನಾ ಯಾರು?ಸುಮ ನಾ; ನೀ ಯಾರು ನನಗೇನು ಗೊತ್ತು?ಟಕ-ಟಕ, ಟಕ್ ಯಾರು ಅಲ್ಲಿ?ನಾಥ. ನಾತ ಯಾರು?ತಯಾರು ಇದ್ರೆ ಬಾಗಿಲ ತೆಗೆದು ಮೂಸು.ಟಕ-ಟಕ, ಟಕ್ ಯಾರು ಅದು?ಉಪ್ಪು ಕಾರ. ಉಪ್ಪು ಕಾರ ಯಾರು?ಉಪಕಾರ ಮಾಡಿ ಬಾಗಿಲ ತೆಗೀಯೆ ಮಾರಾಯತಿ!ಟಕ-ಟಕ, ಟಕ್ ಯಾರು ಅದು?ಮಾಲು. ಯಾರು ಮಾಲು?ತಲೆಗೆ ಸುತ್ತಿಕೊಳ್ಳುವುದು.ಟಕ-ಟಕ, ಟಕ್ ಯಾರು ಅಲ್ಲಿ?ಕುಮಾಯಿ. ಯಾರು ಕುಮಾಯಿ?ಪಂಢರಪುರದ ವಿಠ್ಠಲ ರುಕುಮಾಯಿ!ಟಕ-ಟಕ, ಟಕ್ ಯಾರು ಅಲ್ಲಿ?ಪೈ. ಯಾರು ಪೈ?ಲಕ ಲಕ ಹೊಳೀತಿರೋ ಬೆಳ್ಳೀ ಪೈ.ಟಕ-ಟಕ, ಟಕ್ ಯಾರು ಅದು?ಜಿನ. ಯಾರು ಜಿನ?ಬರಬಾರದ ರೋಗ ರುಜಿನ.-------- ಕಂತು ೨ --------ಟಕ-ಟಕ, ಟಕ್ ಯಾರು ಅಲ್ಲಿ?ದ್ರಾಕ್ಷಿ. ಯಾರು ದ್ರಾಕ್ಷಿ?ಕೊಳ್ಳಾಗಿನ ರುದ್ರಾಕ್ಷಿ ಸರ!‌ಟಕ-ಟಕ, ಟಕ್ ಯಾರು ಅದು?ಮಾರಿ. ಯಾ ಮಾರಿ?ಸೈಬರ್‌ ಕಳ್ಳಿ!ಟಕ-ಟಕ, ಟಕ್ ಯಾರು ಅಲ್ಲಿ?ಒತ್ತು. ಯಾ ಒತ್ತು?ಯಾವತ್ತು ಆದರೆ ಏನು? ಇವತ್ತೇ!
2024-09-2703 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಭಾಷೆ ಕಲಿಸಬೇಕಾದ್ದು ಹೇಗೆ How a Language Ought to be Taught👍 Like it? ...... ⁠⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠⁠⁠⁠Subscribe to our newsletter⁠📞 ⁠Subscribe to WhatsApp ಕನ್ನಡ ಕಂಪು[ ಜುಲೈ ೨೨, ೧೯೩೮ರಂದು ಜನಿಸಿ, ಅದ್ವಿತೀಯ ಕಾದಂಬರಿಕಾರ, ನಾಟಕಕಾರ, ಕವಿ, ಭಾಷಾತಜ್ಞ, ಶಿಕ್ಷಕ ಮತ್ತು ಕೃಷಿಕ ಆಗಿದ್ದ , ಕಾಸರಗೋಡಿನ ಕನ್ನಡಿಗ ಕೆ.ಟಿ.ಗಟ್ಟಿ ಅವರು ಫೆಬ್ರುವರಿ ೧೯, ೨೦೨೪ರಂದು ತಮ್ಮ ೮೫ನೆ ವಯಸ್ಸಿನಲ್ಲಿ ಮಂಗಳೂರಿನಲ್ಲಿ ನಿಧನರಾದರು. ಈ ಲೇಖನ ಜೂನ್ ೨೦೦೮ರ‌ ಕನ್ನಡ ಕಲಿ ಮ್ಯಗ್‌ಝೀನ್‌ನಲ್ಲಿ ಪ್ರಕಟವಾಗಿತ್ತು. ಕನ್ನಡ ಕಲಿಗಳಿಗೆ ಇದು ಇಂದೂ ಮಾರ್ಗದರ್ಶಿಯಾಗಿದೆ. -ಸಂ]ಭಾಷೆ ಕಲಿಸಬೇಕಾದ್ದು ಹೇಗೆHow a Language Ought to be Taughtಬರೆಹ: ಕೆ. ಟಿ. ಗಟ್ಟಿಓದು: ವಿಶ್ವೇಶ್ವರ ದೀಕ್ಷಿತಸಂಗೀತ: ಆಕಾಶ ದೀಕ್ಷಿತ[ಕೆ.ಟಿ. ಗಟ್ಟಿ ಅವರು ಈ ಲೇಖನದಲ್ಲಿ ಹೇಳುವ ಮಾತುಗಳು, ಕರ್ನಾಟಕದಲ್ಲಿ ಕನ್ನಡ ಮಕ್ಕಳಿಗೆ ಇಂಗ್ಲೀಷ್‌ ಕಲಿಸುವ ಕುರಿತು ಹೇಳಿದಂತೆ ಅನಿಸಬಹುದು. ಆದರೆ ಅವೆಲ್ಲ ವಿದೇಶದಲ್ಲಿ ಹುಟ್ಟಿ ಬೆಳೆಯುತ್ತಿರುವ ಕನ್ನಡ ಮಕ್ಕಳಿಗೆ ಕನ್ನಡ ಕಲಿಸುದಕ್ಕೂ ಸಂಪೂರ್ಣವಾಗಿ ಅನ್ವಯಿಸುತ್ತವೆ ಎನ್ನುವುದನ್ನು ನಾವು ವಿಶೇಷವಾಗಿ ಗಮನದಲ್ಲಿ ಇಡಬೇಕು - ಸಂ]ಭಾಷೆಯ ಆರಂಭ : ಮಾತುಕನ್ನಡದ ತಾಯಿ ತೊಟ್ಟಿಲ ಮಗುವಿಗೆ ಅಆಇಈ ಎಂದು ಜೋಗುಳ ಹಾಡುವುದಿಲ್ಲ. ಬ್ರಿಟಿಷ್ ತಾಯಿ ಎಬಿಸಿಡಿ ಎಂದು ಜೋಗುಳ ಹಾಡುವುದಿಲ್ಲ.ಭಾಷೆ ಮಾತಿನಿಂದ ಆರಂಭವಾಗುತ್ತದೆ. ‘ಅಕ್ಷರ ಓದುವಿಕೆ ಮತ್ತು ಬರೆಯುವಿಕೆ’ಯಿಂದ ಅಲ್ಲ. ಶಾಲೆಯನ್ನು ಪ್ರವೇಶಿಸುವ ಮೊದಲೇ ಕನ್ನಡದ ಮಗು ಚೆನ್ನಾಗಿ ಕನ್ನಡವನ್ನು ಆಡಲು ಕಲಿತುಕೊಂಡಿರುತ್ತದೆ. ಅದಕ್ಕೆ ‘ಕಷ್ಟ ಶಬ್ದ’ ‘ಸುಲಭ ಶಬ್ದ’ ಎಂಬ ವ್ಯತ್ಯಾಸವೇನೂ ಕಾಣಿಸುವುದಿಲ್ಲ. ಅರ್ಥವಾಗುವ ಮತ್ತು ಉಚ್ಚರಿಸಲಾಗುವ ಎಲ್ಲಾ ಶಬ್ದಗಳೂ ಸುಲಭ ಶಬ್ದಗಳೇ. ಮನೆಯಲ್ಲಿ ಅಪ್ಪ ಅಮ್ಮ ಅಕ್ಕ ಅಣ್ಣ ಆಡಿದ ಮಾತುಗಳೆಲ್ಲವನ್ನೂ ಅದು ಆಡುತ್ತದೆ. ಅವೆಲ್ಲವೂ ಮಗುವಿಗೆ ಅರ್ಥವಾಗುವ ವಾಕ್ಯಗಳೇ.ಮೊದಲ ಪಠ್ಯಪುಸ್ತಕ ಹೇಗಿರಬೇಕುಮಗುವಿನ ಮೊದಲನೆಯ ಪಠ್ಯಪುಸ್ತಕದ ಪಾಠಗಳಲ್ಲಿ ಆ ವಾಕ್ಯಗಳು ಮತ್ತು ಅಂಥ ವಾಕ್ಯಗಳೇ ಇರಬೇಕು. ‘ಅವನು ಬಸವ ಇವಳು ಕನಕ’ ಇತ್ಯಾದಿ ಅರ್ಥಹೀನ ವಾಕ್ಯಗಳು ಇರಬಾರದು. ಮನುಷ್ಯ (ಮಗು) ಭಾಷೆಯನ್ನು ಮಾತಾಡಲು ಆರಂಭಿಸುವುದು ಅಆಇಈ ಬರುವ ಶಬ್ದಗಳಿಂದಲ್ಲ. ತಾನು ಅನುಕರಣೆಯಿಂದ ಪಡೆದುಕೊಂಡ ತನಗೆ ಅರ್ಥವಾಗುವಂಥ ಮಾತುಗಳಿಂದ ಮಾತು ಆರಂಭವಾಗುತ್ತದೆ. ಇಂಗ್ಲೆಂಡಿನಲ್ಲಿ ಇಂಗ್ಲಿಷ್ ಮಗು ಭಾಷಾರ್ಜನೆ ಮಾಡುವುದು ಕೂಡ ಹೀಗೆಯೇ. ಅಕ್ಷರಾಭ್ಯಾಸವಿಲ್ಲದ ಜನರು ಕೂಡ ಚಲೋದಾಗಿ ಮಾತಾಡುವುದಿಲ್ಲವೆ? ಅವರು ಹೇಗೆ ಭಾಷೆಯನ್ನು ಕಲಿತುಕೊಳ್ಳುತ್ತಾರೆ? ಅದೇ ರೀತಿ ಮಗು ಕೂಡ ಐದನೇ ವರ್ಷ ಪ್ರಾಯಕ್ಕೆ ಬಂದಾಗ ಒಂದಷ್ಟು ಭಾಷೆಯನ್ನು ಪಡೆದುಕೊಂಡಿರುತ್ತದೆ. ಅಂಥ ಮಗುವಿಗೆ ಅರಸ, ಇಣಚಿ ಮುಂತಾದ ಶಬ್ದಗಳಿಂದ, ಕ್ರಿಯಾಪದವಿಲ್ಲದ ವಾಕ್ಯಗಳಿಂದ ಭಾಷಾಭ್ಯಾಸ ಆರಂಭಿಸಬೇಕಾದ ಅಗತ್ಯವೇನು? ಮಾತು-ಗರುತು-ಓದು-ಬರೆ ವಿಧಾನನಾವು ಇಂಗ್ಲಿಷ್ ಕಲಿಸುವಲ್ಲಿ ಕೂಡ ಈ ರೀತಿ ನೈಸರ್ಗಿಕವಾಗಿ ಮಗು ತನ್ನ ಮಾತೃಭಾಷೆಯನ್ನು ಹೇಗೆ ಪಡೆಯುತ್ತದೆಯೋ ಹಾಗೆ ಪಡೆಯುವ ವಿಧಾನದಲ್ಲಿಯೇ ಕಲಿಸಬೇಕು. ಕನ್ನಡ ಮಗುವಿನ ಮಾತೃಭಾಷೆಯಾದ್ದರಿಂದ, ಒಂದನೇ ತರಗತಿಯಲ್ಲೇ ಓದು ಮತ್ತು ಬರೆಯುವಿಕೆ ವಾಕ್ಯಗಳಿಂದಲೇ ಆರಂಭಿಸಬಹುದು. ಮಗು ಅಕ್ಷರಗಳನ್ನು ನೋಡಿ ಶಬ್ದಗಳನ್ನು ಗುರುತಿಸಿಕೊಂಡು ಚೆನ್ನಾಗಿ ಓದಲು ಕಲಿತುಕೊಂಡ ಬಳಿಕ, ಶಬ್ದಗಳನ್ನು ಬರೆದು ಓದಿ ತೋರಿಸಬೇಕು. ಈ ಓದಿನ ಮೂಲಕ ಮಗುವಿಗೆ ಎಲ್ಲಾ ಅಕ್ಷರ ಪರಿಚಯ, ಅವುಗಳು ಮಾತಿನಲ್ಲಿ ಹೇಗೆ ಬರುತ್ತವೆಯೋ ಹಾಗೆ ಪರಿಪೂರ್ಣವಾಗಿ ಆಗುತ್ತದೆ. ಅನಂತರ ಶಬ್ದಗಳನ್ನು ಓದುತ್ತಾ ಇಡೀ ವಾಕ್ಯವನ್ನು ಬರೆಯಲು ಕಲಿಸಬೇಕು. ಹೀಗೆ ಕಲಿಸಿದರೆ, ಪರಂಪರಾಗತ ಅಆಇಈ ಅಕ್ಷರಗಳ ಮೂಲಕ ಕಲಿಯುವುದಕ್ಕಿಂತ ಚಲೋದಾಗಿ, ಸ್ಪಷ್ಟವಾಗಿ, ಅರ್ಥಪೂರ್ಣವಾಗಿ ಮತ್ತು ಆಶ್ಚರ್ಯಕರವೆನಿಸುವಷ್ಟು ವೇಗವಾಗಿ ಮಗು ಓದಲು ಬರೆಯಲು ಕಲಿತುಬಿಡುತ್ತದೆ. ಒಂದನೆಯ ದರ್ಜೆಯ ಪುಸ್ತಕ ಮೂರು ತಿಂಗಳಲ್ಲಿ ಮುಗಿದು ಹೋಗುತ್ತದೆ. ಮಗುವಿಗೆ ಓದಲು ಅಧ್ಯಾಪಕ ಮತ್ತು ತಾಯಿತಂದೆ ಬೇರೆ ಪುಸ್ತಕ ಹುಡುಕಬೇಕಾಗುತ್ತದೆ!‘ಅ’ದಿಂದ ‘ಹ’ದ ವರೆಗೆ ಹೇಳಿಸುವುದು, ಓದಿಸುವುದು, ಬರೆಸುವುದು ಮಗುವಿಗೆ ನರಕ; ಮಗುವಿನ ಅಮೂಲ್ಯವಾದ ಕಲಿಯುವ ಸಮಯ ಪೋಲು! ಇಂಗ್ಲ
2024-08-2413 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada GuttuGandhi: Part 3 - What You Said ಗಾಂಧಿ - ಕಂತು ೩ : ನಿಮ್ಮ ಏನಂತಿಗಳು👍 Like it? ...... ⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠⁠⁠Subscribe to our newsletter📞 Subscribe to WhatsApp ಕನ್ನಡ ಕಂಪುಮಹಾತ್ಮ ಗಾಂಧಿ - ಕಂತು ೩ : ಒಪ್ಪು - ತಪ್ಪು : ನಿಮ್ಮ ಏನಂತಿಗಳುಗಾಂಧಿ ಮಹಾತ್ಮನೆ? ಗಾಂಧಿ ಮಾಡಿದ್ದೆಲ್ಲ ಸರಿಯೆ? ನಾವು ಎಡವಿದೆವೆ? ಲಾಭ ಆದದ್ದು ಅಗುತ್ತಿರುವುದು ಯಾರಿಗೆ?ಗಾಂಧಿ ಲೇಖನಕ್ಕೆ ಮತ್ತು ಗಾಂಧಿಯ ಬಗ್ಗೆ ಸೈದ್ಧಾಂತಿಕ ಮತ್ತು ವ್ಯಾವಹಾರಿಕ ನೆಲೆಗಳಲ್ಲಿ ವಿಚಾರಪೂರ್ಣ ಏನಂತಿಗಳನ್ನು ನಿಖರ ನುಡಿಗಳಲ್ಲಿ ಹಂಚಿಕೊಂಡ ಕೆ.ಪಿ. ರವಿಕುಮಾರ್, ಹೊಳಲ್ಕೆರೆ ಆರ್.‌ ಲಕ್ಷ್ಮೀವೆಂಕಟೇಶ, ಶ್ರೀನಿವಾಸ ಭಟ್, ಶ್ರೀನಿವಾಸ ಹೆಬ್ಬಾಳ, ಕೆ.ಟಿ. ಶೆಟ್ಟಿ, ಸ್ಮಿತಾ,ಮತ್ತು ತಮ್ಮ ಇಷ್ಟಾನಿಷ್ಟಗಳನ್ನು ವ್ಯಕ್ತಪಡಿಸಿದ ಎಲ್ಲ ಕನ್ನಡ ಕಲಿ ಓದುಗರಿಗೆ ನಮನಗಳು.೧. ಸತ್ಯಾಸತ್ಯತೆಗಾಂಧಿ ಲೇಖನಕ್ಕೆ ಪ್ರತಿಕ್ರಿಯೆಯಿಸುತ್ತ "ಮಾಹಿತಿ ಪೂರ್ಣ ಲೇಖನ, ಒಳ್ಳೆಯ ಲೇಖನ " ಎಂದು ಸ್ಮಿತಾ ಅವರಿಗೆ ಅನಿಸಿದರೆ, ಕೆ. ಟಿ. ಶೆಟ್ಟಿ ಹೇಳುತ್ತಾರೆ, "ಕೆಲವು ಸತ್ಯ, ಕೆಲವು ಅರ್ಧ ಸತ್ಯ, ಇನ್ನು ಕೆಲವು ಪ್ರಶ್ನಾರ್ಥಕ ಸತ್ಯ." ಆದರೂ, "ಒಟ್ಟಿನಲ್ಲಿ ಗಾಂಧಿ ಒಬ್ಬ ಮಹಾತ್ಮನಾದ ಮಾನವ, ಮನುಕುಲಕ್ಕೊಂದು ಆದರ್ಶ!" ಎಂದು ಒಪ್ಪಿಕೊಳ್ಳುತ್ತಾರೆ.ಶ್ರೀನಿವಾಸ ಭಟ್ಟರು ಗಾಂಧಿ‌ ಪ್ರಯೋಗಿಸಿದ ಮೂರು ಪರಮಾಸ್ತ್ರಗಳನ್ನು ಗುರುತಿಸಿದ್ದರೆ‌, ಅದರಿಂದ "ಗಾಂಧಿ ಮಹಾತ್ಮನಾಗಲು ಬಯಸಿರಲಿಲ್ಲ!" ಎಂದು ಹೊಳಲ್ಕೆರೆ ಆರ್.‌ ಲಕ್ಷ್ಮೀವೆಂಕಟೇಶ ಒತ್ತಿ ಹೇಳುತ್ತಾರೆ."ತುಂಬ ಸುಂದರ ನಿರೂಪಣೆ ಮತ್ತು ವ್ಯಾಖ್ಯಾನ. ಗಾಂಧೀಜಿಯವರ ಬಗ್ಗೆ ದೈವಿಕ ಭಾವ ಅಲ್ಲಗಳೆದರೂ ಅಭಿಮಾನ ತುಂಬಿಕೊಂಡಿದೆ. ಇಲ್ಲ ಇಲ್ಲ ಎಂದುಕೊಂಡೂ ರೋಚಕತೆಯೇ ಹೆಚ್ಚು, ಮುಕ್ತ ಆಲೋಚನೆ ಕಡಿಮೆ" ಎನ್ನುವುದು ಶ್ರೀನಿವಾಸ ಹೆಬ್ಬಾಳರ ಅನಿಸಿಕೆ."ಲೇಖನ ಗಾಂಧಿಯವರ ತಾತ್ವಿಕ ಸೋಲುಗಳನ್ನು ದಾಖಲಿಸುವುದರಲ್ಲಿ ವಿಫಲವಾಗಿದೆ" ಎಂದು ವಿವರಿಸುತ್ತಾರೆ ಕೆ.ಪಿ. ರವಿಕುಮಾರ್.೨. ಗಾಂಧಿ ಮಹಾತ್ಮನಾಗಲು ಬಯಸಿರಲಿಲ್ಲ!ಹೊಳಲ್ಕೆರೆ ಆರ್.‌ ಲಕ್ಷ್ಮೀವೆಂಕಟೇಶ ಹೀಗೆ ಹೇಳುತ್ತಾರೆ"ಗಾಂಧಿ ಒಬ್ಬ ಮುಗ್ಧ, ಹೆಚ್ಚು ತಿಳಿಯದ, ಬಲಶಾಲಿಯಲ್ಲದ, ದುಷ್ಟ ಶಕ್ತಿಗಳಿಗೆ ಹೆದರುವ, ... ಹೀಗೆ, ಭಾರತದ ಇತರ ಎಲ್ಲ ಯುವಕರಂತೆಯೆ ಇದ್ದ. ನಮ್ಮ, ವೈಯಕ್ತಿಕ ಮತ್ತು ರಾಷ್ಟ್ರದ, ಹಿತಕ್ಕಾಗಿ ಗಾಂಧಿಯನ್ನು ಬಳಸಿಕೊಂಡೆವು (ಬಳಸಿಕೊಳ್ಳುತ್ತಿದ್ದೇವೆ.) "ಗಾಂಧಿಯಿಂದಲೆ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು. ಇಲ್ಲದಿದ್ದರೆ ನಾವು ನಮ್ಮ (ವಸುಧೈವ ಕುಟುಂಬಕಂ, ಇತ್ಯಾದಿ) ಸ್ವಂತ ಬೋಧನೆಗಳನ್ನು ಅರ್ಥಮಾಡಿಕೊಳ್ಳದೆ ಗುಲಾಮರಾಗಿ ಬಳಲುತ್ತಿದ್ದೆವು. ನಮ್ಮೆಲ್ಲರಂತೆ, ಗಾಂಧಿಯೂ ವಿದೇಶಿ ಪದವಿಯನ್ನು (ಕಾನೂನಿನಲ್ಲಿ) ಗಳಿಸಲು ಸಲಹೆ ಪಡೆದರು. ತಮ್ಮ ಸುಮಾರು ೧೭ನೇ ಎಳೆ ವಯಸ್ಸಿನಲ್ಲಿ , ಅವರ ತಾಯಿ ದೈನಂದಿನ ಪೂಜೆ ಮಾಡುವಾಗ ಹಾಡುತ್ತಿದ್ದ ಕೀರ್ತನೆಗಳನ್ನು ಹೊರತುಪಡಿಸಿ, ಅವರಿಗೆ ಭಾರತದ ಬಗ್ಗೆ - ಭಗವದ್ಗೀತೆ ಅಥವಾ ಯಾವುದೇ ಮಹಾಕಾವ್ಯಗಳ ಬಗ್ಗೆ - ಏನೂ ತಿಳಿದಿರಲಿಲ್ಲ. ಎಲ್ಲರಂತೆ, ಮನೆಯಿಂದ ಹೊರಬಂದ ನಂತರ, ಜಗತ್ತನ್ನು ಎದುರಿಸಲು ಪ್ರಯತ್ನಿಸುತ್ತಿರುವಾಗ, ಇಂಗ್ಲೆಂಡ್‌ನಲ್ಲಿ ಕಂಡ ಕೆಲವು ಕ್ರಿಶ್ಚಿಯನ್ನರು, ಪಾದ್ರಿಗಳು ಹಿಂದೂ ಧರ್ಮಗ್ರಂಥಗಳಲ್ಲಿ ಏನು ಹೇಳಲಾಗಿದೆ ಎಂದು ತಿಳಿದುಕೊಳ್ಳಲು ಸಹಜವಾಗಿ ಪ್ರಶ್ನಿಸಿದರು. ಏನನ್ನೂ ಹೇಳಲು ಸಾಧ್ಯವಾಗದ ಗಾಂಧಿ ಆಘಾತಕ್ಕೊಳಗಾದರು. ಅದಕ್ಕೆ, ಅವರು ಇಂಗ್ಲೆಂಡ್‌ನ ಪ್ರಮುಖ ವಕೀಲರಾದ ಸರ್ ಫಿರೋಜ್ ಶಾ ಮೆಹ್ತಾ ಅವರಂತಹ ಕೆಲವು ಭಾರತೀಯ ಸ್ನೇಹಿತರನ್ನು ಸಂಪರ್ಕಿಸಿದರು ಮತ್ತು ಗ್ರಂಥಾಲಯಗಳಿಗೆ ಭೇಟಿ ನೀಡುವುದನ್ನು ಆರಂಭಿಸಿದರು. ಸುಮಾರು ಒಂದು ವಾರ ಅಧ್ಯಯನ ಮಾಡಿದ ನಂತರ ನಮ್ಮ ಮಹಾಕಾವ್ಯಗಳ ಬಗ್ಗೆ ಹೇಳುವ ಭಗವದ್ಗೀತೆ ಎನ್ನುವ ಒಂದು ಸಂಕ್ಷಿಪ್ತ ಪಠ್ಯ ಇದೆ ಎಂದು ತಿಳಿಯಿತು. ಅವನ್ನು ತನ್ನ ಕ್ರಿಶ್ಚಿಯನ್ ಸ್ನೇಹಿತರೊಂದಿಗೆ ಚರ್ಚಿಸತೊಡಗಿದಾಗ ತನಗೆ ಎಷ್ಟು ತಿಳಿದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಗಾಂಧಿಯ ಕಾನೂನು ಮತ್ತಿತರ ಮಾನವೀಯ ಪಠ್ಯ ಪುಸ್ತಕಗಳ ಹೊರತಾದ ಕಲಿಕೆ ಪ್ರಾರಂಭವಾದ್ದು ಹೀಗೆ."ದಕ್ಷಿಣ ಆಫ್ರಿಕಾದ ರೈಲಿನಲ್ಲಿ ಪ್ರಯಾಣಿಸುವಾಗ, ತನ್ನ ಕಂಪಾರ್ಟ್‌ಮೆಂಟ್‌ನಿಂದ ಹೊರಹಾಕಲ್ಪಟ್ಟಾಗ ಅನುಭವಿಸಿದ ನಿಜ ನೋವು ಗಾಂಧಿಯ ಪ್ರಪಂಚದ ದೃಷ್ಟಿಕೋನದ ಬದಲಾವಣೆಗೆ ಕ್ರಮೇಣ ಕಾರಣವಾಯ್ತ; ಅದೇ, ಅಂತಿಮವಾಗಿ, ತಾಯಿ ಭಾರತಿಯ ಭವ
2024-06-0113 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuನುಡಿದರೆ ಮುತ್ತಿನ ಹಾರ | communico, ergo sum!👍 Like it? ...... ⁠⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠⁠ 👁️ ⁠⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠⁠  📧 ⁠⁠⁠⁠⁠⁠⁠⁠⁠⁠⁠⁠Subscribe to our newsletter ನುಡಿದರೆ ಮುತ್ತಿನ ಹಾರ Communico, ergo sum! [ಏನು ನುಡಿಯುತ್ತೀರೋ ಅದೇ ನೀವು! ಮಾತಿನ ಮಹತ್ವ ಅಷ್ಟಿದೆ. ಪ್ರಪಂಚದ ವ್ಯವಹಾರಗಳೆಲ್ಲವೂ ಮಾತಿನಿಂದಲೇ. ಮಾತಿನಿಂದಲೆ ಗಳಿಕೆ, ಮಾತಿನಿಂದಲೆ ಉಳಿಕೆ. ಮಾತಿನಿಂದಲೆ ತಿಳಿವು, ಮಾತಿನಿಂದಲೆ ಅಳಿವು. ಹಾಗಾದರೆ ನಮ್ಮ ನುಡಿ ಹೇಗಿರಬೇಕು?] ನುಡಿ ಅಂದರೆ ಏನು? ನುಡಿ ಅಂದರೆ ಇಲ್ಲಿ ಕೇವಲ ಮಾತು ಅಲ್ಲ. ಎಲ್ಲ ರೀತಿಯ ಮಾನವ ಸಂಪರ್ಕ ಮತ್ತು ಸಂವಹನಗಳೂ ನುಡಿ. ಪರಸ್ಪರ ಸಂಪರ್ಕ ಸಂವಹನಗಳೆ ನಮ್ಮ ಅಸ್ತಿತ್ವ. Communico, ergo sum! ಅಂದರೆ, I commucate, therefore I exist. ಇದು ವಿಚಿತ್ರ ಎನಿಸಿದರೂ ಸತ್ಯ.‌ ಆದ್ದರಿಂದ ನುಡಿ ಅಥವ ಮಾತಿನ ಮಹತ್ವವನ್ನು ಇದಕ್ಕಿಂತ ಹೆಚ್ಚಿಗೆ ಒತ್ತಿ ಹೇಳಲು ಸಾಧ್ಯವಿಲ್ಲ. ವಾಟ್ಸಾಪ್‌, ಇನ್ಸ್ಟಗ್ರಾಂ, ಟ್ವಿಟರ್‌, ಟಿಕ್-ಟಾಕ್, ಯೂ-ತೂಬು, ಮುಖ-ಪುಸ್ತಕ, ಇತ್ಯಾದಿ ಸೋಶಿಯಲ್‌ ಮೀಡಿಯಗಳೆ ನಮ್ಮ ಪ್ರಪಂಚ ಆಗಿವೆ. ಒಂದು ದಿನ, ಒಂದು ಗಂಟೆ ಒಂದು ಸಂದೇಶ ಬರದಿದ್ದರೆ ಏನೋ ಕಸಿವಿಸಿ; ಸುಮ್ಮ ಸುಮ್ಮನೆ ಮೊಬೈಲ್‌ ತೆರೆದು ನೋಡುವ ತುಡಿತ. ಇವೇ ನಮ್ಮನ್ನು ನಿರೂಪಿಸುವ ಸೂತ್ರಗಳಾಗಿವೆ! ಆದ್ದರಿಂದ ಮಾತೇ ನಾನು; ಮಾತೇ ಆತ್ಮ! ೨ ಮಾತಿನಿಂದ ಸರ್ವಸ್ವ ಲಕ್ಷ್ಮೀರ್ವಸತಿ ಜಿಹ್ವಾಗ್ರೇ, ಜಿಹ್ವಾಗ್ರೇ ಮಿತ್ರಬಾಂಧವಾಃ ಜಿಹ್ವಾಗ್ರೇ ಬಂಧನಂ ಪ್ರಾಪ್ತಂ, ಜಿಹ್ವಾಗ್ರೇ ಮರಣಂ ಧ್ರುವಂ! (ಶಾರ್ಙಧರ ಪದ್ಧತಿ) ಮಾತಿನಿಂದ ಸಿರಿ, ಗೆಳೆಯರು, ಬಂಧುಗಳು, ದುಃಖ, ಜೈಲು, ಮತ್ತು ಸಾವು ಕೂಡ. ಇದನ್ನೆ ಕನ್ನಡದಲ್ಲಿ ಹೀಗೆ ಹೇಳಿದ್ದಾನೆ ಸರ್ವಜ್ಞ: ಮಾತಿನಿಂ ನಗೆ ನುಡಿಯು, ಮಾತಿನಿಂ ಹಗೆ ಹೊಲೆಯು ಮಾತಿನಿಂ ಸರ್ವ ಸಂಪದವು, ಲೋಕಕ್ಕೆ ಮಾತೆ ಮಾಣಿಕ್ಯ ಸರ್ವಜ್ಙ ೩ ಹಾಗಾದರೆ ನುಡಿ ಹೇಗಿರಬೇಕು? ನುಡಿದರೆ ಮುತ್ತಿನ ಹಾರದಂತಿರಬೇಕು! ಇದು ಬಸವ ವಚನ ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು! ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು! ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು! ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ ? ೩.೧ ಮುತ್ತಿನ ಗುಟ್ಟು ಮುತ್ತೇ ಏಕೆ? ಮುತ್ತು ಸಾಂದ್ರ, ಅಂದರೆ ಮಾತು ಗಟ್ಟಿ ಆಗಿರಬೇಕು; ಒಂದು ಮುತ್ತು ಹುಟ್ಟಬೇಕಾದರೆ ಸಮಯ ಬೇಕು, ಸಾವಧಾನವಾಗಿ ಹರಳುಗಟ್ಟಬೇಕು. ಹಾಗೆಯೆ, ಮಾತು ವಿಚಾರಪೂರ್ವಕ ಬೆಳೆದು ಅರ್ಥಗರ್ಭಿತವಾಗಿ ಹೊರಬರಬೇಕು. ಮುತ್ತು ವಿರಳ; ಸಾವಿರ ಸಿಂಪಿಗಳಲ್ಲಿ ಒಂದು ಮುತ್ತನ್ನು ಹೊಂದಿರಬಹುದು. ಮಾತು ಕೂಡ ಅನಾವಶ್ಯಕವಾಗಿರಬಾರದು. ಅಂದರೆ ಪದಜಿಪುಣನಾಗಿರಬೇಕು. ೩.೨ ಹಾರದ ಬಂಧ ಅದೆಲ್ಲ ಸರಿ. ಹಾರ ಏಕೆ? ಪದಗಳನ್ನು ಅಸಂಬದ್ಧವಾಗಿ ಅಲ್ಲಲ್ಲಿ ಉಗುಳಿದರೆ ನುಡಿ ಅಲ್ಲ. ಪದಗಳು ಪೋಣಿಸಿದ ಹಾರದಂತೆ ಅರ್ಥ ಮತ್ತು ತರ್ಕ-ವಿಚಾರಗಳ ಸೂತ್ರದಲ್ಲಿ ಬಂಧಿತವಾಗಿರಬೇಕು. ತರ್ಕದ ಬಲ ಬುದ್ಧಿಯನ್ನು ಗೆಲ್ಲುವಂತಿರಬೇಕು. ೩.೩ ಮಾಣಿಕ್ಯದ ಹೊಳಪು ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು! ಮಾಣಿಕ್ಯ ಶುದ್ಧ ಮತ್ತು ಪ್ರಕಾಶಮಾನ. ಹಾಗೆ ನಾವು ನುಡಿದ ನುಡಿ ಶುದ್ಧ ಜ್ಞಾನದೀಪವಾಗಿರಬೇಕು. ನಮ್ಮ ಮಾತಿನಲ್ಲಿ ತಿಳಿವಿನ ಹೊಳಹು ಸೂಸುತ್ತಿರಬೇಕು. ೩.೪ ಸ್ಫಟಿಕದ ಸರಳು ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು! ಸ್ಫುಟವಾದ ಮಾತು ಸ್ಫಟಿಕದಂತೆ. ಶಲಾಕೆ ಅಂದರೆ ನೇರವಾದದ್ದು. ಸುತ್ತು-ಬಳಸು, ವಕ್ರತೆ ಇಲ್ಲದ್ದು. ಅನರ್ಥ, ನಿರರ್ಥ, ಅನ್ಯಾರ್ಥಗಳು ಇಲ್ಲದೆ ( see dasa kollu article) ನೇರವಾಗಿ ಎದೆ ಮುಟ್ಟುವಂತೆ ಇರಬೇಕು; ಸ್ಫಟಿಕ crystallize ಆಗುವಂತೆ ಇಂಗಿತ ಅರ್ಥ ತಂತಾನೆ ಮನಸ್ಸಿನಲ್ಲಿ ಇಳಿದು ಗಟ್ಟಿಯಾಗಬೇಕು. ೩.೫ ನುಡಿಯ ಲಿಂಗ ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು! ವಿವರಿಸಲು ಇದು ತುಸು ಕಠಿನವಾದದ್ದು. ಇಲ್ಲಿ, ಮೆಚ್ಚು ಅಂದರೆ ಒಪ್ಪವಂತಿರಬೇಕು, ಕೇಳುಗ ಮತ್ತು ಮಾತಾಡುವವ ಇಬ್ಬರೂ!; ಆಡಿದ್ದು ಸರಿ ಅಲ್ಲ ಅಂತ ಅನಿಸಿದರೆ ಅದು ಖಂಡಿತ ಸರಿ ಅಲ್ಲ! ಮೊದಲನೆಯದಾಗಿ, ಸಂಸ್ಕೃತದಲ್ಲಿ ಲಿಂಗ ಅಂದರೆ‌ ಶಬ್ದದ ಧರ್ಮ ಅಥವ ಶಬ್ದತ್ವ; ಅಂದರೆ ಲಿಂಗದಿಂದ ಶಬ್ದಕ್ಕೆ ಅರ್ಥ, ಲಿಂಗದಿಂದ ಶಬ್ದಕ್ಕೆ ಸಾಮರ್ಥ್ಯ; ಲಿಂಗದಿಂದೆ ಶಬ್ದಗಳಲ್ಲಿ ಹೊಂದಾಣಿಕೆ, ಅರ್ಥ ಸಮನ್ವಯ. ಲಿಂಗ ಇಲ್ಲದ ಮಾತು ಕೇವಲ ಧ್ವನಿಸಮೂಹ ಮಾತ್ರ; ಶಬ್ದ ಬರಿ ಸದ್ದು, ಸೊಲ್ಲು ಬರಿ ಗುಲ್ಲು. ಆದ್ದರಿಂದ ಯಾವ ಮಾತುಗಳಲ್ಲಿ ಅರ್ಥ ತುಂಬಿದೆಯೋ, ಸಾಮರ್ಥ್ಯ ಹುದುಗಿದೆಯೋ, ಹೊಂದಾಣಿಕೆ ಇದೆಯೊ ಅಂದರೆ ಲಿಂಗ ಸಂಪೂರ್ಣ ಮೆಚ್ಚಿದೆಯೋ, ಅಂತಃಸಾಕ್ಷಿ ಒಪ್ಪಿದೆಯೋ ಆ ಮಾತುಗಳೆ ಆಡಲು ತಕ್ಕವು. ಎರಡನೆಯದಾಗಿ, ಲಿಂಗ ಅಂದರೆ ಪಂಚ ಕೋಶ ಮೀರಿದ ಪ್ರಜ್ಞಾನ, ಆತ್ಮ; ಲಿಂಗ ಅಂದರೆ ಪರಮಾತ್ಮ. ಜನತಾ ಜನಾರ್ದನ ಅಂದಂತೆ ಜನತೆಯೆ ದೇವರು. ಅದಕ್ಕೆ, ಎದುರ ಬಂದವರಲ್ಲಿರುವ ಪರಮಾತ್ಮನಿಗೆ ನಮಸ್ಕಾರ ಮಾಡುವುದು ನಮ್ಮ ಸಂಸ್ಕೃತಿ. ಲಿಂಗವೆ ನಮ್ಮಲ್ಲಿರುವ ಪ್ರಜ್ಞೆ ಮತ್ತು ಆತ್ಮಸಾಕ್ಷಿ. ಇದಕ್ಕೆ ಮೆಚ್ಚಿಕೆಯಾ
2024-05-0710 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada GuttuGandhi: Part 2 - Achievements ಗಾಂಧಿ : ಭಾಗ ೨ - ಸಾಧನೆ👍 Like it? ...... ⁠⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠⁠Subscribe to our newsletterಸಾಮಾನ್ಯ ಮಾನವನಾಗಿ ಹುಟ್ಟಿದ ಮೋಹನದಾಸ ರಾಷ್ಟ್ರಪಿತ, ಬಾಪು, ಗಾಂಧಿ ತಾತ, ಕೊನೆಗೆ ಮಹಾತ್ಮನಾದ. ಈತ ಮಾಡಿದ್ದಾದರೂ ಏನು? ಮಹಾತ್ಮ ಗಾಂಧಿಮೂರು ಕಂತುಗಳಲ್ಲಿ:ಭಾಗ ೧ರಲ್ಲಿ ಗಾಂಧೀ ಜಿವನದ ಸಮಗ್ರ ಸಂಕ್ಷಿಪ್ತ ನೋಟಭಾಗ ೨ರಲ್ಲಿ ಗಾಂಧಿ ಸಾಧಿಸಿದ್ದಾದರೂ ಏನು ಎಂದು ತಿಳಿದುಕೊಳ್ಳುವ ಪ್ರಯತ್ನ ಈ ಲೇಖನ ಕನ್ನಡ ಕಲಿ ಮ್ಯಗ್ಝೀನ್‌ ತುತ್ತೂರಿಯ September ಮತ್ತು ಡಿಸೆಂಬರ ೨೦೦೭ರ ಸಂಚಿಕೆಗಳಲ್ಲಿ ಮೊದಲು ಪ್ರಕಟವಾಗಿತ್ತುಭಾಗ ೩ರಲ್ಲಿ ಈ ಲೇಖನಕ್ಕೆ ಬಂದ ಕೆಲವು ಪ್ರತಿಕ್ರಿಯೆಗಳು-ಗಾಂಧಿ ಸಾಧಿಸಿದ್ದಾದರೂ ಏನು?ಗಾಂಧಿಯನ್ನು ಕೆಲವರು ದೇವತೆಯಂತೆ ಪೂಜಿಸುವವರಾದರೆ ಇನ್ನು ಹಲವರು ಕ್ಷುಲ್ಲಕ ಕಾರಣಗಳಿಗಾಗಿ ಅವರ ಎಲ್ಲ ತತ್ವಗಳನ್ನು ಅನಾದರಣೆಯಿಂದ ನೋಡುವವರಿದ್ದಾರೆ. ಈ ಇಬ್ಬರೂ ಗಾಂಧಿಯನ್ನು ಅರಿತುಕೊಂಡಿಲ್ಲ. -ಇದೊ ನೋಡಿ, ನಿಜವಾಗಿಯೂ ಒಂದು ಗಾಂಧಿ ಗುಡಿಯನ್ನು ಕಟ್ಟಿದ್ದಾರೆ. ತಮಿಳುನಾಡಿನ ಎರೋಡು ಜಿಲ್ಲೆಯ ಸಲಂಗಪಾಳಯದಲ್ಲಿ ಪ್ರತಿದಿನ ಮುಂಜಾನೆ ಮತ್ತು ಸಾಯಂಕಾಲ ಗಾಂಧಿಗೆ ಪೂಜೆ, ಆರತಿ, ಮತ್ತು ಪ್ರಸಾದ. ಇದ್ದ ಕಡವರನ್ನೆಲ್ಲ ಇಲ್ಲೈ ಇಲ್ಲೈ ಎಂದು ಬೀದಿಗೆ ದಬ್ಬಿ, ಒಲ್ಲದವನಿಗೆ ಪೂಜೆ ಮಾಡುವ ಈ ಸಲ್ಲದ ಪರಿ ಎಂಥದು? ಗಾಂಧಿ ಇನ್ನೂ ಬದುಕಿದ್ದರೆ ಇದನ್ನು ಕಂಡು ತಾವೇ ನೇಣು ಹಾಕಿಕೊಳ್ಳುತ್ತಿದ್ದರೋ ಏನೋ! ಗಾಂಧಿಯ ಜೀವನಕ್ಕೆ, ತತ್ವಗಳಿಗೆ, ನಡತೆಗೆ, ಮತ್ತು ಆದರ್ಶಗಳಿಗೆ ಇದೊಂದು ಅಪಚಾರ. "ಗಾಂಧಿಯ ಜೀವನದ ಆದರ್ಶಗಳು ನಮಗೆ ಅನ್ವಯಿಸುವುದಿಲ್ಲ. ಯಾಕೆಂದರೆ ಗಾಂಧಿ ದೇವತೆ, ನಾವು ಹುಲು ಮಾನವರು" ಎಂದು ಸೋಲನ್ನು ಒಪ್ಪಿಕೊಳ್ಳುತ್ತ, ಇಲ್ಲವೆ ಚಾಣಾಕ್ಷತೆಯಿಂದ, ಮನುಷ್ಯತ್ವದ ಜವಾಬುದಾರಿಯಿಂದ ತಪ್ಪಿಸಿಕೊಳ್ಳುವ ಯತ್ನವೆ ಗಾಂಧಿಯನ್ನು ದೈವೀಕರಿಸುವುದು. ಗಾಂಧಿ ಈಗ ಹಳಸಿದ ಹಾಲು. ಬೆಕ್ಕು ಮುಟ್ಟದು. ಚೆಲ್ಲಲು ಆಗದು. ಅದಕ್ಕೆ ಗುಡಿ ಎನ್ನುವ ತಂಗಳು ಪೆಟ್ಟಿಗೆಯಲ್ಲಿ ಕೂಡಿ ಹಾಕಿದರಾಯಿತು! ರಾಮ ಬಸವ ಬುದ್ಧರ ಗತಿಯೂ ಇದೆ ಆಗಿದೆ. ಸಹಸ್ರಮಾನಗಳಿಂದ ನಡೆದುಕೊಂಡ ಬಂದ ಭಾರತೀಯ ಪದ್ಧತಿಯೆ ಇದು! ಗಾಂಧಿಗೆ ನೊಬೆಲ್ ಪಾರಿತೋಷಕ ಕೊಡಲಿಲ್ಲ ಎಂದು ಹಲವರು ಹಂಬಲಿಸಿ ಕೊರಗುತ್ತಿದ್ದರೆ, ನೋಬೆಲ್ ಕಮಿಟಿ ತಮ್ಮ ತಪ್ಪಿಗಾಗಿ ಒಳಗೇ ತಳಮಳಿಸುತ್ತಿದೆಯೆ? ಆಕಸ್ಮಾತ್ತಾಗಿ ತಪ್ಪಾಗಿದೆ ಎನ್ನುವ ಹೇಳಿಕೆ ಬಂದರೂ ನಂಬಲು ಅಸಾಧ್ಯ. ಗಾಂಧಿಯ ಹೆಸರು, ಇನ್ನೂ ಜೀವಂತವಾಗಿ ಇದ್ದಾಗ, ಒಮ್ಮೆ ಅಂತೂ ಸಾಯುವ ಕೆಲ ದಿನಗಳ ಮುಂಚೆ, ಐದು ಬಾರಿ ನೊಬೆಲ್ ಕಮಿಟಿಯ ಮುಂದೆ ಬಂದಿತ್ತು. ಪ್ರತಿ ಬಾರಿಯೂ, "ಗಾಂಧಿ ನಿಜವಾದ ರಾಜಕಾರಣಿಯೂ ಅಲ್ಲ, ಸಮಾಜ ಸೇವಕನೂ ಅಲ್ಲ" ಎಂದು ಪ್ರಶಸ್ತಿಯನ್ನು ಕಮಿಟಿ ನಿರಾಕರಿಸಿತು. ಕಮಿಟಿಯ ಆ ನಿಲುವಿನಲ್ಲಿ ಈಗಲೂ ಬದಲಾವಣೆ ಆಗಿಲ್ಲ. ಆದರೂ ಏನು ಪ್ರಯೋಜನ? ಸತ್ತವರಿಗೆ ನೋಬೆಲ್ ಪ್ರಶಸ್ತಿ ಕೊಡುವುದಂತೂ ಇಲ್ಲ. ಕೊಟ್ಟರೂ ಈಗ ಅದಕ್ಕೆ ಏನು ಬೆಲೆ? ೧೯೪೮ರಲ್ಲಿ ಗಾಂಧಿ ತೀರಿದ ನಂತರ ನೊಬೆಲ್ ಕಮಿಟಿ ಆ ವರ್ಷ "ಅರ್ಹರಾದವರು ಯಾರೂ ಬದುಕಿಲ್ಲ" ಎಂದು ಯಾರಿಗೂ ಪ್ರಶಸ್ತಿಯನ್ನು ಕೊಡಲಿಲ್ಲ. ಅದೆ ಅವರು ಗಾಂಧಿಗೆ ತೋರಿದ ಮರ್ಯಾದೆ ಎಂದುಕೊಂಡಿದ್ದಾರೆ. ಬೇರೆಯವರಿಗೆ ಪ್ರಶಸ್ತಿ ಕೊಡದೆ ಮಾಡಿದ ಅವಮರ್ಯಾದೆ ತಮಗೆ ಹೇಗೆ ಮರ್ಯಾದೆ ಆಗುತ್ತದೆ ಎಂದು ಗಾಂಧಿಯೆ ಇವರನ್ನು ಪ್ರಶ್ನಿಸುತ್ತಿದ್ದರು. ನೆನಪಿಸಿಕೊಳ್ಳಿ, ರಿಚರ್ಡ್ ಅಟೆನ್‌ಬರೋಗೆ ಗಾಂಧಿ ಚಿತ್ರ ನಿರ್ಮಿಸಲು ಸ್ಫೂರ್ತಿ ಕೊಟ್ಟ ಗಾಂಧಿಯ ಈ ನುಡಿ, "ಬೇರೆಯವರ ಅವಮಾನದಲ್ಲಿ ತನ್ನ ಸನ್ಮಾನ ಇದೆ ಎನ್ನುವ ಮನುಷ್ಯನ ನಡತೆ ನನಗೆ ಒಂದು ಬಿಡಿಸದ ರಹಸ್ಯ." ಇನ್ನು ಮೇಲೆ, ನೊಬೆಲ್ ಕಮಿಟಿ ತನ್ನ ಸಂವಿಧಾನವನ್ನು ಬದಲಿಸಿ ಗಾಂಧಿಗೆ ಮರಣೋತ್ತರ ಪ್ರಶಸ್ತಿಯನ್ನು ಕೊಟ್ಟರೆ ಅದಕ್ಕಿಂತ ಹೆಚ್ಚಿನ ಅವಮಾನ ಗಾಂಧಿಗೆ ಇಲ್ಲ, ನೊಬೆಲ್ ಕಮಿಟಿಗೆ ಇಲ್ಲ. ಎಲ್ಲ ಪ್ರಶಸ್ತಿಗಳನ್ನು ಮೀರಿ ನಿಂತ ಗಾಂಧಿಗೆ ಇಂಥ ಯಾವ ಮರ್ಯಾದೆಗಳೂ ಬೇಕಿಲ್ಲ. ಪ್ರಶಸ್ತಿ ಕೊಟ್ಟಿದ್ದರೆ ಅದರ ಘನತೆ ಹೆಚ್ಚು,ತ್ತಿತ್ತು. ಅದಕ್ಕೆ, ನೊಬೆಲ್ ಕಮಿಟಿ, ಒಂದು ರೀತಿಯಿಂದ, ಪ್ರಶಸ್ತಿ ಕೊಟ್ಟು ಗಾಂಧಿಗೆ ಅವಮಾನ ಮಾಡಲಿಲ್ಲವಲ್ಲ ಎಂದುಕೊಳ್ಳಬೇಕು. ಗಾಂಧಿಯನ್ನು ನಿಜವಾಗಿ ಅರ್ಥ ಮಾಡಿಕೊಂಡು ಇದಕ್ಕಾಗಿ ಕೊರಗುವುದನ್ನು ನಿಲ್ಲಿಸಬೇಕು. ಗಾಂಧಿಯ ಸಾಧನೆ ಆದರ್ಶಗಳ ತಪ್ಪು ತಿಳುವಳಿಕೆಗಳೆ ಈ ಆಭಾಸಗಳಿಗೆ ಕಾರಣ. ಗಾಂಧಿಯನ್ನು ತಿಳಿದುಕೊಂಡವರು ಇದ್ದಾರೆ. "ಬದಲಾವಣೆಗೆ ಅಹಿಂಸಾತ್ಮಕವಾದ ಹೊಸ ಮಾರ್ಗವನ್ನೆ ತೊರಿಸಿಕೊಟ್ಟ ಗಾಂಧಿಗೆ ಸಲ್ಲಿಸಿದಮನ್ನಣೆ ... ಪೂರ್ತಿ ಲೇಖನವನ್ನು ಜಾಲತಾಣದಲ್ಲಿ ಓದಿ--00:00.0 ಪೀಠಿಕೆ01:52.8 ಗಾಂಧ
2024-04-2113 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada GuttuGandhi: Part 1 - Life ಗಾಂಧಿ : ಭಾಗ ೧ - ಜೀವನ👍 Like it? ...... ⁠⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠⁠Subscribe to our newsletter⁠⁠ಮಹಾತ್ಮ ಗಾಂಧಿ : ಮೂರು ಕಂತುಗಳಲ್ಲಿ:ಭಾಗ ೧ರಲ್ಲಿ ಗಾಂಧೀ ಜಿವನದ ಸಮಗ್ರ ಸಂಕ್ಷಿಪ್ತ ನೋಟಭಾಗ ೨ರಲ್ಲಿ ಗಾಂಧಿ ಸಾಧಿಸಿದ್ದಾದರೂ ಏನು ಎಂದು ತಿಳಿದುಕೊಳ್ಳುವ ಪ್ರಯತ್ನ ಈ ಲೇಖನ ಕನ್ನಡ ಕಲಿ ಮ್ಯಗ್ಝೀನ್‌ ತುತ್ತೂರಿಯ September ಮತ್ತು ಡಿಸೆಂಬರ ೨೦೦೭ರ ಸಂಚಿಕೆಗಳಲ್ಲಿ ಮೊದಲು ಪ್ರಕಟವಾಗಿತ್ತುಭಾಗ ೩ರಲ್ಲಿ ಈ ಲೇಖನಕ್ಕೆ ಬಂದ ಕೆಲವು ಪ್ರತಿಕ್ರಿಯೆಗಳುಪೂರಕ ಓದಿಗೆ: ಭಾಗ ೨ - ಗಾಂಧಿ ಸಾಧಿಸಿದ್ದಾದರೂ ಏನು?ಹುಟ್ಟು : ಅಕ್ಟೋಬರ್ ೨, ೧೮೬೯ಕೆಟಲ್ ಪದದ ಸ್ಪೆಲಿಂಗ್ ಬಾರದು; ಪಕ್ಕದ ಹುಡುಗನಿಂದ ಕಾಪಿ ಹೊಡೆಯುವಂತೆ ಶಿಕ್ಷಕರು ಸನ್ನೆ ಮಾಡುತ್ತಾರೆ; ಆದರೆ ಮೋಹನದಾಸ್ ತನಗೆ ಬಂದಂತೆ ತಪ್ಪಾಗಿ ಬರೆಯುತ್ತಾನೆ. ಈ ಪ್ರಾಮಾಣಿಕ ಮೂರ್ತಿಯ ಮೇಲೆ ಶಿಕ್ಷಕರಿಗೆ ಎಲ್ಲಿಲ್ಲದ ಸಿಟ್ಟು. ಆವರಿಗೇನು ಗೊತ್ತು ಕರಮಚಂದರ ಮಗ ಈ ಮೋಹನದಾಸ ಮುಂದೆ ಮಹಾತ್ಮ ಗಾಂಧಿ ಆಗುತ್ತಾನೆ ಎಂದು! ಭಾರತ ದೇಶಕ್ಕೆ ಸ್ವತಂತ್ರವನ್ನು ದೊರಕಿಸಿಕೊಟ್ಟು ರಾಷ್ಟ್ರಪಿತ, ಎಲ್ಲರಿಗೂ ನೈತಿಕ ನೆಲೆಯನ್ನು ತೋರಿಸಿ ಬಾಪು, ಮಕ್ಕಳಿಗೆಲ್ಲ ಪ್ರಿಯನಾಗಿ ಗಾಂಧಿ ತಾತ ಆದವ ಈ ಮೋಹನ. ಗುಜರಾತ ರಾಜ್ಯದ ಪೋರಬಂದರಿನಲ್ಲಿ ಅಕ್ಟೊಬರ್ ೨, ೧೮೬೯ರಂದು ಜನನ. ಲಂಡನ್ನಿನಲ್ಲಿ ವಕೀಲಿಗೆ ಓದು. ಮುಂಬಯಿಯಲ್ಲಿ ವಕೀಲಿ ವೃತ್ತಿ ಆರಂಭ, ಹಲ ಬಗೆಯ ನಿಷ್ಫಲ ಪ್ರಯತ್ನ. ದಕ್ಷಿಣ ಆಫ್ರಿಕಾಕ್ಕೆ ಕೆಲಸದ ನಿಮಿತ್ತ ಪಯಣ. ಅಲ್ಲಿನ ಸರಕಾರದ ವರ್ಣಭೇದ ನೀತಿಯ ಕಹಿ ಊಟದ ಸ್ವಾಗತ. ಅಲ್ಲಿ ಕಂಡದ್ದು ಭಾರತೀಯರ ರಾಜಕೀಯ ಹಕ್ಕು ಮತ್ತು ಸ್ವಾತಂತ್ರ್ಯಗಳ ದಿಗಿಲುಗೊಳಿಸುವಂತಹ ನಿರಾಕರಣೆ. ಮೂಲ ಹಕ್ಕುಗಳನ್ನು ದೊರಕಿಸಿಕೊಳ್ಳಲು ಚಳುವಳಿ ಆರಂಭ. ಇಪ್ಪತ್ತು ವರುಷ ದಕ್ಷಿಣ ಆಫ್ರಿಕದಲ್ಲಿ ವಾಸ; ಪೋಲಿಸರಿಂದ ಹೊಡೆತ, ಒದೆತ; ಅನೇಕ ಬಾರಿ ಜೈಲು ವಾಸ. ಸತ್ಯ ತಮ್ಮದು ಎಂದು ನಂಬಿ ಛಲ ಬಿಡದ ಗಾಂಧಿ ಅಹಿಂಸಾ ಮಾರ್ಗವನ್ನು ಹಿಡಿದರು. ಸಹನಶೀಲ ಪ್ರತಿರೋಧ (ಪ್ಯಾಸಿವ್ ರಸಿಸ್ಟನ್ಸ್) ಮತ್ತು ಸವಿನಯ ಕಾನೂನು ಭಂಗ (ಸಿವಿಲ್ ದಿಸ್‌ಒಬೀಡಿಯನ್ಸ್) ತತ್ವಗಳನ್ನು ಅಳವಡಿಸಿಕೊಂಡರು. ಈ ತತ್ವಗಳಿಗೆ ಭಗವದ್ಗೀತೆ ಜೈನ ಧರ್ಮಗಳು ನೆಲೆಗಟ್ಟನ್ನು ಒದಗಿಸಿದರೆ, ರಷಿಯದ ಸಾಹಿತಿ ಲಿಯೊ ಟಾಲ್‌ಸ್ಟಾಯ್ ಮತ್ತು ಅಮೆರಿಕನ್ ಸಾಹಿತಿ ಡೇವಿಡ್ ಥೋರೊ ಅವರ ಬರಹಗಳು ಸ್ಫೂರ್ತಿ ನೀಡಿದವು.ದಕ್ಷಿಣ ಆಫ್ರಿಕೆಯಲ್ಲಿನ ಕೆಲಸ ಮುಗಿದು, ಮೊದಲ ಮಹಾಯುದ್ಧದ ಸಮಯದಲ್ಲಿ ಗಾಂಧಿ ಭಾರತಕ್ಕೆ ಮರಳಿದರು. ತಮ್ಮ ಸತ್ಯ ಮತ್ತು ಅಹಿಂಸೆಯ ತತ್ವಗಳ ಆಧಾರದ ಮೇಲೆ ಬ್ರಿಟಿಷರನ್ನು ಪ್ರತಿರೋಧಿಸಿ ಸ್ವತಂತ್ರ ಗಳಿಸುವಂತೆ ಭಾರತೀಯರನ್ನು ಕೇಳಿಕೊಂಡರು. ಬ್ರಿಟಿಷರ ಪರವಾಗಿ ಮೊದಲ ಯುದ್ಧದಲ್ಲಿ ಕಾದುವಂತೆ ವಿನಂತಿಸಿಕೊಂಡರು. ತಾವೆ ಯುದ್ಧಕ್ಕೆ ಅಂಬುಲೆನ್ಸ್‌ಗಳನ್ನು ಜೋಡಿಸಿಕೊಂಡು ರೆಡ್ ಕ್ರಾಸಿನ ತುಂಡೊಂದನ್ನು ನಿಭಾಯಿಸಿದರು. ಯುದ್ಧದ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಸ್ವರಾಜ ಆಂದೋಲನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ‘ಸತ್ಯಾಗ್ರಹ’ ಮತ್ತು ‘ಅಸಹಕಾರ’ ಚಳುವಳಿ ಪ್ರಾರಂಭಿಸಿದರು. ಉಪವಾಸ ತಮ್ಮನ್ನು ಶುಧ್ಧಿಗೊಳಿಸಲು ಅಷ್ಟೆ ಅಲ್ಲ ಬೇರೆಯವರ ಮನ ಒಲಿಸುವ ಸಾಧನವಾಯ್ತು. ‘ಸ್ವದೇಶಿ’ ಚಳುವಳಿ ಸ್ವಾತಂತ್ರ ಹೋರಾಟದಲ್ಲಿ ಇನ್ನೊಂದು ಪರಿಣಾಮಕಾರಿ ಅಸ್ತ್ರವಾಯ್ತು. ವಿದೇಶಿ ವಸ್ತುಗಳನ್ನು ಬಿಟ್ಟು ಸ್ವದೇಶಿ ವಸ್ತುಗಳನ್ನು ಬಳಸುವುದೆ ಈ ತಂತ್ರ. ಭಾರತೀಯ ಕಚ್ಚಾ ವಸ್ತುಗಳನ್ನೆ ಬಳಸಿ ವಿದೇಶದಲ್ಲಿ ತಯಾರಾಗಿ ಮರಳಿ ಭಾರತಕ್ಕೆ ಬರುತ್ತಿದ್ದ ವಸ್ತುಗಳಲ್ಲಿ ಬಟ್ಟೆ ಮುಖ್ಯವಾಗಿತ್ತು. ಇದಕ್ಕೆ ಉತ್ತರವಾಗಿ ಖಾದಿ ಹುಟ್ಟಿಕೊಂಡಿತು. ಪ್ರತಿ ದಿನ ಎಲ್ಲರು ಖಾದಿ ನೇಯುವಂತೆ ಕೇಳಿಕೊಂಡರು ಗಾಂಧಿ. ಚರಕ ಅವರ ಜೀವನ ಸಂಗಾತಿಯಾಯ್ತು.ದಂಡಿ ಯಾತ್ರೆ ಅಥವ ಉಪ್ಪಿನ ಸತ್ಯಾಗ್ರಹ ಜನರನ್ನು ಒಂದುಗೂಡಿಸಿ ಎಬ್ಬಿಸಿತು. ಸರಕಾರಕ್ಕೆ ಕರ ಕೊಡದೆ ಜನರು ತಾವೆ ಸಾಂಕೇತಿಕವಾಗಿ ಉಪ್ಪನ್ನು ತಯಾರಿಸಿ ಕಾನೂನು ಭಂಗ ಮಾಡುವುದೆ ಇದರ ಉದ್ದೇಶ. ಸಹಸ್ರಾರು ಜನರು ಗಾಂದಿಯೊಡನೆ ದಂಡಿಯ ಸಮುದ್ರ ತೀರಕ್ಕೆ ನಡೆದುಕೊಂಡು ಹೋಗಿ ಉಪ್ಪನ್ನು ತಯಾರಿಸಿದರು. ನಂತರ ಗಾಂಧಿ ೨೧ ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದರು. ೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು.ಎರಡನೆಯ ಮಹಾಯುದ್ಧ ಪ್ರಾರಂಭ ಆದಾಗ ಭಾರತದ ಬೆಂಬಲ ಬೇಕಾದರೆ, ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಗಾಂಧಿ ಮತ್ತು ಕಾಂಗ್ರೆಸ್ ಪಾರ್ಟಿ ಕರಾರು ಹಾಕಿದರು.ಬ್ರಿಟಿಷರು ಇದಕ್ಕೆ ಒಪ್ಪಲಿಲ್ಲ. ‘ಭಾರತ ಬಿಟ್ಟು ತೊಲಗಿರಿ’ (ಕ್ವಿಟ್ ಇಂಡಿಯ) ಚಳುವಳಿ ಆರಂಭಿಸಿದ
2024-03-3108 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada GuttuHow to Kill a Dasa : Huchcharane ಹುಚ್ಚರಣೆ: ದಾಸರನ್ನು ಆಡಿ ಕೊಲ್ಲಿರೋ!👍 Like it? ...... ⁠⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠⁠Subscribe to our newsletter⁠ಕನ್ನಡವೆಂಬುದು ಮಂತ್ರ ಕಣಾ!ಹೌದು. ಕನ್ನಡ ಉಚ್ಚಾರ ಸೂಕ್ಷ್ಮವಾದದ್ದು. ಉಚ್ಚಾರದಲ್ಲಿ ನಿಖರತೆ, ಸ್ಪಷ್ಟತೆ, ಒತ್ತು, ಬಿಗಿ, ಮತ್ತು ವಿರಾಮಗಳು ಅವಶ್ಯ. ಉಚ್ಚಾರ ಸರಿ ಇರದಿದ್ದರೆ, ಯಾವ ವೃತ್ತಾಸುರ ಉದ್ಭವಿಸದಿದ್ದರೂ, ಅಪಾರ್ಥ, ಅನಾಹುತ, ಆಭಾಸ, ಇಲ್ಲವೆ ನಗೆಪಾಟಲು ಕಟ್ಟಿಟ್ಟ ಬುತ್ತಿ. ಅನ್ಯಾರ್ಥ, ಅಪಾರ್ಥ, ಅನರ್ಥ, ಆಭಾಸಗಳು ಹುಟ್ಟುವುದು ಅನಾವಶ್ಯಕ ವರ್ಣ ಲೋಪ, ವರ್ಣ ಆದೇಶ, ಮತ್ತು ವರ್ಣ ಆಗಮಗಳಿಂದ. ಯಾಕೆ ಹೀಗೆ? ಅಲಸಿ ನಾಲಗೆ ಮತು ಉದಾಸೀನತೆಗಳು ಎಂದು ಮೇಲ್ನೋಟದಲ್ಲಿ ತೋರಿದರೂ, ಕನ್ನಡದ ಮತ್ತು ಪದಗಳ ತಿಳಿವು ಇಲ್ಲದಿರುವುದೆ ಮುಖ್ಯ ಕಾರಣ.ವಿಶೇಷವಾಗಿ ಹಾಡುಗಾರರು, ಭಾಷಣಕಾರರು, ಮೊದಲ ಗುರು ಎನಿಸುವ ತಾಯಿ-ತಂದೆ, ಮತ್ತು ಶಿಕ್ಷಕರು ಕನ್ನಡ ಉಚ್ಚಾರದ ವಿಷಯದಲ್ಲಿ ಹೆಚ್ಚಿನ ಗಮನ ಇರಿಸುವುದು ಒಳಿತು. ನವಿರು ಹಾಸ್ಯದೊಂದಿಗೆ, ಈ ಬಿತ್ತರಿಕೆಯಲ್ಲಿ, ಎತ್ತಿ ತೋರಿಸಲಾದ ʼಏಳು ಅಪಸ್ವರʼ ಗಳನ್ನು ಅರಿತು ನಿವಾರಿಸಿಕೊಂಡರೆ ನಿಮ್ಮ ಕನ್ನಡ ಕಸ್ತೂರಿಯಾಗುವುದರಲ್ಲಿ ಸಂಶಯವಿಲ್ಲ.(ಕನ್ನಡ ಉಚ್ಚಾರ ಮಂತ್ರದಷ್ಟು ಸೂಕ್ಷ್ಮವೇ?)ಹುಚ್ಚರಣೆ ದಾಸರನ್ನು ಆಡಿ ಕೊಲ್ಲಿರೋ!ಮತ್ತುಕನ್ನಡದ ಏಳು ಅಪಸ್ವರಗಳು-- ವಿಶ್ವೇಶ್ವರ ದೀಕ್ಷಿತಗಾಯನ: ಸ್ಫೂರ್ತಿ ಉಗ್ರಪ್ಪಫೆಬ್ರುವರಿ ೦೭, ೨೦೨೧ ರಂದು "ವಾಕ್ಪಟುಗಳು" ಆನ್‌ಲೈನ್‌ ಗುಂಪಿನಲ್ಲಿ ನೀಡಿದ ಭಾಷಣ( https://www.facebook.com/groups/vakpatugalu/permalink/10159612099913118/ )ಅನಾವಶ್ಯಕ ವರ್ಣ ಪಲ್ಲಟ, ವರ್ಣ ಲೋಪ, ವರ್ಣ ಆದೇಶ, ಮತ್ತು ವರ್ಣ ಆಗಮಗಳಿಂದ ಅಗುವ ಅಪಾರ್ಥ, ಅನರ್ಥ, ಆಭಾಸಗಳಿಗೆ ಪದಗಳ ತಿಳಿವಳಿಕೆ ಇಲ್ಲದಿರುವುದೆ ಮುಖ್ಯ ಕಾರಣRead Complete article: https://kannadakali.com/article/culture/huchcharane.html09:55 ಸಪ್ತ ಅಪಸ್ವರಗಳು‌12:45 ೧ ಪಾಯಸದಲ್ಲಿ ನೊಣ : ನ ↔ ಣ12:46 ದಡಬಡ ತಟಪಟ: ಡ ↔ ದ17:12 ೨ ಲಳಯೋರಭೇದ : ಳ ↔ ಲ19:45 ೩ ಕೂಡಿಸಿ ಕೆಟ್ಟ : ಶಬ್ದಗಳನ್ನು ಕೂಡಿಸಿ/ಬಿಡಿಸಿದಾಗ ಅಪಾರ್ಥ23:44 ೪ ಎಲ್ಲರೂ ಭಂಡರೆ : ಮಹಾಪ್ರಾಣವನ್ನು ಇಲ್ಲದಲ್ಲಿ ಸೇರಿಸಿ ಇದ್ದಲ್ಲಿ ಬಿಡುವುದು28:13 ೫ ಹಾರುವ ಹಕಾರ : ವರ್ಣ ಪಲ್ಲಟ 31:44 ೬ ಹಗರಣ : ವರ್ಣ ಆದೇಶ, 33:00 ೭ ಆಸನ-ಹಾಸನ : ವರ್ಣ ಲೋಪ ಮತ್ತು ವರ್ಣ ಆಗಮ35:06 ದಾಸರ ಪದಗಳನ್ನು ಹೇಗೆ ಹಾಡಬೇಕು
2024-02-2840 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada GuttuLove and Expectations : ಅಪೇಕ್ಷೆ ಇಲ್ಲದೆ ಪ್ರೀತಿಸಲು ಸಾಧ್ಯವೇ?Love and Expectations : ಅಪೇಕ್ಷೆ ಇಲ್ಲದೆ ಪ್ರೀತಿಸಲು ಸಾಧ್ಯವೇ?👍 Like it? ...... ⁠⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠⁠👁️ ⁠⁠⁠⁠⁠⁠⁠⁠Watch it⁠⁠⁠⁠⁠⁠⁠⁠  🕮 ⁠⁠⁠⁠⁠⁠⁠⁠Read it ⁠⁠⁠⁠⁠⁠⁠⁠  👂 ⁠⁠⁠⁠⁠⁠⁠⁠Listen it⁠⁠⁠⁠⁠⁠⁠⁠ 📧 ⁠⁠⁠⁠⁠⁠⁠⁠Subscribe to our newsletter[ ಮನುಷ್ಯ ಜಾತಿಗೆ ವಿಶಿಷ್ಟವಾದವುಗಳಲ್ಲಿ ಪ್ರೀತಿ ಕೂಡ ಒಂದು. ಪ್ರೀತಿ ಎಂದರೆ ಏನು? ಪ್ರೀತಿ ಒಂದು ಅನುಭವ. ಭೌತಿಕ, ಮಾನಸಿಕ, ಮತ್ತು ಅಧ್ಯಾತ್ಮಿಕ ಸ್ತರಗಳಲ್ಲಿ, ಅವರವರ ಪ್ರೀತಿ ಅವರವರ ಅನುಭವಕ್ಕೆ ಸೀಮಿತ. ಸಾರ್ವತ್ರಿಕವಾಗಿ ಅದು ಹೀಗೇ ಇರಬೇಕು ಎಂದು ಹೇಳಲಾಗುವುದಿಲ್ಲ. ಆದರೂ, ಪ್ರೀತಿಗೂ ಅಪೇಕ್ಷೆಗೂ ನಂಟು ಸಹಜ. ಪ್ರೀತಿಯ ಬಗ್ಗೆ ಅನೇಕ ವಾದಗಳು ಇವೆ. ಅಪೇಕ್ಷೆಯೇ ಪ್ರೀತಿ ಎಂದು ಒಂದು ಸಾಧಿಸಿದರೆ ನಿರಪೇಕ್ಷ ಪ್ರೀತಿಯೇ ಪ್ರೀತಿ ಎನ್ನುತ್ತದೆ ಮತ್ತೊಂದು. ಅಲ್ಲದೆ, "ಪ್ರೀತಿ ಒಂದು ಹುಚ್ಚು ಚಟ" ಎಂದು ಹೇಳುತ್ತಾನೆ ಮಂಕುತಿಮ್ಮ. ನಿಮ್ಮ ಪ್ರೀತಿ ಎಂಥದ್ದು? ನಿಮ್ಮ ಅಪೇಕ್ಷೆಗಳೇನು? ವಿವೇಕ ಬೆಟ್ಕುಳಿ ಅವರ ಈ ಪ್ರೀತಿ ಲೇಖನವನ್ನು ಓದಿ, ಅವರ ದನಿಯಲ್ಲೆ ಕೇಳಿ; ಪ್ರೀತಿಯ ಮೂಲವನ್ನು ಕಂಡುಕೊಳ್ಳಿ - ಸಂ.]ಅಪೇಕ್ಷೆ ಇಲ್ಲದೆ ಪ್ರೀತಿಸಲು ಸಾಧ್ಯವೇ?-- ವಿವೇಕ ಬೆಟ್ಕುಳಿಅನಾದಿ ಕಾಲದಿಂದ ಇಂದಿನವರೆಗೂ ಪ್ರೀತಿ ಎಂಬ ವಿಷಯ ಚಚೆ೯ ಆಗುತ್ತಲೇ ಇರುವುದು. ಮುಂದೆಯೂ ಸಹ ಆಗುತ್ತ ಇರುವುದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.ಹಾಗಾದರೆ ಪ್ರೀತಿ ಎಂದರೇನು? ಈ ಪ್ರಶ್ನೆಗೆ ಹಲವಾರು ಉತ್ತರಗಳು ಇವೆ. ಆದರೆ ಸರಳ ಉತ್ತರ ಎಂದರೆ ಒಂದೇ “ಪ್ರೀತಿ ಎಂದರೆ ಪ್ರೀತಿ” ಅಷ್ಟೆ! ಈ ಬಗ್ಗೆ ಉತ್ತರಿಸುವ ಎಲ್ಲರೂ, ಅವರವರು ನೋಡಿದ, ಅನುಭವಿಸಿದ ಘಟನೆಗಳನ್ನು ಆಧಾರವಾಗಿಟ್ಟುಕೊಂಡೆ ಪ್ರೀತಿಯನ್ನು ವ್ಯಾಖ್ಯಾನಿಸುವರು. ಹೊರತಾಗಿ ಪ್ರೀತಿಗೆ ಸ್ಪಷ್ಟವಾದ ಉತ್ತರ ಎಂಬುದು ಇಲ್ಲ. ಪ್ರೀತಿಯಲ್ಲಿ ವಿವಿಧ ಬಗೆಗಳಿವೆ. ಆದರೆ ಎಲ್ಲ ಬಗೆಯ ಪ್ರೀತಿಯೂ ಅಪೇಕ್ಷೆಯ ಕಾರಣಕ್ಕಾಗಿಯೇ ದುಖ:ದಲ್ಲಿ ಅಂತ್ಯವಾಗುವುದು. ತಂದೆ-ತಾಯಿ ಮಕ್ಕಳ ಪ್ರೀತಿ ಅಪ್ಪ ಅಮ್ಮನಿಗೆ ತನ್ನ ಮಗ/ಮಗಳು ತಾನು ಹೇಳಿದಂತೆ ಕೇಳಬೇಕು ಎನ್ನುವ ಅಪೇಕ್ಷೆ ಇರುವುದು. ಮಕ್ಕಳು ಚಿಕ್ಕವರಿದ್ದಾಗ ದಿನಾಲೂ ಶಾಲೆಗೆ ಹೋಗಿ ಬರಬೇಕು. ಚೆನ್ನಾಗಿ ಓದಬೇಕು. ಉತ್ತಮ ಅಂಕ ತೆಗೆಯಬೇಕೆಂಬ ಅಪೇಕ್ಷೆ. ಮಕ್ಕಳು ದೊಡ್ಡವರಾದಾಗ ಎಲ್ಲಾ ವಿಚಾರವನ್ನು ಚರ್ಚಿಸಬೇಕು, ಕೆಲಸ ಮಾಡಲು ಪ್ರಾರಂಭಿಸಿ ಮೇಲೆ ಸಂಬಳವನ್ನು ತಂದು ನೀಡಬೇಕು. ತಾವು ನೋಡಿದ ವರ/ವಧುವನ್ನೇ ಮದುವೆಯಾಗಬೇಕು. ತಾವು ಹೇಳಿದವರೊಂದಿಗೆ ಗೆಳೆತನ ಇರಬೇಕು. ತಾವು ನಿರ್ಧರಿಸುವ ಕೆಲಸವನ್ನೇ ಮಾಡಬೇಕು. ಮನೆಯಿಂದ ದೂರವಿದ್ದರೆ ದಿನವೂ ಪೋನ್‌ ಮಾಡಬೇಕು. ಒಟ್ಟಾರೆ ಮಕ್ಕಳು ತಮ್ಮ ಇಷ್ಟದಂತೆ ಇರಬೇಕು ಎಂದು ತಂದೆ ತಾಯಿಯರ ಅಪೇಕ್ಷೆಯಾಗಿರುವುದು.ಮಕ್ಕಳಿಗೋ, ಅಪ್ಪ ಅಮ್ಮ ಸ್ನೇಹಿತರಂತೆ ಇರಬೇಕು. ನನ್ನ ಎಲ್ಲಾ ಕಾರ್ಯಕ್ಕೂ ಸಹಕಾರ ನೀಡಬೇಕು. ಸಂಬಳದ ಬಗ್ಗೆ ಮಾತನಾಡಬಾರದು, ಕೆಲಸದ ಬಗ್ಗೆ ವಿಚಾರಿಸಬಾರದು, ಮದುವೆ ಎಂಬುದರಲ್ಲಿ ನನ್ನ ನಿಧಾ೯ರದಲ್ಲಿ ತಲೆ ಹಾಕಬಾರದು. ಅಪ್ಪ ಅಮ್ಮ ನಾನೇ ಏನೇ ತೀಮಾ೯ನ ಕೈಗೊಂಡರು ನನಗೆ ಸಪೋರ್ಟ ಮಾಡಬೇಕು. ನನಗೆ ಅವರ ಸಲಹೆ ಅಗತ್ಯ, ಮಾರ್ಗದರ್ಶನ ಅಗತ್ಯ ಎಂಬುದು ಮಕ್ಕಳ ಅಪೇಕ್ಷೆಯಾಗಿದೆ.ಹುಡುಗ ಹುಡುಗಿ ಪ್ರೀತಿ ನಾನು ಇಷ್ಟಪಡುವ ಹುಡುಗ/ಹುಡುಗಿ ಯಾವ ಹುಡುಗಿ /ಹುಡುಗರೊಂದಿಗೂ ಮಾತನಾಡಬಾರದು, ಅವನ/ಆಕೆಯ ಬಟ್ಟೆಯ ಬಣ್ಣ, ಹಾಕುವ ಚಪ್ಪಲಿ ಇವುಗಳ ಬಗ್ಗೆ ಹೀಗೆ ಇರಬೇಕೆಂಬ ಅಪೇಕ್ಷೆ. ಆತನ/ಆಕೆಯ ಊಟ, ತಿಂಡಿ, ಇತರೆ ಹವ್ಯಾಸಗಳ ಬಗ್ಗೆ ಒಂದು ಪೂರಕವಾಗಿ ಇಲ್ಲಾ ನಕಾರಾತ್ಮಕವಾದ ಅಪೇಕ್ಷೆ ಪರಸ್ಪರ ಇಬ್ಬರಲ್ಲಿಯೂ ಇರುವುದು. ಅಪೇಕ್ಷೆ ಹೆಚ್ಚಾಗಿ ಅದು ಆಗದೇ ಇದ್ದಾಗ ಬೇಸರ; ಬೇಸರ ಕಳೆಯಲು ಸಿಗರೇಟು, ಸರಾಯಿ, ಅಳು, ದುಖ: ಡಿಪ್ರೆಶನ್ ಇತ್ಯಾದಿ.ಇಬ್ಬರೂ ಪಶ್ಚಾತಾಪ ಪಟ್ಟು ಪುನ: ಸೇರಿದಾಗ ಪಶ್ಚಾತ್ತಾಪ. ನಂತರ, ಪ್ರೀತಿಯ ಹೆಸರಿನಲ್ಲಿ ಸಿನಿಮಾ, ಸುತ್ತಾಟ, ದೈಹಿಕ ಸಂಪರ್ಕ. ಪುನ: ದುಖ: ,ಪಶ್ಚಾತಾಪ...ಇದಕ್ಕೆ ಕೊನೆ ಎಂಬುದು ಇಲ್ಲವಾಗಿದೆ.ಗಂಡ ಹೆಂಡತಿ ಪ್ರೀತಿತಾನು ಕೆಲಸ ಮುಗಿಸಿ ಬಂದ ಮೇಲೆ ತನಗೆ ಟೀ ನಿಡಬೇಕು. ಮಾತನಾಡಬೇಕು, ಉತ್ತಮ ಅಡುಗೆ ಮಾಡಿ ಬಡಿಸಬೇಕು, ರಾತ್ರಿ ತನ್ನ ಆಕಾಂಕ್ಷೆಯನ್ನು ಈಡೇರಿಸಬೇಕು, ತನ್ನನ್ನು ಅರ್ಥಮಾಡಿಕೊಳ್ಳಬೇಕು ಎಂಬ ಅಪೇಕ್ಷೆ ಗಂಡಿನದಾದರೆ, ನನ್ನನ್ನು ಬೇರೆ ಬೇರೆ ಕಡೆ ತಿರುಗಾಡಲು ಕರೆದುಕೊಂಡು ಹೋಗಬೇಕು, ಆಭರಣ ಖರೀದಿಸಬೇಕು, ಆಗಾಗ ಉಡುಗೊರೆ ನೀಡಬೇಕು, ಮನೆಗೆ ಹಲವಾರು ರೀತಿಯ ಸಾಮಾನು ತರಬೇಕು, ಜಾಗ ಖರೀದಿಸಬೇಕು, ಮನೆ ಕಟ್ಟಬೇಕು, ಇತ್ಯಾದಿ ಅಪೇಕ್ಷೆಗಳು. ಎಲ್ಲಿ ಹೊಂದಾಣಿಕೆ ಇದೆಯೋ, ಅಥವಾ ಯಾರಾದರೂ ಒಬ್ಬರು ಶರಣಾಗಲು ಇಷ್ಟಪಡುವರೋ ಅಲ್ಲಿ ಎಲ್ಲವೂ ಒಳ್ಳೆಯದು. ಎಲ್ಲಿ ಭಿನ್ನ
2024-02-1209 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada GuttuVidvaneva Vijanati : KalitaKovida (subhashita) - ಕಲಿತ ಕೋವಿದ : ವಿದ್ವಾನೇವಕಲಿತ ಕೋವಿದ : ವಿದ್ವಾನೇವ👍 Like it? ...... ⁠⁠⁠⁠⁠⁠⁠Subscribe and Share! ⁠⁠⁠⁠⁠⁠⁠👁️ ⁠⁠⁠⁠⁠⁠⁠Watch it⁠⁠⁠⁠⁠⁠⁠  🕮 ⁠⁠⁠⁠⁠⁠⁠Read it ⁠⁠⁠⁠⁠⁠⁠  👂 ⁠⁠⁠⁠⁠⁠⁠Listen it⁠⁠⁠⁠⁠⁠⁠ 📧 ⁠⁠⁠⁠⁠⁠⁠Subscribe to our newsletter⁠ವಿದ್ವಾನೇವ ವಿಜಾನಾತಿ ವಿದ್ವಜ್ಜನ ಪರಿಶ್ರಮಂ :ನ ಹಿ ವಂಧ್ಯಾ ವಿಜಾನಾತಿ ಗುರ್ವೀಂ ಪ್ರಸವವೇದನಾಂ. - ಅಪ್ಪಯ್ಯ ದೀಕ್ಷಿತ, ಕುವಲಯಾನಂದ -೫೧ (ಪ್ರತಿವಸ್ತು ಉಪಮಾ ಅಲಂಕಾರಕ್ಕೆ ಉದಾಹರಣೆ)ಅಪ್ಪಯ್ಯ ದೀಕ್ಷಿತ 16 ನೇ ಶತಮಾನದಲ್ಲಿ ಬದುಕಿದ ವಿದ್ವಾಂಸ. ಅವರು ರಚಿಸಿದ ಅನೇಕ ವಿದ್ವತ್ಪೂರ್ಣ ಕೃತಿಗಳಲ್ಲಿ, ಇಂದು, ಕೇವಲ 60 ಮಾತ್ರ ಉಳಿದುಕೊಂಡಿವೆ. ಅವುಗಳಲ್ಲಿ ಅಲಂಕಾರ ಶಾಸ್ತ್ರ ಗ್ರಂಥವಾದ ಕುವಲಯಾನಂದ ಎನ್ನುವುದೂ ಒಂದು. ಅದರಲ್ಲಿ, ಈ ಶ್ಲೋಕವನ್ನು ಪ್ರತಿವಸ್ತು ಉಪಮೆ ಅಲಂಕಾರದ ಉದಾಹರಣೆಯಾಗಿ ನೀಡಲಾಗಿದೆ. ಅದನ್ನು ಕನ್ನಡಕ್ಕೆ ಅನುವಾದಿಸು ಪ್ರಯತ್ನ ಇಲ್ಲಿದೆ:ಕಲಿತ ಕೋವಿದನಿಗೇ ಗೊತ್ತು ಕಲಿಕೆ ಹಿಂದಣ ದುಡಿಮೆ ಹೊತ್ತು :ಬಸಿರು ಹೆರಿಗೆಯ ತಾಯ ನೋವ ಅರಿಯಬಲ್ಲದೆ ಬಂಜೆ ಜೀವ?ಕಲಿಕೆ ವಿಷಯ ಯಾವುದೇ ಆಗಿರಲಿ; ಭಾಷೆ, ವಿಜ್ಞಾನ, ಗಣಿತ, ಇತಿಹಾಸ, ಸಂಗೀತ, ನೃತ್ಯ, ಕುಶಲ ಕೈಗಾರಿಕೆ, ಅಥವ ಕಲೆ -ಚತುಷ್ಷಷ್ಟಿ ಕಲೆಗಳಲ್ಲಿ, ಯಾವುದೇ ಇರಲಿ, ಅದರಲ್ಲಿ ಪಾಂಡಿತ್ಯ, ಪರಿಣತಿ ಗಳಿಸಬೇಕಾದರೆ ಪರಿಶ್ರಮ ಬೇಕು. ಒಮ್ಮನದ ದುಡಿಮೆ ಬೇಕು. ಇಲ್ಲಿ instant gratification ಇಲ್ಲ. ಅನಾತುರದಿಂದ ವಿವಿಧ ಮೂಲಗಳಿಂದ ಅರಗಿಸಿಕೊಳ್ಳಬೇಕು. ಒಂದು ಪುಸ್ತಕ ಓದಿದರೆ, ಒಂದು, ವಿಡಿಯೊ ನೋಡಿದರೆ, ಒಂದು ವಾಟ್ಸಾಪ್‌ ಸಂದೇಶ ಓದಿದರೆ, ಗೂಗಲಿಸಿ ಕಡತಗಳನ್ನು ಕಲೆ ಹಾಕಿದರೆ ಪಾಂಡಿತ್ಯ ಬಾರದು. ಕಲಿಕೆಯ ಪರಾಕಾಷ್ಠತೆಯನ್ನು ಮುಟ್ಟಿ ತಜ್ಞ ಎನ್ನಿಸಿಕೊಳಬೇಕಾದರೆ ಸರಿಯಾದ ಮಾರ್ಗದರ್ಶನ, ಸತತ ಅಭ್ಯಾಸ, ತದೇವ ಧ್ಯಾನ, ಮೇಲಾಗಿ ತ್ಯಾಗ ಸಮರ್ಪಣೆಗಳು ಬೇಕು ಅಂದರೆ ಇತರ ಮನರಂಜನೆ ಸುಖ-ಲೋಲುಪತೆಗಳನ್ನು ಬದಿಗಿಟ್ಟು, ತನ್ನನ್ನೆ ಮುಡುಪಿಡಬೇಕು. ಮನರಂಜನೆಯೆ ಗುರಿಯಾಗಿರುವ, ಪ್ರದರ್ಶನವೆ ಕೊನೆಯಾಗಿರುವ, ಇಂದಿನ ಓಟದ ಜಗತ್ತಿನಲ್ಲಿ ಇದಕ್ಕೆಲ್ಲ ಯಾರಿಗೂ ವ್ಯವಧಾನವಿಲ್ಲ. ಅಂತೆ, ನಿಜವಾಗಿ ಕಲಿತವನ ಕಲಿಕೆಯ ಹಿಂದಿರುವ ದುಡಿಮೆ, ತ್ಯಾಗ, ಸಮಯ, ಸಂಯಮ, ಕಲಿಕೆಯ ಹಾದಿಯಲ್ಲಿನ ನೋವುಗಳ ಅಳವು ಮತ್ತು ಬೆಲೆ ಅವನಿಗೇ ಗೊತ್ತು, ಕಲಿತ ಮತ್ತೊಬ್ಬ ತಿಳಿದು ಮೆಚ್ಚಬಲ್ಲ. ಇತರರು ಅವನ ಕಲಿಕೆಯ ಫಲವನ್ನು ಮೆಚ್ಚಬಲ್ಲರಾದರೂ, ಹೆರಿಗೆಯ ನೋವನ್ನು ತಿಳಿಯದ ಬಂಜೆ ಬೇರೆಯವಳ ಮಗುವನ್ನು ಕಂಡಾಗ, "how cute!" ಅನ್ನುವಂತೆ, ಅವರದು ಕೇವಲ "ಹೌದಾ, ಚೆನ್ನಾಗಿದೆ" ಎನ್ನುವ ಅಚ್ಚರಿಯ ಉದ್ಗಾರಕ್ಕೆ ಸೀಮಿತ.ನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತ.ಕಲಿತ ಕೋವಿದ - ವಿದ್ವಾನೇವ ಕನ್ನಡ ಕಲಿ, ಬಿತ್ತರಿಕೆ, January 10, 2024
2024-01-1303 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಗುರಿ ತಪ್ಪುತ್ತಿರುವ ಗುರುಗುರಿ ತಪ್ಪುತ್ತಿರುವ ಗುರು - Teachers missing their Goal 👍 Like it? ...... ⁠⁠⁠⁠⁠⁠Subscribe and Share! ⁠⁠⁠⁠⁠⁠ 👁️ ⁠⁠⁠⁠⁠⁠Watch it⁠⁠⁠⁠⁠⁠  🕮 ⁠⁠⁠⁠⁠⁠Read it ⁠⁠⁠⁠⁠⁠  👂 ⁠⁠⁠⁠⁠⁠Listen it⁠⁠⁠⁠⁠⁠  📧 ⁠⁠⁠⁠⁠⁠Subscribe to our newsletter [ಎಲ್ಲ ಶಿಕ಼ಕರೂ ಹೀಗಲ್ಲ ಅಂತ ಸಮಸ್ಯೆಯನ್ನೆ ತೊಡೆದು ಹಾಕುವುದು ಸರಿ ಅಲ್ಲ.  ಶೈಕ್ಷಣಿಕ ಕೊರತೆ, ಅವಕಾಶ ವಂಚನೆ, ಅನ್ಯಾಯ, ಅಥವ ಅನಾಹುತ ಒಂದೇ ಮಗುವಿಗೆ ಆದರೂ ಅದು ಸಮಾಜದ ಸೋಲು. ವಿವೇಕ ಬೆಟ್ಕುಳಿ ಅವರು ಇಲ್ಲಿ ಹೇಳಿರುವದಕ್ಕಿಂತ ಗುರುತರ ಹಗರಣಗಳು ಅಮೆರಿಕೆಯಲ್ಲೂ ಆಗಿವೆ. ಅಂಥವುಗಳು ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬುದಾರಿ - ಅಂದರೆ ತಂದೆತಾಯಿಗಳು ಮಕ್ಕಳ ಶಿಕ್ಷಣದಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಮತ್ತು ಶಾಲೆಯ ಅಧಿಕಾರಿಗಳು ದಾರಿ ತಪ್ಪಿದ ಶಿಕ್ಷಕರ ನಡತೆಯನ್ನು ಕೂಡಲೆ ಸರಿಪಡಿಸುವುದು ಇಲ್ಲವೆ ವಜಾಗೊಳಿಸುವುದು.  ಇಂದಿನ ಭರಾಟೆಯ ಜೀವನದಲ್ಲಿ ತಮ್ಮನ್ನೆ ಕಳೆದುಕೊಂಡಿರುವ ತಂದೆತಾಯಿಗಳಿಗೆ, ಶಿಕ್ಷಣ ಕೇವಲ ದುಡ್ಡಿನ ವ್ಯವಹಾರವಾಗಿರುವ ಶಾಲೆಗಳಿಗೆ  ಅಥವ ಶಿಕ್ಷಕರಿಗೆ ಇದು ಸಾಧ್ಯವೆ? – ಸಂ.]
2024-01-1209 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಕಂನುಡಿ: ಪಠ್ಯ ಸಂಪಾದಕ (ಲಿಪಿಕಾರ) : ಲೋಕಾರ್ಪಣೆ Kannudi Text Editor : Release and Demonstrationಕಂನುಡಿ - ಕನ್ನಡಕ್ಕೆ ಒಂದು ನಿದರ್ಶಕ ಪದ ಸಂಪಾದಕ(OPOK! ಮತ್ತು OHOK! ನಿಯಮ ಮತ್ತು ನೆಲೆ-ತಿಳಿವುಗಳ ಆಧಾರದ ಮೇಲೆ)Released by Shri T.S. Nagabharana on Dec 15, 2022Under Nimmallige Kannada Koota program by Karnataka Cultural Association of Southern California👍 Like it? ...... ⁠⁠⁠⁠⁠Subscribe and Share! ⁠⁠⁠⁠⁠👁️ ⁠⁠⁠⁠⁠Watch it⁠⁠⁠⁠⁠  🕮 ⁠⁠⁠⁠⁠Read it ⁠⁠⁠⁠⁠  👂 ⁠⁠⁠⁠⁠Listen it⁠⁠⁠⁠⁠ 📧 ⁠⁠⁠⁠⁠Subscribe to our newsletterಕಂನುಡಿ, OPOK! ಮತ್ತು OHOK! ನಿಯಮಗಳನ್ನು ಆಧರಿಸಿ ಮತ್ತು ನೆಲೆ-ತಿಳಿವನ್ನು ಒಳಗೊಂಡು ರಚಿತವಾದ ಒಂದು ನಿದರ್ಶಕ ಪಠ್ಯ ಸಂಪಾದಕ. ಕನ್ನಡಕ್ಕೆ OHOK!, ಅಂದರೆ Ottu Haku Ottu Koḍu! (ಒತ್ತು ಹಾಕು ಒತ್ತು ಕೊಡು), ಎನ್ನುವ ಒಂದು ಊಡುವಳಿಯನ್ನು ಎತ್ತಿ ತೋರಿಸುತ್ತಿದೆ. ಒತ್ತಡ ಗ್ರಹಿಸಬಲ್ಲ ಸೂಕ್ಷ್ಮ ಇನ್‌ಪುಟ್ ಸಾಧನಗಳಿಗೆ ಇದು ವಿಶೇಷವಾಗಿ ಸೂಕ್ತವಾಗಿದೆಯಾದರೂ, ಪ್ರಸ್ತುತ ಆನ್‌ಲೈನ್ ಅನುಷ್ಠಾನವು ಸಾಮಾನ್ಯ ಯಾಂತ್ರಿಕ ಕೀಬೋರ್ಡ್ ಅನ್ನು ಬಳಸುತ್ತದೆ. OHOK! ಮೂರು ಸಂಭಾವ್ಯ ಬಗೆಗಳನ್ನು ಹೊಂದಿದೆ - ಸ್ವ-ಒತ್ತು (ದ್ವಿತ್ವ), ಕಂಡಂತೆ, ಮತ್ತು ಅಂದಂತೆ. ಕಂಡಂತೆ ಬಗೆ ಉಲಿಮಿಕ ಕ್ರಮವನ್ನು ಅನುಸರಿಸುವುದಿಲ್ಲ ಎಂದು ಗಮನಿಸಬಹುದು. ಆದಾಗ್ಯೂ, ಉಲಿಮೆಗಳನ್ನು ಒಳದಿನಿಸುವ ಬದಲು ಟೈಪಿಸಿದಂತೆ ಕಾಣುವ ಒಲವು ಹೊಂದಿರುವವರಿಗೆ ಈ ಬಗೆ ಉತ್ತಮವಾಗಿ ಕಾರ್ಯನಿರ್ವಹಿಸಬಹುದು. ವೇಗ, ನಿಖರತೆ, ಮತ್ತು ಬಳಸುಗ ಸ್ನೇಹಪರತೆಯನ್ನು ಸಮರ್ಥವಾಗಿ ಹೆಚ್ಚಿಸಲು ನೆಲೆ-ತಿಳಿವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದನ್ನು ಸಹ ಕಂನುಡಿ ತೋರಿಸಿ ಕೊಡುತ್ತದೆ, ಉದಾಹರಣೆಗೆ, ಊಹಿತ ಸ್ವರ ಆಯ್ಕೆ, ಸ್ವಯಂಚಾಲಿತ ಶೂನ್ಯೀಕರಣ ಮತ್ತು ಆರ್ಕೀಕರಣ. ಕನ್ನಡದಂತಹ ಉಲಿ-ಉಲಿಗಟ್ಟಿನ ಭಾಷೆಗಳಿಗೆ ಅಗತ್ಯವಾದ ನಾಲ್ಕು ರೀತಿಯ ಅಳಿಸುಗಳನ್ನು ಸಹ ಅಳವಡಿಸಲಾಗಿದೆ. ಕಂನುಡಿ ತಂತ್ರಾಂಶ ಇಲ್ಲಿ ಲಭ್ಯ: https://kannadakali.com/kannudi/kannudi.html
2024-01-041h 17Secret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಶಿಕ್ಷಕರ ದಿನ ಎಂದರೆ ನಿಜವಾಗಿ, ನ್ಯಾಯವಾಗಿ, ಈ ದಿನವೇ! ಸಾವಿತ್ರಿಬಾಯಿ ಫುಲೆ - Teachers' Day Savitribai Phule👍 Like it? ...... ⁠⁠⁠⁠⁠Subscribe and Share! ⁠⁠⁠⁠⁠👁️ ⁠⁠⁠⁠⁠Watch it⁠⁠⁠⁠⁠  🕮 ⁠⁠⁠⁠⁠Read it ⁠⁠⁠⁠⁠  👂 ⁠⁠⁠⁠⁠Listen it⁠⁠⁠⁠⁠ 📧 ⁠⁠⁠⁠⁠Subscribe to our newsletter[ಪ್ರಿಯ ಕನ್ನಡ ಕಲಿಗಳೆ,ಬೆಳಿಗ್ಗೆ ಎದ್ದ ಕೂಡಲೆ ಮಿಂಚೆಯಲ್ಲಿ ಕಂಡ ಈ ಪತ್ರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮೈಸೂರು ನಿವಾಸಿಗಳಾದ ಶ್ರೀ ಎಸ್.ಜಿ. ಸೀತಾರಾಮ್‌ ಕಳುಹಿಸಿದ ಈ ಸಮಯೋಚಿತ ಸಂದೇಶ ಕಣ್ ತೆರೆಸುವಂತಿದೆ. ಸಾವಿತ್ರಿಬಾಯಿ ಫುಲೆ ಅವರಂಥ ಮಹಾನ್‌ ಶಕ್ತಿಗಳನ್ನು ಸ್ಮರಿಸಿಕೊಳ್ಳುವುದು ಇಂದು ಅಗತ್ಯವಾಗಿದೆ. ದುಷ್ಟರನ್ನು ಶಿಕ್ಷಿಸುವ ದುರ್ಗೆಗಿಂತ ಸಮಾಜ ಮತ್ತು ಸಂಪ್ರದಾಯಗಳ ಕತ್ತಲೆಯಲ್ಲಿ ಬಳಲುತ್ತ ಕೊಳೆಯುತ್ತಿದ್ದವರನ್ನು ಬೆಳಕಿನೆಡೆಗೆ ಒಯ್ಯುವ ಇಂಥ ಭರ್ಗೆಯರು ಬೇಕು. ಕನ್ನಡ ಕಲಿಯ ಎಲ್ಲ ಶಿಕ್ಷಕರಿಗೂ ಈ ದಿನ ಹೆಮ್ಮೆಯ ದಿನ, ಸ್ಫೂರ್ತಿಯ ದಿನ ಎನಿಸುವುದು ಖಂಡಿತ.]--------ಶಿಕ್ಷಕರ ದಿನ ಎಂದರೆ ನಿಜವಾಗಿ, ನ್ಯಾಯವಾಗಿ, ಈ ದಿನವೇ!- ಎಸ್.‌ ಜಿ. ಸೀತಾರಾಮ್‌, ಮೈಸೂರುಆತ್ಮೀಯರೇ: ಈವೊತ್ತು (ಜನವರಿ ಮೂರು) “ಸಾವಿತ್ರಿಬಾಯಿ ಫುಲೇ” ಅವರ ಜನ್ಮಸ್ಮರಣದಿನ. “ಕೆಲವು ವರ್ಗಗಳು ವಿದ್ಯಾರ್ಜನೆ ಮಾಡುವುದೇ ಮಹಾಪಾಪ” ಎಂಬ ನಂಬಿಕೆಯು ಗಾಢವಾಗಿದ್ದ, ಒಂದೂವರೆ ಶತಮಾನಕ್ಕೂ ಪೂರ್ವದ ಪತನೋನ್ಮುಖ ಕಾಲಮಾನದಲ್ಲಿ, ಕ್ರೂರ ಸಂಪ್ರದಾಯವಾದಿಗಳ ಹಲ್ಲೆ, ಹೀಯಾಳಿಕೆ, ಹೊಡೆತ ಮತ್ತು ಹಲಬಗೆಯ ಕಾಟ-ಕಿರುಕುಳ, ಸವಾಲು-ಸಮಸ್ಯೆಗಳಿಗೆ ಗುಂಡಿಗೆಯೊಡ್ಡಿ, ವಿದ್ಯಾವಂಚಿತರಾಗಿ, ಹೀನಾಯವಾದ ಹೊಡೆಬಾಳನ್ನು ಸಾಗಿಸುತ್ತಿದ್ದ ಶೋಷಿತ ಜನವರ್ಗಗಳಲ್ಲಿ, ಅದರಲ್ಲೂ ಹುಡುಗಿಯರಲ್ಲಿ, “ಬಂಧನದಿಂದ ಮುಕ್ತಿಗೆ ಎರಡಕ್ಕರವೇ ಸಾಕು!” ಎಂಬ ಚೊಕ್ಕ ತಿಳಿವಳಿಕೆಯನ್ನು ಬಿತ್ತಿ, ಹುರಿದುಂಬಿ, ಮೂಲೆಮೂಲೆಗಳಲ್ಲಿ ಮಟ್ಟಮೊದಲ ಪಾಠಶಾಲೆಗಳನ್ನು ತೆರೆದು, ಜ್ಞಾನಜ್ಯೋತಿಯನ್ನು ದೀನದಲಿತರ ಮನೆಮನೆಗಳಲ್ಲೂ ಬೆಳಗಿಸಿ, ಕಲಿಕೆಯ ಬುಡಮಟ್ಟದಲ್ಲಿ ಮೊದಲ ಸಂಚಲನವನ್ನೆಬ್ಬಿಸಿದ “ಸಾವಿತ್ರಿಬಾಯಿ” ಅಲ್ಲವೇ ನಮ್ಮ “ಮೊದಲ ಗುರುವು”? ದಮನಿತ-ಪೀಡಿತ-ತಿರಸ್ಕೃತ-ಧ್ವನಿವಂಚಿತ ಸಮುದಾಯಗಳನ್ನು ಹೀಗೆ ’ಸಾವಿನಿಂದ ಉಳಿಸಿದ’ ಅವರು “ಸಾವಿತ್ರಿ”ಯಷ್ಟೇ ಅಲ್ಲ, ಸತ್ಪಾತ್ರರಿಗೆ ಉದಾತ್ತ ವಿದ್ಯಾದಾನ ಮಾಡಿದ “ಸರಸ್ವತಿ” ಕೂಡ. ಸೋಲುಂಡಿದ್ದವರಿಗೆ “ಸೊಲ್ಲು” ನೀಡಿದ “ಸೊಲ್ವೆಣ್.” ಹೀಗಾಗಿ, ನಮ್ಮ ಶಿಕ್ಷಣವಲಯದ ಮೊದಲ ಮರ್ಯಾದೆ, ಪ್ರಥಮ ನಮಸ್ಕಾರ-ಪುರಸ್ಕಾರ ಈ “ಸರಸ್ವತಿಬಾಯಿ”ಯವರಿಗಲ್ಲದೇ ಬೇರಾರಿಗೆ ಸಲ್ಲಬೇಕು? ಇದಲ್ಲದೆ, ಸಮಾಜಸುಧಾರಕರಾಗಿ, ಜಾತೀಯತೆ, ಬಾಲ್ಯವಿವಾಹ, ಶಿಶುಹತ್ಯೆ ಮುಂತಾದ ಘೋರ ಸಾಮಾಜಿಕ ಪಿಡುಗಳ ವಿರುದ್ಧವೂ, ಹೆಣ್ಮಕ್ಕಳ ಹುಟ್ಟುಹಕ್ಕುಗಳ ಪರವೂ, ಮುಂಬರುವವರಿಗೆ ಮಾದರಿಯಾಗುವಂತೆ ಕೆಚ್ಚಿನಿಂದ ಕಾದಾಡಿ, ಕಡೆಗೆ ಜನಸೇವೆಯಲ್ಲೇ (ಪ್ಲೇಗ್-ಪೀಡಿತನೋರ್ವನನ್ನು ಉಳಿಸಲು ಹೋಗಿ) ಮಡಿದ ಸಾವಿತ್ರಿಬಾಯಿಯವರು ಅಪ್ಪಟ “ಹುತಾತ್ಮ”ರು! “ ಮಹಾತ್ಮ ”ಜೋತಿಬಾ ಅವರ ಸಾರ್ಥಕ ಸಂಗಾತಿಯಾದವರು!" “ಮಾಲಿ” ಎಂಬ "ತೋಟಗಾರ-ಹೂವಾಡಿಗ" ಪರಂಪರೆಯವರಾಗಿದ್ದು, “ಫುಲೇ” ಅರ್ಥಾತ್ “ಹೂವು” ("ಪ್ರಫುಲ್ಲ ಪುಷ್ಪ") ಎಂಬ ಹೆಸರಾಂತಿದ್ದ ಈ ದಂಪತಿಯು, ಮಕ್ಕಳ ಓದಿಗಾಗಿ “ಬಾಲ-ಉದ್ಯಾನ” (“kindergarten”) ಬೆಳೆಸಿದುದು ಸೋಜಿಗವೇ ಸರಿ. ಹಿಸುಕಿ-ಹೊಸಕಿ ಹೋಗುತ್ತಿದ್ದ ಹೂಮೊಗ್ಗುಗಳು ಹೊರಳಿ ಹೊಸತಾಗಿ ಹಿಗ್ಗಿ, ಹಸನಾದ ಹೂಗಂಪನ್ನು ಹೊರಹೊಮ್ಮುವಂತಾಗಿಸಿದ, ಹಾಗೂ ವಿದ್ಯೆಯ ಗಂಧವೇ ತಾಕದಿದ್ದವರಲ್ಲಿ ಅದರ ಪರಿಮಳವನ್ನು ಅರಳಿಸಿದ, ಫುಲೇ! ದಂಪತಿಗಿದೋ, ಹೂಗೊಂಚಲೊಂದಿಗೆ, "ಭಲೇ! ಭಲೇ!" ಜೈಕಾರ.ಸಾವಿತ್ರಿಬಾಯಿಯವರ ಸ್ಮರಣೆಯಲ್ಲಿ ಈ ದಿನವು ಮಹಾರಾಷ್ಟ್ರದಲ್ಲಿ “ಬಾಲಿಕಾ ದಿನ” ಆಗಿದೆ, ನಿಜ. ಆದರೆ, ಸಾವಿತ್ರಿಬಾಯಿ ಅವರ ದಿವ್ಯ ಸ್ಮರಣೆಯಲ್ಲಿ ಅವರ ಈ ಜನ್ಮದಿನಾಂಕವನ್ನೇ “ಶಿಕ್ಷಕರ ದಿನ-ಅಕ್ಷರದ ದಿನ” ಎಂದು ನ್ಯಾಯಸಮ್ಮತವಾಗಿ, ಆದರಪೂರ್ವಕವಾಗಿ ದೇಶಾದ್ಯಂತ ಮಾನ್ಯಮಾಡಬೇಕು. ಇಡೀ ಭಾರತವು, “ಆ ಮಾತಾಯಿ ನಮ್ಮ ನಡುವೆ ಎದ್ದು ಬಂದು, ಬಿದ್ದು ಬೇನೆಯಲ್ಲಿದ್ದ ಲೆಕ್ಕವಿಲ್ಲದಷ್ಟು ಮಂದಿ ಎದ್ದುಬರುವಂತೆ ಮಾಡಿದಳಲ್ಲ!" ಎಂಬ ಅಭಿಮಾನದಿಂದ, ಧನ್ಯತೆಯಿಂದ ಅವರನ್ನು ಈವೊತ್ತು ನೆನಪಿಸಿಕೊಳ್ಳಬೇಕು.ಹಾಗಾದರೆ, “ಸೆಪ್ಟೆಂಬರ್ ೫” ಯಾವ ದಿನಾಚರಣೆಯಾಗಬೇಕು? ಅದು “ಪ್ರಾಧ್ಯಾಪಕರ ದಿನ-ಪಂಡಿತರ ದಿನ” ಎಂದಾಗಿ, ಉನ್ನತ ಅಧ್ಯಯನ, ಅಧ್ಯಾಪನ, ಸಂಶೋಧನ, ಪ್ರವಚನ ಇತ್ಯಾದಿ ಕಾರ್ಯಗಳಲ್ಲಿ ನಿರತರಾಗಿರುವವರಿಂದ ಆಚರಿಸಲ್ಪಡಬಹುದು. “ಶಿಕ್ಷಣ” ಎಂಬುದನ್ನು ತಳಹದಿಯಾಗಿ ಒದಗಿಸುವ “ಮೇಷ್ಟ್ರು-ಮೇಡಮ್ಮು”ಗಳ ಹೆಸರಿನಲ್ಲಿ ಈ ದಿನವು “Schoolteachers’ Day” ಎಂದಾಗಿ, ಆ ದಿನವು “Lecturers’ Day, Professors’ Day or Scholars’ Day” ಎಂದಾಗಬಹುದಲ್ಲವೇ? ಅಕ್ಕರದ ಕಲಿಕೆಯಲಿ ಅಕ್ಕರೆಯೆಂದಿಗೂ ತುಂಬಿರ
2024-01-0405 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಕೃಷ್ಣಮಾಸದ ಪಾರ್ಥನ ಪ್ರಾರ್ಥನೆ‌ : Arjuna's Prayer in Krishnamasa👍 Like it? ...... ⁠⁠⁠⁠⁠Subscribe and Share! ⁠⁠⁠⁠⁠👁️ ⁠⁠⁠⁠⁠Watch it⁠⁠⁠⁠⁠  🕮 ⁠⁠⁠⁠⁠Read it ⁠⁠⁠⁠⁠  👂 ⁠⁠⁠⁠⁠Listen it⁠⁠⁠⁠⁠ 📧 ⁠⁠⁠⁠⁠Subscribe to our newsletterಎಲ್ಲರಿಗೂ ಕೃಷ್ಣಮಾಸ ಶುಭ-ಶೋಭೆಗಳನ್ನು ತರಲಿಶ್ರೀ ಕೃಷ್ಣ ಪರಮಾತ್ಮ ನರನಿಗೆ ಗೀತೋಪದೇಶ ಮಾಡಿದ ತಿಂಗಳು. ಅಂದರೆ, ಗೀತಾ ಜಯಂತಿಯ ತಿಂಗಳು. ಗೀತೆಯನ್ನು ಪಠಿಸುತ್ತ, ಮನನಿಸುತ್ತ, ಅರ್ಜುನನ ನಿಮಿತ್ತ ಮನುಜರಿಗೆ ದೊರಕಿದ ಕೃಷ್ಣ ಎನ್ನುವ ಜ್ಞಾನಾಮೃತವನ್ನು ಸವಿಯುತ್ತ ಕೃಷ್ಣಮಾಸವಿಡಿ ನಲಿಯೋಣ***** ಕೃಷ್ಣಮಾಸದ ಪಾರ್ಥನ ಪ್ರಾರ್ಥನೆ‌ *****ಗೀತೆಯ ೧೧ನೆ ಅಧ್ಯಾಯದಲ್ಲಿ, ವಿಶ್ವರೂಪ ದರ್ಶನದ ನಂತರ, ಬರುವ ಕೆಲವು ಶ್ಲೋಕಗಳು. ಅರ್ಜುನನಿಗೆ ತನ್ನ ಕರ್ತವ್ಯ ಏನು, ಅಂದರೆ, ತಾನು ಮಾಡಬೇಕಾದುದು ಏನು ಮತು ತನ್ನ ಪಾತ್ರ ಏನು; ‌ಮುಖ್ಯವಾಗಿ, ಕೃಷ್ಣನ ನೈಜ ಸ್ವರೂಪ ಯಾವುದು, ಕೃಷ್ಣ ಅಂದರೆ ಯಾರು ಎನ್ನುವ ಅರಿವು ಮೂಡಿದಾಗ, ಜ್ಞಾನೋದಯ ಆದಾಗ, ಅರ್ಜುನ ಭಗವಂತನಿಗೆ ಹೇಳಿದ ಮಾತುಗಳು ಇವು. ಯಾರೇ ಆಗಲಿ, ತಮ್ಮ ತಪ್ಪಿನ ಅರಿವಾದಾಗ, ಸಂಶಯಗಳು ಅಳಿದು ಮಾರ್ಗದರ್ಶನ ದೊರೆತಾಗ‌, ಮನಸ್ಸಿನಲ್ಲಿ ಏಳುವ ವಿನಮ್ರತೆಯ ಮತ್ತು ಧನ್ಯತೆಯ ಭಾವಗಳನ್ನು ಮನೋಜ್ಞವಾಗಿ ಬಿಂಬಿಸುವ, ಕಣ್ಣಲ್ಲಿ ನೀರು ತರಿಸುವಂಥ ಮಾತುಗಳು ಇವು.ಸಂಜಯ ಉವಾಚ ಏತಚ್ಛ್ರುತ್ವಾ ವಚನಂ ಕೇಶವಸ್ಯ ಕೃತಾಂಜಲಿರ್ವೇಪಮಾನಃ ಕಿರೀಟೀ ನಮಸ್ಕೃತ್ವಾ ಭೂಯ ಏವಾಹ ಕೃಷ್ಣಂ ಸಗದ್ಗದಂ ಭೀತಭೀತಃ ಪ್ರಣಮ್ಯ ೧೧.೩೫ ಸಂಜಯನು ಹೇಳಿದನು: ಕೇಳಿ ಅರಿಸೂದನನ ಆ ಮಾತುಗಳನು, ಕೈಮುಗಿದು, ಅದಿರುತ್ತ ಗಾಂಡೀವಿ ಆಗ ನಮಿಸಿ ಮಾಧವನಿಗೆ, ಅಳುಕಿನಲ್ಲಿ ಮತ್ತೆ ಹೇಳಿದನು ಮಣಿಯುತ್ತ ನಡುಗು ದನಿಯಲ್ಲಿ:ಅರ್ಜುನ ಉವಾಚ ತ್ವಮಾದಿದೇವಃ ಪುರುಷಃ ಪುರಾಣಃ ತ್ವಮಸ್ಯ ವಿಶ್ವಸ್ಯ ಪರಂ ನಿಧಾನಂ ವೇತ್ತಾಸಿ ವೇದ್ಯಂ ಚ ಪರಂ ಚ ಧಾಮ ತ್ವಯಾ ತತಂ ವಿಶ್ವಮನಂತರೂಪ ೧೧.೩೮ ಅರ್ಜುನನು ಪ್ರಾರ್ಥಿಸಿದನು: ದೇವ ಮೊದಲಿಗನು ನೀ, ಹಳೆಯಾಳು ನೀನು; ಜಗಕೆ ನೆರ, ಮೂಲ, ಕಡು ಆಸರೆಯು ನೀನು; ಪರಮ ನೆಲೆ, ಅರಿಯುವುದು ಅರಿಯುವವ ನೀನು, ವಿಶ್ವವನು ಹೊದಳಿರುವ ರೂಪ ಅಗಣಿತನು. ವಾಯುರ್ಯಮೋಽಗ್ನಿರ್ವರುಣಃ ಶಶಾಂಕಃ ಪ್ರಜಾಪತಿಸ್ತ್ವಂ ಪ್ರಪಿತಾಮಹಶ್ಚನಮೋ ನಮಸ್ತೇಽಸ್ತು ಸಹಸ್ರಕೃತ್ವಃ ಪುನಶ್ಚ ಭೂಯೋಽಪಿ ನಮೋ ನಮಸ್ತೇ ೧೧.೩೯ ಬೆಂಕಿ, ಯಮ, ಜಲ, ಗಾಳಿ, ಚಂದಿರನು ನೀನು; ಜಗಕೆ ಮುತ್ತಾತ ನೀ, ಹೊಂಬಸಿರ ನೀನು; ಸಾವಿರ ಸರತಿ ಮಣಿವೆ, ಕೈ ಮುಗಿವೆ ನಾನು, ಬಾಗುವೆನು ನಿನಗೆ, ಎರಗುವೆನು ತಿರುತಿರುಗಿ.ನಮಃ ಪುರಸ್ತಾದಥ ಪೃಷ್ಠತಸ್ತೇ ನಮೋಽಸ್ತು ತೇ ಸರ್ವತ ಏವ ಸರ್ವ ಅನಂತವೀರ್ಯಾಮಿತವಿಕ್ರಮಸ್ತ್ವಂ ಸರ್ವಂ ಸಮಾಪ್ನೋಷಿ ತತೋಽಸಿ ಸರ್ವಃ ೧೧.೪೦ ನಮಿಸುವೆನು ನಾ ಮುಂದೆ, ನಮಿಸುವೆನು ಹಿಂದೆ, ನಮಿಸುವೆನು ಎಲ್ಲೆಡೆಗೆ, ಓ ಎಲ್ಲ, ನಿನಗೆ. ಕೊನೆ ಇರದ ಕೆಚ್ಚು ನೀ, ಬಲು ಬಲ್ಮೆ ಅದಟು, ಹಬ್ಬಿರುವಿ ಎಲ್ಲವನು; ಇಂತೆಲ್ಲ ನೀನೆ.ಸಖೇತಿ ಮತ್ವಾ ಪ್ರಸಭಂ ಯದುಕ್ತಂ ಹೇ ಕೃಷ್ಣ ಹೇ ಯಾದವ ಹೇ ಸಖೇತಿ ಅಜಾನತಾ ಮಹಿಮಾನಂ ತವೇದಂ ಮಯಾ ಪ್ರಮಾದಾತ್ಪ್ರಣಯೇನ ವಾಽಪಿ ೧೧.೪೧ ಮಿತಿಯಿರದೆ, ಮುಂಗಣಿಸಿ, ಬರಿ ಗೆಳೆಯನೆಂದು, ತಿಳಿಯದೆಯೆ, ಒಲವಿನಲಿ, ಗಮನಿಸದೆ ನಾನು "ಹೇ ಗೆಳೆಯ, ಹೇ ಕೃಷ್ಣ, ಯಾದವನೆ" ಎಂದು ಏನನೆಂದೆನೊ ನಿನ್ನ ಹಿರಿಮೆಯನರಿಯದೆ!ಯಚ್ಚಾವಹಾಸಾರ್ಥಮಸತ್ಕೃತೋಽಸಿ ವಿಹಾರಶಯ್ಯಾಸನಭೋಜನೇಷು ಏಕೋಽಥವಾಪ್ಯಚ್ಯುತ ತತ್ಸಮಕ್ಷಂ ತತ್ಕ್ಷಾಮಯೇ ತ್ವಾಮಹಮಪ್ರಮೇಯಂ ೧೧.೪೨ ಕುಳಿತಿರಲು, ಮಲಗಿರಲು, ಉಣುತಿರಲು ನಾವು, ಆಟದಲಿ, ಮಾನಿಸದೆ ಉಪಹಾಸಕೆಂದು ಒಬ್ಬನೆಯೆ ಯಾ ಗೆಳೆಯರೊಡಗೂಡಿ ನಾನು ಏನೆ ಅಂದುದನು ನೀ ಕ್ಷಮಿಸು, ಅಳವಿಲನೆ.ತಸ್ಮಾತ್ಪ್ರಣಮ್ಯ ಪ್ರಣಿಧಾಯ ಕಾಯಂ ಪ್ರಸಾದಯೇ ತ್ವಾಮಹಮೀಶಮೀಡ್ಯಂ ಪಿತೇವ ಪುತ್ರಸ್ಯ ಸಖೇವ ಸಖ್ಯುಃ ಪ್ರಿಯಃ ಪ್ರಿಯಾಯಾರ್ಹಸಿ ದೇವ ಸೋಢುಂ ೧೧.೪೪ ಅಂತೆ, ನಿನ್ನೆದುರು ನಾ ಮೈಯೊಡ್ಡಿ ಉದ್ದ ನಮಿಸುವೆನು, ಹಾತೊರೆವೆ ನಿನ್ನ ಕ್ಷಮೆ ದಯೆಗಳಿಗೆ, ಒಲವಿನೊಡೆಯನೆ; ಗೆಳೆಯ ಗೆಳೆಯನನು, ತಂದೆ ಮಗನನು, ಇನಿಯ ಇನಿಯಳನು ಕ್ಷಮಿಸುವಂತೆನ್ನನ್ನು ನೀ ಕ್ಷಮಿಸು, ಎರೆಯನೆ, ಕರುಣಿಸಿಕನ್ನಡ ಕಲಿ ಬಿತ್ತರಿಕೆಕೃಷ್ಣಮಾಸದ ‌ಪಾರ್ಥನ ಪ್ರಾರ್ಥನೆ‌ಸಂಸ್ಕೃತ ಮೂಲ : ವೇದವ್ಯಾಸಕನ್ನಡಕ್ಕೆ: ವಿಶ್ವೇಶ್
2024-01-0414 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada GuttuNovರಾತ್ರಿ ಸರಣಿ, ದಿನ ೧೦, ಮಿಥ್ಯೆ ೧೦ : ಕನ್ನಡದಲ್ಲಿ ಆಡಳಿತ👍 Like it? ...... ⁠⁠⁠Subscribe and Share! ⁠⁠⁠👁️ ⁠⁠⁠Watch it⁠⁠⁠  🕮 ⁠⁠⁠Read it ⁠⁠⁠  👂 ⁠⁠⁠Listen it⁠⁠⁠ 📧 ⁠⁠⁠Subscribe to our newsletter⁠⁠⁠⁠⁠⁠ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್⁠⁠⁠ Novರಾತ್ರಿ ಸರಣಿ, ದಿನ ೧೦, ಮಿಥ್ಯೆ ೧೦ : ಕನ್ನಡದಲ್ಲಿ ಆಡಳಿತ೧೦. ಕನ್ನಡ ಆಡಳಿತ ಭಾಷೆ ಆದದ್ದು ಕರ್ನಾಟಕ ಹುಟ್ಟಿದ ಮೇಲೆತಪ್ಪು. ಕದಂಬ, ಗಂಗ, ಚಾಲುಕ್ಯ, ರಾಷ್ಟ್ರಕೂಟ, ವಿಜಯನಗರ ಸಾಮ್ರಾಜ್ಯಗಳು ಮತ್ತು ಇತ್ತೀಚಿನ ಮೈಸೂರು ರಾಜ್ಯ ಎಲ್ಲವುಗಳಲ್ಲೂ ಕನ್ನಡ ಆಡಳಿತ ಭಾಷೆ ಆಗಿತ್ತು. ಬ್ರಿಟಿಷರು ಕೂಡ, ಕನ್ನಡ ಕಲಿತು, ಕನ್ನಡಿಗರೊಡನೆ ಕನ್ನಡದಲ್ಲಿ ವ್ಯವಹರಿಸುವ ನೀತಿಯನ್ನು ಇಟ್ಟುಕೊಂಡಿದ್ದರು. ಒಂದು ಸಾಮ್ರಾಜ್ಯದ ಮಂತ್ರಾಲೋಚನೆ, ರಕ್ಷಣೆ, ಹಣಕಾಸು, ಕಾನೂನು ಮತ್ತು ನ್ಯಾಯ, ಸಂಸ್ಕೃತಿ, ಮತ್ತು ಜನರ ನಿತ್ಯ ವ್ಯವಹಾರ ಎಲ್ಲವುಗಳನ್ನು ನಿಭಾಯಿಸಲು ಕನ್ನಡ ಆಗ ಸಮರ್ಥವಾಗಿತ್ತು, ಈಗಲೂ ಸಮರ್ಥವಾಗಿದೆ.ಇಲ್ಲಿಯ ವರೆಗೆ ತಾಳ್ಮೆಯಿಂದ ಓದಿಕೊಂಡು ಬಂದ ನಿಮಗೆ ಕಾಯ್ದಿದೆ: ರಾಜ್ಯೋತ್ಸವದ ಬೋನಸ್ಸು! ಮಿಥ್ಯೆ ೧೧ ಕನ್ನಡ ಅಭಿಮಾನ. ಇದನ್ನೂ ನೋಡಿ/ಓದಿ.ನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೧೦, ರಾಜ್ಯೋತ್ಸವ, ನವಂಬರ ೦೧, ೨೦೨೩
2023-11-0102 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada GuttuNovರಾತ್ರಿ ಸರಣಿ, ದಿನ ೧೦, ಮಿಥ್ಯೆ ೧೧ : ಬೋನಸ್!‌ ಕನ್ನಡ ಅಭಿಮಾನ👍 Like it? ...... ⁠⁠⁠⁠Subscribe and Share! ⁠⁠⁠⁠👁️ ⁠⁠⁠⁠Watch it⁠⁠⁠⁠  🕮 ⁠⁠⁠⁠Read it ⁠⁠⁠⁠  👂 ⁠⁠⁠⁠Listen it⁠⁠⁠⁠ 📧 ⁠⁠⁠⁠Subscribe to our newsletter⁠⁠⁠⁠⁠⁠⁠⁠ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್⁠⁠⁠⁠ “ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುಮಿಥ್ಯೆ ೧೧. (ಬೋನಸ್!) ಕನ್ನಡಿಗರು ಅಭಿಮಾನಶೂನ್ಯರುತಪ್ಪು. ಕನ್ನಡಿಗರು ಅನೇಕ ಸಾಮ್ರಾಜ್ಯಗಳನ್ನು ಸ್ಥಾಪಿಸಿದರು. ಬನವಾಸಿಯ ಕದಂಬರು ಕೋಲಾರದ ಗಂಗರು, ಬಾದಾಮಿ ಮತ್ತು ಕಲ್ಯಾಣದ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಮತ್ತು ಮೈಸೂರು ರಾಜ್ಯ ಇವೆಲ್ಲ ಗೊತ್ತಿರುವ ವಿಷಯಗಳು. ಇವರು ಇಂದಿನ ಕರ್ನಾಟಕದ ಒಳಗೆ ಮತ್ತು ಹೊರಗೆ ಹಬ್ಬಿ ಕನ್ನಡದಲ್ಲಿ ಆಳಿದರು. ಇಂದು, ಕನ್ನಡಿಗರು ಭಾರತದ ತುಂಬ ಹರಡಿಕೊಂಡಿದ್ದಾರೆ. ವಿದೇಶಗಳಲ್ಲಿ ನೆಲೆಸಿದ್ದಾರೆ. ಅವರಾರೂ ಕನ್ನಡವನ್ನು ಮರೆತಿಲ್ಲ.ನೇಪಾಳದ ಪಶುಪತಿ ದೇವಸ್ಥಾನದ ಅರ್ಚಕರು ಪರಂಪರಾಗತವಾಗಿ ಕನ್ನಡಿಗರು. ಕನ್ನಡ ಬಲ್ಲವರು. ದಿಲ್ಲಿ ಮುಂಬಯಿಗಳಲ್ಲಿ ಕನ್ನಡಿಗರು ತುಂಬಿಕೊಂಡಿದ್ದಾರೆ. ಬೆಳಿಗ್ಗೆ ಹೊರಗೆ ಹಣಿಕೆ ಹಾಕಿದರೆ ಮೂಲೆ ಮೂಲೆಗಳ ಹೊಟೇಲುಗಳಲ್ಲಿ ಕನ್ನಡದ್ದೆ ಸುಪ್ರಭಾತ! ಎಲ್ಲ ಊರುಗಳಲ್ಲೂ ಕ್ರಿಯಾಶೀಲ ಕನ್ನಡ ಸಂಘಗಳು ಇವೆ. ಕನ್ನಡ ವರ್ತಮಾನ ಪತ್ರಗಳು ಪ್ರಕಟವಾಗುತ್ತವೆ. ಕಾಯ್ಕಿಣಿ ಮತ್ತು ಜಿ.ವಿ. ಕುಲಕರ್ಣಿ "ಜೀವಿ" ಅಂಥ ಸತ್ವಯುತ ಸಾಹಿತಿಗಳು ಇದ್ದಾರೆ. ಮೇಲಾಗಿ, ದೂರದ ಹಳ್ಳಿಗಳಲ್ಲಿ ಇರುವ ಕನ್ನಡಿಗರು ಮನೆಯಲ್ಲಿ ಕನ್ನಡವನ್ನೆ ಮಾತಾಡುತ್ತಾರೆ; ಇದು ನಾನು ಗಮನಿಸಿದ ಸಂಗತಿ.ಅಮೆರಿಕೆಯಲ್ಲಿ, ಅದೂ ನಮ್ಮ ಕರ್ನಾಟಕ ಸಾಂಸ್ಕೃತಿಕ ಸಂಘದಲ್ಲಿ(KCA) ಹುಟ್ಟಿದ ಕನ್ನಡ ಕಲಿಯ ಕಿಡಿ ಇಂದು ಜಗತ್ತಿನ ಎಲ್ಲೆಡೆ ಹಬ್ಬಿಕೊಂಡು, ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ.ಬೇರೆ ಭಾಷೆಗಳನ್ನು ಪಳಗಿಸಿಕೊಳ್ಳುವ ಮತ್ತು ಬೇರೆ ಭಾಷಿಕರನ್ನು ತನ್ನವರನ್ನಾಗಿ ಮಾಡಿಕೊಳ್ಳುವ ಶಕ್ತಿ ಕನ್ನಡಕ್ಕೆ ಇದೆ. ಇದಕ್ಕೆ, ಜ್ಞಾನಪೀಠ ಪ್ರಶಸ್ತಿ ವಿಜೇತ ಬೇಂದ್ರೆ ಮಾಸ್ತಿ ಅಂಥ ಸಾಹಿತಿಗಳನ್ನು, ಬೇರೆ ಭಾಷೆಗಳಿಂದ ಕನ್ನಡಕ್ಕೆ ಒಗ್ಗಿಕೊಂಡ ಪದಗಳನ್ನು, ಅಲ್ಲದೆ, ಧಾರವಾಡ ಪೇಢೆಯನ್ನೂ ಉದಾಹರಿಸಬಹುದು.ಒಟ್ಟಿನಲ್ಲಿ, ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.ಕನ್ನಡದ ಮೇಲಿನ ಪ್ರೀತಿ ಮತ್ತು ಅಭಿಮಾನ ಇರದೆ ಇವೆಲ್ಲ ಆಗಲು ಸಾಧ್ಯವಿಲ್ಲ. ಕನ್ನಡಿಗರು ಅಭಿಮಾನಿಗಳು, ದುರಭಿಮಾನಿಗಳಲ್ಲ, ಅಭಿಮಾನಶೂನ್ಯರಂತೂ ಖಂಡಿತ ಅಲ್ಲ.ಇನ್ನೇಕೆ ಸಂಕೋಚ? ಕನ್ನಡ ಕಲಿಯೋಣ; ಕನ್ನಡದಲ್ಲಿ ಮಾತಾಡೋಣ; ನಿತ್ಯ ಕನ್ನಡಿಗರಾಗೋಣ!ರಾಜ್ಯೋತ್ಸವದ ಶುಭಾಶಯಗಳು!ನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೧೦, ನವಂಬರ ೧, ೨೦೨೩
2023-11-0104 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada GuttuNovರಾತ್ರಿ ಸರಣಿ, ದಿನ ೯, ಮಿಥ್ಯೆ ೯ : ಕನ್ನಡದ ಮರೆವು👍 Like it? ...... ⁠⁠⁠Subscribe and Share! ⁠⁠⁠👁️ ⁠⁠⁠Watch it⁠⁠⁠  🕮 ⁠⁠⁠Read it ⁠⁠⁠  👂 ⁠⁠⁠Listen it⁠⁠⁠ 📧 ⁠⁠⁠Subscribe to our newsletter⁠⁠⁠⁠⁠⁠ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್⁠⁠⁠ “ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುNovರಾತ್ರಿ ಸರಣಿ, ದಿನ ೯, ಮಿಥ್ಯೆ ೯ : ಕನ್ನಡದ ಮರೆವು೯. ಕನ್ನಡ ಮಾತಾಡದಿದ್ದರೆ ಮರೆತು ಹೋಗುತ್ತದೆತಪ್ಪು. ಬಹಳ ಕಾಲ ಕನ್ನಡ ಮಾತಾಡದೆ ಇದ್ದಾಗ, ಓದದೆ ಇದ್ದಾಗ, ಅಥವ ಬೇರೆ ದೇಶಕ್ಕೆ ವಲಸೆ ಹೋದಾಗ ಕನ್ನಡ ಮರೆತಂತೆ ಅನಿಸಿದರೂ ಬೇರುಗಳು ಗಟ್ಚಿಯಾಗಿ ಉಳಿದಿರುತ್ತವೆ. ಸರಿ ಸಂದರ್ಭದಲ್ಲಿ ಕನ್ನಡ ಮತ್ತೆ ಚಿಗುರುವುದು ಖಚಿತ. ನನ್ನದೆ ಉದಾಹರಣೆ ಕೊಡುವುದಾದರೆ, ಅಮೆರಿಕಕ್ಕೆ ಬಂದ ಮೇಲೆ ಕೆಲ ವರ್ಷ ಕನ್ನಡ ಮಾತಾಡಲೆ ಇಲ್ಲ. ಅಂಥ ಸಂದರ್ಭಗಳೆ ಬರಲಿಲ್ಲ. ಮುಂದೆ, ೨೦ ವರ್ಷಗಳ ನಂತರ ಭಗವದ್ಗೀತೆಯನ್ನು ಕನ್ನಡಕ್ಕೆ ಅನುದನಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾಯ್ತು. ಕನ್ನಡ ಮರೆತಿದೆ, ಕನ್ನಡ ನನಗೆ ಬಾರದು, ಕನ್ನಡ ಕಠಿನ ಎನ್ನುವ ಅನೇಕ ಶಂಕೆಗಳನ್ನು ತಲೆಯಲ್ಲಿ ತುಂಬಿಕೊಂಡು, ಮೊದಲ ಅಧ್ಯಾಯದಲ್ಲೆ, ಆ ಅರ್ಜುನನ ಹಾಗೆಯೆ ಕೈ ಚೆಲ್ಲಿ ಕುಳಿತುಕೊಂಡೆ. ಮುಂದೆ ನಡೆದದ್ದು ಕರ್ನಾಟಕ! ನುಡಿದದ್ದು ಭಗವತ್ ಕಂನುಡಿ!music -Separatorಕನ್ನಡದಲ್ಲಿ ಆಡಳಿತದ ಮಿಥ್ಯೆ ೧೦ನ್ನು ನಾಳೆ ಅರಿತುಕೊಳ್ಳೋಣನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೯, ಅಕ್ಟೋಬರ ೩೧, ೨೦೨೩
2023-10-3102 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada GuttuNovರಾತ್ರಿ ಸರಣಿ,ದಿನ ೮,ಮಿಥ್ಯೆ ೮: ಕನ್ನಡದ ವೈಜ್ಞಾನಿಕ ದೌರ್ಬಲ್ಯ👍 Like it? ...... ⁠⁠⁠Subscribe and Share! ⁠⁠⁠👁️ ⁠⁠⁠Watch it⁠⁠⁠  🕮 ⁠⁠⁠Read it ⁠⁠⁠  👂 ⁠⁠⁠Listen it⁠⁠⁠ 📧 ⁠⁠⁠Subscribe to our newsletter⁠⁠⁠⁠⁠⁠ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್⁠⁠⁠ “ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುNovರಾತ್ರಿ ಸರಣಿ, ದಿನ ೮, ಮಿಥ್ಯೆ ೮ : ಕನ್ನಡದ ವೈಜ್ಞಾನಿಕ ದೌರ್ಬಲ್ಯ೮. ಮುಂದುವರೆದ ವಿಜ್ಞಾನ ಮತ್ತು ತಾಂತ್ರಿಕ ಶಿಕ್ಷಣ ಕನ್ನಡದಲ್ಲಿ ಅಸಾಧ್ಯತಪ್ಪು. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಮತ್ತು ಅದರ ಅನೇಕ ಘಟಕಗಳು, ಪ್ರಾಧಿಕಾರಗಳು ಸಾಕಷ್ಟು ಕೆಲಸ ಮಾಡಿವೆ, ಮಾಡುತ್ತಿವೆ. ಕನ್ನಡದಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಪುಸ್ತಕಗಳ ಪ್ರಕಟಣೆ ವಿವಿಧ ಕ್ಷೇತ್ರಗಳ ಪಾರಿಭಾಷಿಕ ಪದಗಳ ಪಟ್ಟಿ ವಿಜ್ಞಾನ ಪ್ರದರ್ಶನ, ಮತ್ತು ಕಾರ್ಯಾಗಾರಗಳನ್ನು ನಡೆಸುತ್ತಿವೆ. ಕರ್ನಾಟಕ ವಿಜ್ಞಾನ ಪರಿಷತ್ತು ನಿರಂತರ ದುಡಿಯುತ್ತಿದೆ. ಸದ್ಯ, ಕನ್ನಡದಲ್ಲಿ ಮುಂದುವರೆದ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿಲ್ಲ, ನಿಜ; ಆದರೆ ಹಾಗೆ ಕಲಿಯುವುದೇ ಅಸಾಧ್ಯ ಎನ್ನುವುದು ತಪ್ಪು. ಕನ್ನಡದಲ್ಲಿ ಕಲಿತ ವಿಜ್ಞಾನದ ವಿದ್ಯಾರ್ಥಿಗಳು ಸಮರ್ಥ ವಿಜ್ಷಾನಿಗಳು, ಇಂಜಿನಿಯರುಗಳು, ವೈದ್ಯರು, ಮತ್ತು ಸಂಶೋಧಕರು ಆಗಿದ್ದಾರೆ.ಕನ್ನಡದ ಮರೆವಿನ ಮಿಥ್ಯೆ ೯ನ್ನು ನಾಳೆ ಅರಿತುಕೊಳ್ಳೋಣನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೮, ಅಕ್ಟೋಬರ ೩೦, ೨೦೨೩
2023-10-3002 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada GuttuNovರಾತ್ರಿ ಸರಣಿ, ದಿನ ೭, ಮಿಥ್ಯೆ ೭ : ಕನ್ನಡದ ಕಠಿನತೆ👍 Like it? ...... ⁠⁠⁠Subscribe and Share! ⁠⁠⁠👁️ ⁠⁠⁠Watch it⁠⁠⁠  🕮 ⁠⁠⁠Read it ⁠⁠⁠  👂 ⁠⁠⁠Listen it⁠⁠⁠ 📧 ⁠⁠⁠Subscribe to our newsletter⁠⁠⁠⁠⁠⁠ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್⁠⁠⁠ “ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುNovರಾತ್ರಿ ಸರಣಿ, ದಿನ ೭, ಮಿಥ್ಯೆ ೭ : ಕನ್ನಡದ ಕಠಿನತೆ೭. ಕನ್ನಡ ಕಲಿಯುವುದು ಸುಲಭವಲ್ಲತಪ್ಪು. ಇದು ಕನ್ನಡವನ್ನು ಇಂಗ್ಲೀಷಿಗೆ ಮೇಲ್ನೋಟದಲ್ಲಿ ಹೋಲಿಸಿ ಸಾಮಾನ್ಯವಾಗಿ ಹೇಳುವ ಹಗುರ ಮಾತು. "ಕನ್ನಡದಲ್ಲಿ ೪೯ ಅಕ್ಷರಗಳು ಮತ್ತು ಅವುಗಳ ಒತ್ತಕ್ಷರಗಳು ಇವೆ; ಇಂಗ್ಲಿಷಲ್ಲಿ ಕೇವಲ ೨೬" ಎಂಬುದು ಅವರ ವಾದ, ಕೇವಲ ಸಂಖ್ಯೆಗಳ ಗುದ್ದಾಟ. ಕೆದಕಿ ನೋಡಿದರೆ, ಇಂಗ್ಲೀಷ್ ನಲ್ಲಿ ದೊಡ್ಡ ಮತ್ತು ಸಣ್ಣ ಅಕ್ಷರಗಳು ಸೇರಿ ೫೨ ಅಕ್ಷರಗಳು ಮೇಲಾಗಿ ೪೪ ಉಲಿಮೆಗಳು (phonemes) ಕೂಡ ಇವೆ. ಉಚ್ಚಾರಕ್ಕೂ ಬರೆಯುವುದಕ್ಕೂ ಏಕರೂಪಿ ಸಂಬಂಧವಿಲ್ಲ. ಕನ್ನಡ ವರ್ಣಮಾಲೆ ತಾರ್ಕಿಕವಾಗಿದ್ದು ಮತ್ತು ಉಲಿಮಿಕ (phonetic) ಆಗಿದೆ. ಸಂಧಿ, ಸಮಾಸ, ಮತ್ತು ಹೊಸ ಪದಗಳನ್ನು ಹುಟ್ಟಿಸಿಕೊಳ್ಳಲು ತದ್ಭವ ನಿಯಮಗಳಿವೆ. ಮೇಲಾಗಿ ಕನ್ನಡ ಅರ್ಥ ದೃಷ್ಟಿಯಿಂದ (semantically) ಶ್ರೀಮಂತವಾಗಿದೆ.ಕನ್ನಡದ ವೈಜ್ಞಾನಿಕ ದೌರ್ಬಲ್ಯದ ಮಿಥ್ಯೆ ೮ನ್ನು ನಾಳೆ ಅರಿತುಕೊಳ್ಳೋಣನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೭, ಅಕ್ಟೋಬರ ೨೯, ೨೦೨೩
2023-10-2902 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada GuttuNovರಾತ್ರಿ ಸರಣಿ, ದಿನ ೬,ಮಿಥ್ಯೆ ೬: ಕನ್ನಡದ ದುಷ್ಪ್ರಭಾವ👍 Like it? ...... ⁠⁠⁠Subscribe and Share! ⁠⁠⁠👁️ ⁠⁠⁠Watch it⁠⁠⁠  🕮 ⁠⁠⁠Read it ⁠⁠⁠  👂 ⁠⁠⁠Listen it⁠⁠⁠ 📧 ⁠⁠⁠Subscribe to our newsletter⁠⁠⁠⁠⁠⁠ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್⁠⁠⁠ “ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುNovರಾತ್ರಿ ಸರಣಿ: ಬನ್ನಿ, ದಿನಕ್ಕೊಂದು ತಪ್ಪು ತಿಳುವಳಿಕೆಯನ್ನು, ತಾಯಿ ಭುವನೇಶ್ವರಿಯ ಕೃಪಾಕಟಾಕ್ಷದಿಂದ ಪರಿಹರಿಸಿಕೊಂಡು, ೧೦ನೆಯ ದಿನ, ಅಂದರೆ ನವಂಬರ ೧ರಂದು, ತಿಳಿಮನಸ್ಸಿನಿಂದ ರಾಜ್ಯೋತ್ಸವವನ್ನು ಆಚರಿಸೋಣ.೬. ಕನ್ನಡ ಕಲಿತರೆ ಇತರ ಭಾಷೆಗಳ ಕಲಿಕೆ ಕುಂಠಿತವಾಗುತ್ತದೆತಪ್ಪು. ಈ ಕಲ್ಪನೆ ತಪ್ಪು ಎಂದು ಅನೇಕ ವರದಿಗಳು ಸಾಬೀತು ಮಾಡಿವೆ. ಮೇಲಾಗಿ ಎರಡು ಭಾಷೆಗಳನ್ನು ಕಲಿತಾಗ ಬುದ್ದಿ ಚುರುಕಾಗುವುದು ಎಂದು ತಿಳಿಸುತ್ತವೆ. ಬೆಂಗಳೂರಿನಲ್ಲಿ, ಪ್ರಚಲಿತವಿರುವ ಎಲ್ಲ ಭಾಷೆಗಳನ್ನು ತಿಳಿದು ವ್ಯವಹರಿಸುವವರು ಕನ್ನಡಿಗರು ಮಾತ್ರ! ಬೆಂಗಳೂರು ಭಾರತದ ಸಿಲಿಕಾನ್ ನಗರವಾಗಿ ಎಲ್ಲ ಭಾಷಿಕರನ್ನು ಆಕರ್ಷಿಸುತ್ತಿರುವುದು ಸುಮ್ಮನೆ ಏನು? ಅತ್ಯಂತ ಸೃಜನ ಶೀಲ ಉದ್ಯಮ, ಸಾಹಿತ್ಯ, ಸಂಸ್ಕೃತಿಗಳ ಕೇಂದ್ರವಾಗಿ ಸಿಲಿಕಾನ್ ನಗರ ಎಂದು ಹೆಸರಾಗಿದ್ದು, ಇದಕ್ಕೆ ಕನ್ನಡಿಗರ ಬಹುಭಾಷಿಕತನವೆ ಕಾರಣ ಅಲ್ಲವೆ? ಕನ್ನಡದ ಕಠಿನತೆಯ ಮಿಥ್ಯೆ ೭ನ್ನು ನಾಳೆ ಅರಿತುಕೊಳ್ಳೋಣನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೬, ಅಕ್ಟೋಬರ ೨೮, ೨೦೨೩
2023-10-2802 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada GuttuNovರಾತ್ರಿ ಸರಣಿ, ದಿನ ೫, ಮಿಥ್ಯೆ ೫: ಕನ್ನಡದ ಅದೈವಿಕತೆ👍 Like it? ...... ⁠⁠⁠Subscribe and Share! ⁠⁠⁠👁️ ⁠⁠⁠Watch it⁠⁠⁠  🕮 ⁠⁠⁠Read it ⁠⁠⁠  👂 ⁠⁠⁠Listen it⁠⁠⁠ 📧 ⁠⁠⁠Subscribe to our newsletter⁠⁠⁠⁠⁠⁠ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್⁠⁠⁠ “ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುNovರಾತ್ರಿ ಸರಣಿ: ಬನ್ನಿ, ದಿನಕ್ಕೊಂದು ತಪ್ಪು ತಿಳುವಳಿಕೆಯನ್ನು, ತಾಯಿ ಭುವನೇಶ್ವರಿಯ ಕೃಪಾಕಟಾಕ್ಷದಿಂದ ಪರಿಹರಿಸಿಕೊಂಡು, ೧೦ನೆಯ ದಿನ, ಅಂದರೆ ನವಂಬರ ೧ರಂದು, ತಿಳಿಮನಸ್ಸಿನಿಂದ ರಾಜ್ಯೋತ್ಸವವನ್ನು ಆಚರಿಸೋಣ.Novರಾತ್ರಿ ಸರಣಿ, ದಿನ ೫, ಮಿಥ್ಯೆ ೫ : ಕನ್ನಡದ ಅದೈವಿಕತೆ೪. ಕನ್ನಡ ದೇವಭಾಷೆ (ಧಾರ್ಮಿಕ ಭಾಷೆ) ಅಲ್ಲತಪ್ಪು. ಹಲವಾರು ಜೈನ ಗ್ರಂಥಗಳು ಕನ್ನಡದಲ್ಲಿ ಇವೆ. ಲಿಂಗಾಯತ ಭಾಷೆ ಕನ್ನಡ. ಪುರಂದರಾದಿ ದಾಸಶ್ರೇಷ್ಠರೆಲ್ಲ ಕನ್ನಡದಲ್ಲೆ ಆರಾಧಿಸಿ ವಿಪುಲ ಸಂಗೀತ-ಸಾಹಿತ್ಯ ಸೃಷ್ಟಿಸಿದ್ದಾರೆ. “ದೇವರಿಗೆ ತಿಳಿಯುವುದು ಒಂದೇ ಭಾಷೆ, ಅದು ಕನ್ನಡ ಅಲ್ಲ” ಎನ್ನುವುದು ಹಾಸ್ಯಾಸ್ಪದ. ಸರ್ವಜ್ಞನಾದ ದೇವರಿಗೆ ಎಲ್ಲ ಭಾಷೆಗಳೂ ಗೊತ್ತು. ಸಂಸ್ಕೃತವೂ ದೇವಭಾಷೆ, ಕನ್ನಡವೂ ದೇವಭಾಷೆ; ತಮಿಳು, ತೆಲುಗು, ತುಳು, ಬಡಗ, ಕೊಡವ, ಕೊರಗ, ಕುಡಿಯ, ಗೊಂಡಿ, ಕೊಂಡ. ಮಂಡ, ಕುವಿ, ಕೋಯಾ, ಕೊಲಾಮಿ, ಕುರುಖ, ಒಳ್ಳಾರಿ, ತೋಡ, ದುರುವ, ಬ್ರಾಹ್ವಿಗಳೂ ದೇವಭಾಷೆಗಳು.ಭಕ್ತಿಯೆ ಪರಮ ಭಾಷೆ ಆಗಿರುವ ದೇವರಿಗೆ "ಸುಲಿದ ಬಾಳೆಯ ಹಣ್ಣಿನಂದದಿ ಸುಲಭವಾಗಿಹ ಕನ್ನಡ" ಅಂತರಂಗದ ಮಾತು.ಕನ್ನಡದ ದುಷ್ಪ್ರಭಾವದ ಮಿಥ್ಯೆ ೬ನ್ನು ನಾಳೆ ಅರಿತುಕೊಳ್ಳೋಣನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೫, ಅಕ್ಟೋಬರ ೨೭, ೨೦೨೩
2023-10-2702 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada GuttuNovರಾತ್ರಿ ಸರಣಿ, ದಿನ ೪,ಮಿಥ್ಯೆ ೪: ಕನ್ನಡದ ಪ್ರಾಂತೀಯತೆ👍 Like it? ...... ⁠⁠Subscribe and Share! ⁠⁠👁️ ⁠⁠Watch it⁠⁠  🕮 ⁠⁠Read it ⁠⁠  👂 ⁠⁠Listen it⁠⁠ 📧 ⁠⁠Subscribe to our newsletter⁠⁠⁠⁠ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್⁠⁠ “ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುNovರಾತ್ರಿ ಸರಣಿ: ಬನ್ನಿ, ದಿನಕ್ಕೊಂದು ತಪ್ಪು ತಿಳುವಳಿಕೆಯನ್ನು, ತಾಯಿ ಭುವನೇಶ್ವರಿಯ ಕೃಪಾಕಟಾಕ್ಷದಿಂದ ಪರಿಹರಿಸಿಕೊಂಡು, ೧೦ನೆಯ ದಿನ, ಅಂದರೆ ನವಂಬರ ೧ರಂದು, ತಿಳಿಮನಸ್ಸಿನಿಂದ ರಾಜ್ಯೋತ್ಸವವನ್ನು ಆಚರಿಸೋಣ.Novರಾತ್ರಿ ಸರಣಿ, ದಿನ ೪, ಮಿಥ್ಯೆ ೪ : ಕನ್ನಡದ ಪ್ರಾಂತೀಯತೆ೪. ಕನ್ನಡ ಒಂದು ಪ್ರಾಂತೀಯ ಭಾಷೆ (Kannada is a regional, provincial, parochial, or a vernacular language)ತಪ್ಪು. ಕನ್ನಡಕ್ಕೆ ಯಾವ ಸೀಮೆಯೂ ಇಲ್ಲ. ಕನ್ನಡಿಗರು ಭಾರತದ ತುಂಬ ಇದ್ದಾರೆ. ವಿದೇಶಗಳಲ್ಲಿಯೂ ಗಣನೀಯ ಸಂಖ್ಯೆಯಲ್ಲಿ ಇದ್ದಾರೆ. ಇಲ್ಲಿಯೂ ಅಲ್ಲಿಯೂ ಕನ್ನಡ ಮಾತಾಡುತ್ತಾರೆ.ಪ್ರಶ್ನೆ "ಕನ್ನಡ ಮಾತ್ರ ಗೊತ್ತಿರುವ ಒಬ್ಬ ಭಾರತದ ಎಲ್ಲೆಡೆ ಬದುಕುಳಿಯಬಹುದೆ? ಜಗತ್ತಿನ ಎಲ್ಲೆಡೆ ಬದುಕುಳಿಯಬಹುದೆ?" ಎಂದಾದರೆ ಉತ್ತರ “ಇಲ್ಲ.” ಜಗತ್ತಿನ ಎಲ್ಲ ಭಾಷೆಗಳಿಗೂ ಇದೇ ಉತ್ತರ! ಕನ್ನಡ ಗೊತ್ತಿದ್ದರೆ ಕರ್ನಾಟಕದಲ್ಲಿ ಖಂಡಿತ ಬಾಳಬಹುದು ಮತ್ತು ಬೆಳೆಯಬಹುದು. ಆದ್ದರಿಂದ ಕನ್ನಡ ಮತ್ತು ಇತರ ಹಲವು ಭಾರತೀಯ ಭಾಷೆಗಳು ರಾಜ್ಯಗಳ ಭಾಷಗಳು. ಕನ್ನಡ ಕರ್ನಾಟಕ ರಾಜ್ಯದ ಭಾಷೆ. ಈ ಮೊದಲು ಹೇಳಿದಂತೆ, ಎಲ್ಲ ಭಾರತೀಯ ಭಾಷೆಗಳು ರಾಷ್ಟ್ರದ ಭಾಷೆಗಳು ಮತ್ತೂ ಭಾರತೀಯ ಸಂಸ್ಕೃತಿಯ ಆಕರ ಮತ್ತು ವಾಹಿನಿಗಳು. ಆದ್ದರಿಂದ ಕನ್ನಡವನ್ನು (ಭಾರತೀಯ ಭಾಷೆಯನ್ನು) regional, provincial, parochial, vernacular, ಪ್ರಾಂತೀಯ, ಎಂದೆಲ್ಲ ಸಂಬೋಧಿಸುವುದು ತಪ್ಪು. ನಿಜವಾಗಿಯೂ, ಇಂಥ ಮಾತುಗಳು ಹೀಗೆ ಅಸಡ್ಡೆಯಿಂದ ಮಾತಾಡುವವರ ಕಲೋನಿಯಲ್ ಗುಲಾಮೀಯ ಮಾನಸಿಕ ಮತ್ತು ಸಾಂಸ್ಕೃತಿಕ ದೌರ್ಬಲ್ಯಕ್ಕೆ ಕನ್ನಡಿ ಹಿಡಿಯುತ್ತವೆ.ಕನ್ನಡದ ಅದೈವಿಕತೆಯ ಮಿಥ್ಯೆ ೫ನ್ನು ನಾಳೆ ಅರಿತುಕೊಳ್ಳೋಣನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೪, ಅಕ್ಟೋಬರ ೨೬, ೨೦೨೩
2023-10-2603 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada GuttuNovರಾತ್ರಿ ಸರಣಿ : ದಿನ ೩, ಮಿಥ್ಯೆ೩ - ಕನ್ನಡದ ಅರಾಷ್ಟ್ರೀಯತೆ👍 Like it? ...... ⁠⁠Subscribe and Share! ⁠⁠👁️ ⁠⁠Watch it⁠⁠  🕮 ⁠⁠Read it ⁠⁠  👂 ⁠⁠Listen it⁠⁠ 📧 ⁠⁠Subscribe to our newsletter⁠⁠⁠⁠ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್⁠⁠ “ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು೩. ಕನ್ನಡ ರಾಷ್ಟ್ರೀಯ ಭಾಷೆ ಅಲ್ಲತಪ್ಪು. ಭಾರತದ ರಾಷ್ಟ್ರ ಭಾಷೆ( National Language of India)ಅನ್ನುವುದೇ ಇಲ್ಲ. ರಾಷ್ಟ್ರ ಭಾಷೆ ಎಂದು ಯಾವ ಭಾಷೆಯನ್ನೂ ಗುರುತಿಸಿಲ್ಲ. ಸಂವಿಧಾನದ ಅನುಚ್ಛೇದ ೧೨೦ರಲ್ಲಿ ಕನ್ನಡ ಮತ್ತು ಹಿಂದಿ ಸಹಿತ ೨೨ ಭಾಷೆಗಳನ್ನು ಭಾರತದ ಅಧಿಕೃತ ಭಾಷೆಗಳು ಎಂದು ನಮೂದಿಸಲಾಗಿದೆ. ಇವು ಯಾವೂ ರಾಷ್ಟ್ರ ಭಾಷೆಗಳು(national language)ಗಳು ಅಲ್ಲ; ಎಲ್ಲವೂ ರಾಷ್ಟ್ರೀಯ ಭಾಷೆಗಳು, ಅಂದರೆ ರಾಷ್ಟ್ರಕ್ಕೆ ಸಂಬಂಧಿಸಿದ ಭಾಷೆಗಳು.ಸಂವಿಧಾನದಲ್ಲಿ ನಮೂದಿಸದ ಇನ್ನೂ ಸಾವಿರಾರು ಭಾರತೀಯ ಭಾಷೆಗಳು ಇವೆ. ಜನಮನದಲ್ಲಿ, ನಡೆನುಡಿಗಳಲ್ಲಿ ನೆಲೆಗೊಂಡಿರುವ ಈ ಭಾಷೆಗಳನ್ನು ಭಾರತದ ರಾಷ್ಟ್ರೀಯ ಭಾಷೆಗಳು ಅಲ್ಲ ಅನ್ನಬಹುದೇ?‌ಕನ್ನಡದ ಪ್ರಾಂತೀಯತೆಯ ಮಿಥ್ಯೆ ೪ನ್ನು ನಾಳೆ ಅರಿತುಕೊಳ್ಳೋಣನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೩, ಅಕ್ಟೋಬರ ೨೫, ೨೦೨೩
2023-10-2502 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada GuttuNovರಾತ್ರಿ ಸರಣಿ : ದಿನ ೨, ಮಿಥ್ಯೆ೨ - ಕನ್ನಡ ಲಿಪಿ👍 Like it? ...... ⁠⁠Subscribe and Share! ⁠⁠👁️ ⁠⁠Watch it⁠⁠  🕮 ⁠⁠Read it ⁠⁠  👂 ⁠⁠Listen it⁠⁠ 📧 ⁠⁠Subscribe to our newsletter⁠⁠⁠⁠ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್⁠⁠ “ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುNovರಾತ್ರಿ ಸರಣಿ, ದಿನ ೨, ಮಿಥ್ಯೆ ೨ : ಕನ್ನಡ ಲಿಪಿ೨. ಕನ್ನಡ ಲಿಪಿ ದೇವನಾಗರಿ ಲಿಪಿಯಿಂದ ಹುಟ್ಟಿದೆತಪ್ಪು. ಕನ್ನಡ ಮತ್ತು ದೇವನಾಗರಿ ಸಹಿತ ಬಹುತೇಕ ಎಲ್ಲ ಭಾರತೀಯ ಲಿಪಿಗಳಿಗೂ ಮೂಲ ಬ್ರಾಹ್ಮೀ ಲಿಪಿ. ಅಶೋಕನ ಶಿಲಾ ಶಾಸನಗಳು (ಕ್ರಿಪೂ ೨ನೆ ಶತಮಾನ) ಬ್ರಾಹ್ಮೀ ಲಿಪಿಯಲ್ಲಿ ಇವೆ.ಕದಂಬರ ಕಾಲದಲ್ಲಿ (ಕ್ರಿ.ಶ. ೩೪೫-೫೪೦)ಬ್ರಾಹ್ಮೀ ಲಿಪಿ ಮಾರ್ಪಾಟಾಗಿದ್ದು ಕನ್ನಡದ ಮೊದಲ ಲಿಪಿ ಎಂದು ಗುರುತಿಸಲಾಗಿದೆ. ಇಂದಿನ ಕನ್ನಡ ಲಿಪಿ ಕದಂಬ ಲಿಪಿಯಿಂದ ನೇರವಾಗಿ ವಿಕಾಸಗೊಂಡಿದೆ.ಗುಪ್ತರ ಕಾಲದಲ್ಲಿ (೪-೬ನೆ ಶತಮಾನ) ಬ್ರಾಹ್ಮೀಯಿಂದ ನಾಗರೀ, ಶಾರದಾ ಮತ್ತಿತರ ಲಿಪಿಗಳು ಹುಟ್ಚಿದವು. ನಂತರ, ನಾಗರಿಯಿಂದ ದೇವನಾಗರಿ, ಬಂಗಾಲಿ, ತಿಬೇಟಿ ಮಂತಾದ ಲಿಪಿಗಳು ಹುಟ್ಚಿದವು.ಅಂದರೆ ಕನ್ನಡ ಲಿಪಿ ದೇವನಾಗರಿಗಿಂತ ಮುಂಚೆಯೇ ಮತ್ತು ಸ್ವತಂತ್ರವಾಗಿ ಹುಟ್ಚಿದ್ದು.ಕನ್ನಡದ ಅರಾಷ್ಟ್ರೀಯತೆಯ ಮಿಥ್ಯೆ ೩ನ್ನು ನಾಳೆ ಅರಿತುಕೊಳ್ಳೋಣನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೨, ಅಕ್ಟೋಬರ ೨೪, ೨೦೨೩
2023-10-2402 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada GuttuNovರಾತ್ರಿ ಸರಣಿ : ದಿನ ೧, ಮಿಥ್ಯೆ೧ - ಕನ್ನಡದ ಹುಟ್ಟು👍 Like it? ...... ⁠Subscribe and Share! ⁠👁️ ⁠Watch it⁠  🕮 ⁠Read it ⁠  👂 ⁠Listen it⁠ 📧 ⁠Subscribe to our newsletter⁠⁠ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್⁠ “ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುNovರಾತ್ರಿ ಸರಣಿ: ಬನ್ನಿ, ದಿನಕ್ಕೊಂದು ತಪ್ಪು ತಿಳುವಳಿಕೆಯನ್ನು, ತಾಯಿ ಭುವನೇಶ್ವರಿಯ ಕೃಪಾಕಟಾಕ್ಷದಿಂದ ಪರಿಹರಿಸಿಕೊಂಡು, ೧೦ನೆಯ ದಿನ, ಅಂದರೆ ನವಂಬರ ೧ರಂದು, ತಿಳಿಮನಸ್ಸಿನಿಂದ ರಾಜ್ಯೋತ್ಸವವನ್ನು ಆಚರಿಸೋಣ.Novರಾತ್ರಿ ಸರಣಿ, ದಿನ ೧, ಮಿಥ್ಯೆ೧ : ಕನ್ನಡದ ಹುಟ್ಟುಸಂಸ್ಕೃತದಿಂದ ಕನ್ನಡ ಹುಟ್ಟಿದೆತಪ್ಪು. ಕನ್ನಡ ಸಂಸ್ಕೃತದಿಂದ ವಿಭಿನ್ನವಾದ ಮತ್ತು ಬೇರೆ ಮೂಲದ ಭಾಷೆ. ಕನ್ನಡ ದ್ರಾವಿಡ ಭಾಷಾ ಗುಂಪಿಗೆ ಸೇರಿದ ಒಂದು ಸ್ವತಂತ್ರ ಭಾಷೆ. ಜನರ ಬೆರೆಕೆ ಮತ್ತು ಪರಸ್ಪರ ವ್ಯವಹಾರಗಳಿಂದ ಭಾಷೆಗಳು ಒಂದರ ಮೇಲೊಂದು ಪ್ರಭಾವ ಬೀರುವುದು ಸಹಜ. ಸಂಸ್ಕೃತ ಮತ್ತು ಪ್ರಾಕೃತ ಎರಡೂ ಕನ್ನಡದ ಮೇಲೆ ಬಹಳ ಪ್ರಭಾವ ಬೀರಿವೆ. ಹಾಗೆಯೆ, ಕನ್ನಡ ಕೂಡ ಸಂಸ್ಕೃತದ ಮೇಲೆ ಪ್ರಭಾವ ಬೀರಿದೆ. ಕನ್ನಡ ಪದಗಳು "ತತ್ಸಮಗೊಂಡು" ಸಂಸ್ಕೃತದಲ್ಲಿ ಸೇರಿವೆ. ಇಂಥ ಅನೇಕ ಪದಗಳನ್ನು ರೆ. ಕಿಟೆಲ್ ತಮ್ಮ ಕೋಶದಲ್ಲಿ ಪಟ್ಟಿ ಮಾಡಿದ್ದಾರೆ.ಕನ್ನಡ ವ್ಯಾಕರಣದ ಮೇಲೆ ಸಂಸ್ಕೃತದ ಛಾಯೆ ಸಾಕಷ್ಟು ಬಿದ್ದಿದೆ. ಕನ್ನಡದ ನಾಲಗೆಗೆ ಒಗ್ಗದೆ ಇದ್ದರೂ, ಕನ್ನಡದಲ್ಲಿ ಸಂಸ್ಕೃತ ವರ್ಣಗಳು ಮತ್ತು ಸಂಸ್ಕೃತ ಮೂಲದ ಪದಗಳು ಹಾಸುಹೊಕ್ಕಾಗಿ ಸೇರಿಕೊಂಡಿವೆ; ಪೂರ್ತಿ ಕನ್ನಡದಲ್ಲಿ ಬೆರೆತುಕೊಳ್ಳದೆ, ಇಂದಿಗೂ ಸಂಸ್ಕೃತ ವ್ಯಾಕರಣ ನಿಯಮಗಳನ್ನೆ ಅನುಸರಿಸುತ್ತ ಪ್ರತ್ಯೇಕತೆಯನ್ನು, ಕಾಪಾಡಿಕೊಂಡಿವೆ. ಆದ್ದರಿಂದ, ಪುರಾತನವಾದ, ಜ್ಞಾನರಾಶಿಯನ್ನು ಹೊಂದಿರುವ, ಸಂಸ್ಕೃತವನ್ನು ಕನ್ನಡದ ಜನ್ಮದಾತೆ ಎನ್ನುವುದಕ್ಕಿಂತ ಕನ್ನಡದ ದೃಷ್ಟಿಯಿಂದ, ನೆರೆಮನೆಯ ಜಾಣ ಅಜ್ಜಿ ಎನ್ನುವುದು ಉಚಿತ.ಕನ್ನಡ ಲಿಪಿಯ ಮಿಥ್ಯೆ ೨ನ್ನು ನಾಳೆ ಅರಿತುಕೊಳ್ಳೋಣನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೧, ಅಕ್ಟೋಬರ ೨೩, ೨೦೨೩
2023-10-2302 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada GuttuNovರಾತ್ರಿ ಸರಣಿ : ಏನಿದು Novರಾತ್ರಿ?👍 Like it? ...... Subscribe and Share! 👁️ Watch it 🕮 Read it  👂 Listen it 📧 Subscribe to our newsletterಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್ ಅಕ್ಟೋಬರ್ 23ರಿಂದ Novರಾತ್ರಿ ಪ್ರಾರಂಭ!ಏನಿದು Novರಾತ್ರಿ? ಒಂಬತ್ತು ದಿನ ಒಂದೊಂದು ಕನ್ನಡ ವಿಷಯದ ಮೇಲೆ ಬೆಳಕು ಚೆಲ್ಲಿ ತಿಳಿವು ಹೀರುತ್ತ, ಹತ್ತನೆಯ ದಿನ, ಅಂದರೆ ನವೆಂಬರ್ ೧ ರಂದು, ತಿಳಿಮನಸ್ಸಿನಿಂದ ರಾಜ್ಯೋತ್ಸವ ಆಚರಿಸುವುದು!ಹಚ್ಚೇವು ಕನ್ನಡದ ದೀಪಹಚ್ಚೇವು ಕನ್ನಡದ ದೀಪಬಹುದಿನಗಳಿಂದ ಮೈಮರೆವೆಯಿಂದಕೂಡಿರುವ ಕೊಳೆಯ ಕೊಚ್ಚೇವುಎಲ್ಲೆಲ್ಲಿ ಕನ್ನಡದ ಕಂಪು ಸೂಸಲುಅಲ್ಲಲ್ಲಿ ಕರಣ ಚಾಚೇವು - ಡಿ.ಎಸ್.‌ ಕರ್ಕಿಕಾಯ್ದು ನೋಡಿ:ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುಹಮ್ಮುಗೆ: ದಿನ ೧, ಮಿಥ್ಯೆ ೧ : ಕನ್ನಡದ ಹುಟ್ಟು ದಿನ ೨, ಮಿಥ್ಯೆ ೨ : ಕನ್ನಡ ಲಿಪಿ ದಿನ ೩, ಮಿಥ್ಯೆ ೩ : ಕನ್ನಡದ ಅರಾಷ್ಟ್ರೀಯತೆ ದಿನ ೪, ಮಿಥ್ಯೆ ೪ : ಕನ್ನಡದ ಪ್ರಾಂತೀಯತೆ ದಿನ ೫, ಮಿಥ್ಯೆ ೫ : ಕನ್ನಡದ ಅದೈವಿಕತೆ ದಿನ ೬, ಮಿಥ್ಯೆ ೬ : ಕನ್ನಡದ ದುಷ್ಪ್ರಭಾವ ದಿನ ೭, ಮಿಥ್ಯೆ ೭ : ಕನ್ನಡದ ಕಠಿನತೆ ದಿನ ೮, ಮಿಥ್ಯೆ ೮ : ಕನ್ನಡದ ವೈಜ್ಞಾನಿಕ ದೌರ್ಬಲ್ಯ ದಿನ ೯, ಮಿಥ್ಯೆ ೯ : ಕನ್ನಡದ ಮರೆವು ದಿನ ೧೦, ಮಿಥ್ಯೆ ೧೦ : ಕನ್ನಡದಲ್ಲಿ ಆಡಳಿತ ರಾಜ್ಯೋತ್ಸವದ ಬೋನಸ್! ಮಿಥ್ಯೆ ೧೧. ಕನ್ನಡಿಗರು ಅಭಿಮಾನಶೂನ್ಯರು!
2023-10-1902 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಹಳೆಯದೆಂದೆಲ್ಲವೂ ಒಳಿತೆನಲು ಹೊಲ್ಲ - ಕಾಳಿದಾಸನ ಕಾವ್ಯದೃಷ್ಟಿ : Kalidasa on Poetry - Old and New👍 Like it? ...... Subscribe and Share! 👁️ Watch it 🕮 Read it  👂 Listen it 📧 Subscribe to our newsletter ಹಳೆಯದೆಂದೆಲ್ಲವೂ ಒಳಿತೆನಲು ಹೊಲ್ಲ ಕಾಳಿದಾಸನ ಕಾವ್ಯದೃಷ್ಟಿಪುರಾಣ ಅಂದರೆ ಹಿಂದಿನದು, ಹಳೆಯದು. ಅದೆಲ್ಲ ಒಳ್ಳೆಯದು. ಹೊಸದೆಲ್ಲವೂ ಕೆಟ್ಟದ್ದು. ಹಿಂದಿನದನ್ನು ಪ್ರಶ್ನಾತೀತವಾಗಿ ಪಾಲಿಸಬಹುದು. ಆದರೆ ಹೊಸದನ್ನು ಒಪ್ಪಿಕೊಳ್ಳುವ ಮಾತೇ ಇಲ್ಲ. ಯಾವುದೇ ಹೊಸ ಮಾರ್ಗ, ಹೊಸ ವಿಚಾರವನ್ನು ಅನುಸರಿಸುವುದರಲ್ಲಿ ಮನುಷ್ಯನಿಗೆ ಅಳುಕು ಸಹಜವಾದದ್ದು. ಆದರೆ ಈ ಸಾಮಾನ್ಯ ನಿಲುವು ಎಷ್ಟು ಸರಿ? ಕಾಳಿದಾಸ ಹೇಳಿದ್ದೇನು? ಕವಿ ಕಾಣದ್ದನ್ನು ಕಂಡವರಾರು? ಗಾದೆ ಮಾತು ಹೇಳಿದ್ದೇನು? ಪುರಾಣಮಿತ್ಯೇವ ನ ಸಾಧು ಸರ್ವಂ ನ ಚಾಪಿ ಕಾವ್ಯಂ ನವಮಿತ್ಯವದ್ಯಮ್; ಸಂತಃ ಪರೀಕ್ಷ್ಯಾನ್ಯತರದ್ಭಜಂತೇ ಮೂಢಃ ಪರಪ್ರತ್ಯಯನೇಯಬುದ್ಧಿಃ. - ಕಾಳಿದಾಸ (ಮಾಲವಿಕಾಗ್ನಿಮಿತ್ರ, ೧-೨)ಇದು ಕಾಳಿದಾಸನ ಮಾಲವಿಕಾಗ್ನಿಮಿತ್ರ ನಾಟಕದಲ್ಲಿ ಬರುವ ಸೂತ್ರಧಾರನ ಮಾತು.ಇದರ ಕನ್ನಡ ಭಾವಾನುವಾದ ಹೀಗಿದೆ: ಹಳೆಯದೆಂದೆಲ್ಲವೂ ಒಳಿತೆನಲು ಹೊಲ್ಲ; ಹೊಳವು ಹೊಸತೆಂದು ಹೀಗಳೆಯಲೂ ಸಲ್ಲ. ಬಲ್ಲವರು ಒಪ್ಪುವರು ಆರಯ್ದು ಎಲ್ಲ, ಹೆಡ್ಡರಿಗೆ ಹೆರನುಡಿಯೆ ನನ್ನಿ, ಸವಿಬೆಲ್ಲ!ಇಲ್ಲಿ ಪುರಾಣ ಅಂದರೆ ʼಪುರಾಣʼ,ಭಾಗವತ ಇತ್ಯಾದಿ, ಅಷ್ಟೇ ಅಲ್ಲ. ಕಾಳಿದಾಸ ಹೇಳಿದ್ದು ಕಾವ್ಯ ರಚನೆಯ ಹಿನ್ನೆಲೆಯಲ್ಲಿ. ಕಾಳಿದಾಸನಿಗಿಂತ ಮುಂಚಿನವರು, ಪೂರ್ವಸೂರಿಗಳಾದ ಭಾಸ, ಸೌಮಿಲ್ಲ ಮುಂತಾದವರು, ತಮ್ಮ ಪ್ರಸಿದ್ಧ ಕಾವ್ಯಗಳಿಂದ ಬೇರೆ ಕಾವ್ಯಗಳೆ ಇಲ್ಲ ಎನ್ನುವಂತೆ ಕಾವ್ಯದ ವ್ಯಾಖ್ಯಾನವನ್ನು ಜನಮನದಲ್ಲಿ ಸೃಷ್ಟಿಸಿದ್ದರು‌ ಎನ್ನಬಹುದು. ಇಂತಹ ವಾತಾವರಣದಲ್ಲಿ, ಎಷ್ಟೇ ಪ್ರತಿಭಾನ್ವಿತನಾಗಿದ್ದರೂ ಹೊಸ ಕವಿಯಾದ ಕಾಳಿದಾಸನಿಗೆ ಅಳುಕು ಇದ್ದದ್ದೇ. ಆಗ, ಕಾವ್ಯ, ಹೊಸದಿರಲಿ ಹಳೆಯದಿರಲಿ, ಅದರ ಗುಣಾವಗುಣಗಳನ್ನು ಪರಿಶೀಲಿಸಿ ಅದರ ಶ್ರೇಷ್ಠತೆಯನ್ನು ‌ ನಿರ್ಣಯಿಸಬೇಕು ಎಂದು, ಹಿಂದಿನವರನ್ನು ಮನ್ನಿಸುತ್ತಲೂ, ಸಹೃದಯರಲ್ಲಿ ವಿನಯಪೂರ್ವಕವಾಗಿಯೂ, ತನಗೇ ತಿರುಗೇಟು ಕೊಡುವ ಸಂಭವ ಇದ್ದರೂ, ಈ ಮಾತಿನಲ್ಲಿ ಸಮಾಧಾನ ಹೇಳಿಕೊಂಡಿದ್ದಾನೆ. ಈಗ, ಜನರ ತಿಳುವಳಿಕೆ ಕಾಳಿದಾಸನ ಹೇಳಿಕೆಯ ಕಾವ್ಯವಿಶೇಷತೆಯನ್ನು ಮೀರಿ ವಿಸ್ತರಿಸಿದೆ. ಹಳೆಯದು ಎಂದರೆ ಆಗಲೆ ಪ್ರತಿಷ್ಠಿತವಾದದ್ದು, ಯಾವುದೇ ಪ್ರಶ್ನೆ/ಸಂಶಯ/ಸಂಕೋಚ ಇಲ್ಲದೆ ಕೂಡಲೆ ಒಪ್ಪಿಕೊಳ್ಳಬೇಕಾದದ್ದು ಎನ್ನುವ ಅರ್ಥ. ಅದು ಮೂರ್ತ ವಸ್ತುವಾಗಲಿ, ಅಮೂರ್ತ ವಿಷಯವಾಗಲಿ, ಯೋಜನೆ ಆಗಲಿ, ಯೋಚನೆ ಆಗಲಿ, ರಚನೆ ಆಗಲಿ, ಬರಿ ಕಲ್ಪನೆ ಆಗಲಿ, ಎಲ್ಲದಕ್ಗೂ ಅನ್ವಯಿಸುವಂತೆ ಅರ್ಥೈಸಲಾಗಿದೆ. ಇಂಥ ಅಭಿಪ್ರಾಯವನ್ನೆ "ಅಜ್ಜ ನೆಟ್ಟ ಆಲದ ಮರ ಅಂತ ಅದಕ್ಕೆ ನೇಣು ಹಾಕಿಕೊಳ್ಳಬಹುದೆ?" ಮತ್ತು ಅನುಲೋಮವಾಗಿ, " All that glitters is not gold" ಎನ್ನುವ ಗಾದೆ ಮಾತುಗಳಲ್ಲಿ ಕಾಣಬಹುದು. ಅದಕ್ಕೇ, ರವಿ ಕಾಣದ್ದನ್ನು ಕವಿ ಕಂಡ; ಕವಿ ಕಾಣದ್ದನ್ನು? ಓದುಗ ಕಂಡ! ಇದೇ ಕಾವ್ಯದ ಲಕ್ಷಣ ಅಲ್ಲವೆ?ನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಹಳೆಯದೆಂದೆಲ್ಲವೂ ಒಳಿತೆನಲು ಹೊಲ್ಲ, ಕಾಳಿದಾಸನ ಕಾವ್ಯದೃಷ್ಟಿಕನ್ನಡ ಕಲಿ, ಬಿತ್ತರಿಕೆ, October 09, 2023kannada bhashe,vishweshwar dixit,KAR TET/HSTR/GPSTR/SDA/FDA,ಕನ್ನಡ ಭಾಷೆ,ಕನ್ನಡ ಲಿಪಿ,ಕನ್ನಡ ಕಲಿಕೆ,Kalidasa,Poetry Old Vs New
2023-10-1004 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಕನ್ನಡ ಮತ್ತು AI, ಒಂದು ಪ್ರಯೋಗ : Kannada and AI, an Experiment👍 Like it? ...... Subscribe and Share! https://www.youtube.com/mykannadakali/?sub_confirmation=1👁️ Watch at https//www.youtube.com/channel/UCCON6n4lEgj6NsPqCLZdDSw🕮 Read at http://kannadakali.com/publications/podcasts👂 Listen at https://anchor.fm/kannadakali📧 Subscribe to our newsletter: https://kannadakali.com/kankalimitraru/?p=subscribeಕನ್ನಡ ಮತ್ತು AI, ಒಂದು ಪ್ರಯೋಗ : Kannada and AI, AN Experimentಕಳೆದ ಹತ್ತು ವರ್ಷಗಳಲ್ಲಿ ಗಣಕಗಳು ಅಗಾಧವಾದ ಸಾಮರ್ಥ್ಯವನ್ನು ಕಂಡಿವೆ. ಯಂತ್ರಾಂಶ (hardware)ಮತ್ತು ತಂತ್ರಾಂಶ (software)ಎರಡೂ ವರ್ಷ ವರ್ಷವೂ ಹೆಚ್ಚುತ್ತಿರುವ ಗತಿಯಲ್ಲಿ ಅಭಿವೃದ್ಧಿ ಹೊಂದಿವೆ. ಚಂದ್ರನ ಮೇಲೆ ಇಳಿದ ಮೊದಲ ಅಪೋಲೋ ನಿಯೋಜನೆಯಲ್ಲಿಯ ಗಣಕಗಳಿಗಿಂತ ಇಂದಿನ ಮೊಬೈಲ ದೂರವಾಣಿಗಳು ಕೂಡ ಸಾವಿರಾರು ಪಟ್ಟು ಶಕ್ತಿಯುತವಾಗಿವೆ ಅಂದರೆ ಇಂದಿನ ಸುಪರ-ಗಣಕಗಳ ಸಾಮರ್ಥ್ಯವನ್ನು ನೀವೇ ಊಹಿಸಿಕೊಳ್ಳಿ. ಚದುರಂಗದಾಟ, ಸಹಜ ನುಡಿ ತಿಳಿವಿಕೆ (natural language understanding), ಮಾತು ಗ್ರಹಿಕೆ ಇತ್ಯಾದಿ ಯಾವನ್ನು ನಾವು ಮಾನವನ ಬುದ್ದಿಮತ್ತೆಗೆ ಮೀಸಲು ಎಂದುಕೊಂಡಿದ್ದೆವೋ ಅವುಗಳಲ್ಲೆಲ್ಲ ಮೀರಿದ ಪ್ರಗತಿಯನ್ನು ಗಣಕಗಳು ಸಾಧಿಸಿವೆ. ಜೊತೆಗೆ ಅಂತರ್ಜಾಲದ ಬೆಳವಣಿಗೆ ಮತ್ತು ವ್ಯಾಪಕತೆಯಿಂದ ವಿಶ್ವಕೋಶಗಟ್ಟಲೆ ಜ್ಞಾನ ಪ್ರತಿಯೊಬ್ಬರ ಅಂಗೈಯಲ್ಲೂ ದೊರೆತಿದೆ. ಹೀಗೆ, ಕಳೆದ ೫೦ ವರ್ಷಗಳಿಂದ ನಡೆದ ಸಂಶೋಧನೆಯ ಫಲವಾಗಿ ಇಂದು ಕೃತಕಮತಿ (ಕೃ.ಮತಿ) ಮುಂಚೂಣಿಗೆ ಬಂದಿದೆ. ಉದಾಹರಣೆಗಾಗಿ, OpenAI ಕಂಪನಿಯ ChatGPT ಎನ್ನುವ ತಂತ್ರಾಂಶವು ಸಂಶೋಧಕರಲ್ಲೂ, ಶಾಲಾ ವಿದ್ಯಾರ್ಥಿಗಳಲ್ಲೂ, ಸಾಮಾನ್ಯರಲ್ಲೂ ಚಲಾವಣೆಗೆ ಬಂದಿದೆ. ChatGPT ತಂತ್ರಾಂಶ ಓಪನ್‌ ಏ.ಆಯ್.(OpenAI)ಅನ್ನುವ ಕಂಪನಿಯಿಂದ ಅಭಿವೃದ್ಧಿಪಡಿಸಲಾದ ಒಂದು ಕೃತಕ-ಮತಿ (AI)ಭಾಷಾ ಮಾದರಿ. ಇದು ಅಂತರ್ಜಾಲದಿಂದ ಬೃಹತ್ ಪ್ರಮಾಣದ ಪಠ್ಯದ ಮೇಲೆ ತರಬೇತಿ ಪಡೆದಿದೆ. ನಿರ್ದಿಷ್ಟ ಪ್ರಾಂಪ್ಟ್‌ ಒಂದನ್ನು ಕೊಟ್ಟಾಗ, ಮಾನವ ತರಹದ ನೈಸರ್ಗಿಕ ಭಾಷೆಯ ಪಠ್ಯವನ್ನು ರಚಿಸಬಹುದು. ಪ್ರಶ್ನೆಗಳಿಗೆ ಉತ್ತರಿಸಬಹುದು, ವಿವಿಧ ವಿಷಯಗಳ ಕುರಿತು ಸಂವಾದಿಸಬಹುದು. ಮತ್ತು ಸೃಜನಶೀಲ ಬರವಣಿಗೆಯ ತುಣುಕುಗಳನ್ನು ರಚಿಸಬಹುದು. ಹೆಚ್ಚಿನ ಮಾಹಿತಿಗೆ: https://chat-gpt.org/ಇಂಥ ಕೃಮತಿ(AIಯನ್ನು ಕನ್ನಡಕ್ಕೆ ಹೇಗೆ ಉಪಯೋಗಿಸಿಕೊಳ್ಳಬಹುದು? ಬರೆಹ ಕ್ಷೇತ್ರ ಒಂದನ್ನೆ ತೆಗೆದುಕೊಳ್ಳೋಣ. ಉತ್ತಮ ಲೇಖನ/ಕವಿತೆಗಳನ್ನು ಕೃಮತಿ(AI)ಬರೆಯಬಲ್ಲುದೆ? ಬರೆದದ್ದು ಸ್ವತಂತ್ರ ಮತ್ತು ಸೃಜನಶೀಲ ಬರವಣಿಗೆ ಅನ್ನಬಹುದೆ? ಅಂಥದ್ದನ್ನು ಕೃಮತಿ ಬರೆದದ್ದು ಎಂದು ಸಾಮಾನ್ಯ ಓದುಗ ಗುರುತಿಸಬಲ್ಲನೆ? ಗುರುತಿಸಿದರೂ, ಸ್ವಾಗತಿಸುವನೋ, ತಿರಸ್ಕರಿಸುವನೋ?ಈ ಪ್ರಶ್ನೆಗಳನ್ನು ಉತ್ತರಿಸುವ ಪ್ರಯತ್ನದಲ್ಲಿ, ಒಂದು ಪುಟ್ಟ ಸರಳ ಪ್ರಯೋಗ ಯಾಕೆ ಮಾಡಬಾರದು? ಸಂದರ್ಭ: ದಕ್ಷಿಣ ಕ್ಯಲಿಫೋರ್ನಿಯ ಕರ್ನಾಟಕ ಸಾಂಸ್ಕೃತಿಕ ಸಂಘದ (ಕೆಸಿಎ https://socalkca.com) ೫೦ನೇ ಹುಟ್ಟು ಹಬ್ಬ, ಸುವರ್ಣ ಮಹೋತ್ಸವ. ಅದರ ಸ್ಮರಣ ಸಂಚಿಕೆಗೆ ಒಂದು ಅಭಿನಂದನಾತ್ಮಕ ಸಂದೇಶ ಅಥವ ಲೇಖನ ಬೇಕಾಗಿತ್ತು. ಅದಕ್ಕಾಗಿ ಕೆಳಗಿನ ಪ್ರಾಂಪ್ಟ್‌ಗಳನ್ನು ChatGPTಗೆ ಒಂದೊಂದಾಗಿ ಕೊಟ್ಟೆ. ಏನಿದು ಪ್ರಾಂಪ್ಟು? ಅದೊಂದು ನಿರ್ದೇಶ ವಾಕ್ಯ, ಅಥವ ಪ್ರಶ್ನೆ ಆಗಬಹುದು. ಅದರೊಂದಿಗೆ ಕೆಲವು ಸೂಚ್ಯ ಮಾಹಿತಿ ತುಣುಕುಗಳನ್ನು ಸೇರಿಸಿದಷ್ಟೂ ಉತ್ತಮ ಉತ್ತರ ಬರಬಹುದು. ನಾ ಕೊಟ್ಟ ಪ್ರಾಂಪ್ಟಗಳು ಇಂಗ್ಲಿಷಲ್ಲೆ ಇದ್ದವು; ಕನ್ನಡದಲ್ಲಿ ಕೇಳಬಹುದಾಗಿತ್ತೇನೋ. ಇರಲಿ. ಈ ಪ್ರಾಂಪ್ಟುಗಳು ಯಾವವು?1. write an essay in kannada about karnataka cultural association of southern california - ಇಲ್ಲಿ essay ಅಂತ ಕೇಳಿದರೂ ನಾ ಎಣಿಸಿದಂತೆ ಪುಟಗಟ್ಟಲೆ ಉತ್ತರ ಬರಲಿಲ್ಲ. ಬದಲಾಗಿ ಮೂಡಿದ್ದು ಒಂದು ಪ್ಯಾರಾ!2. write a poem on ದಕ್ಷಿಣ ಕ್ಯಾಲಿಫೋನಿಯದ ಕರ್ನಾಟಕ ಸಾಂಸ್ಕೃತಿಕ ಸಂಘ - ಇಲ್ಲಿ ಕವಿತೆ ಅಂದರೆ ಅದೇನೂ ಛಂದೋಬದ್ಧವಾಗಿರಲಿಲ್ಲ; ಲಯ ಪ್ರಾಸಗಳೂ ಇರಲಿಲ್ಲ; ಸುಮ್ಮ ಸುಮ್ಮನೆ ಅಲ್ಲಲ್ಲಿ ವಾಕ್ಯಗಳನ್ನು ಒಡೆದು ಸಾಲು ಸಾಲುಗಳಲ್ಲಿ ಪೋಣಿಸುವ ನಟನೆಯೂ ಇರಲಿಲ್ಲ; ಸಾಮಾನ್ಯ ಗದ್ಯವೂ ಅಲ್ಲ; ಒಂದು ರೀತಿಯ "ನವೋನವ ಕವಿತೆ" ಅನ್ನಬಹುದು! 3. write a jingle in kannada for Golden Jubiliy celebration of Karnataka Cultural association of southern californiaಉತ್ತರಗಳು ತುಸು ಅಸಹಜ ಎನಿಸಿದರೂ, ಅಚ್ಚರಿಗೊಳಿಸುವಂಥವು. ಇಲ್ಲಿ ಕಂಡ ಕೆಲವು ಅಂಶಗಳು ಹೀಗಿವೆ:೧. ಅದೆ ಪ್ರಾಂಪ್ಟನ್ನು ಮತ್ತೆ ಕೊಟ್ಟರೂ ಉತ್ತರ ಬೇರೆ;೨. ಅನೇಕ ಪುನರುಕ್ತಿಗಳು;೩. ಉದ್ದುದ್ದ ವಾಕ್ಯಗಳು;೪. ಮಾತು-ಬರಹಗಳಲ
2023-09-0108 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಸುಳ್ಳು, ಸತ್ಯ, ಕಾವ್ಯ, ಮತ್ತು ನೇಮಿಚಂದ್ರ - Suḷḷu, Satya, Kāvya, mattu NēmicandraLike it? ...... Subscribe and Share! https://www.youtube.com/mykannadakali/?sub_confirmation=1Watch at https//www.youtube.com/channel/UCCON6n4lEgj6NsPqCLZdDSwRead at http://kannadakali.com/publications/podcastsListen at https://anchor.fm/kannadakaliSubscribe to our newsletter: https://kannadakali.com/kankalimitraru/?p=subscribe ಸುಳ್ಳು, ಸತ್ಯ, ಕಾವ್ಯ, ಮತ್ತು ನೇಮಿಚಂದ್ರ ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿಲೇಖನ : ವಿಶ್ವೇಶ್ವರ ದೀಕ್ಷಿತಸಂಗೀತ: ಆಕಾಶ ದೀಕ್ಷಿತಕಟ್ಟು-ಮುಟ್ಟು-ಮೆಟ್ಟುಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ, ವಾಮನಕ್ರಮಂಮುಟ್ಟುಗೆ ಮುಟ್ಟದಿರ್ಕೆ ಮುಗಿಲಂ, ಹರನಂ ನರನೊತ್ತಿ ಗಂಟಲಂಮೆಟ್ಟುಗೆ ಮೆಟ್ಟದಿರ್ಕೆ, ಕವಿಗಳ್‌ ಕೃತಿಬಂಧದೊಳಲ್ತೆ ಕಟ್ಟಿದರ್‌,ಮುಟ್ಟಿದರೊತ್ತಿ ಮೆಟ್ಟಿದರದೇನಳವಗ್ಗಳಮೋ ಕವೀಂದ್ರರಾ! - ನೇಮಿಚಂದ್ರ, ಲೀಲಾವತಿ ಪ್ರಬಂಧಗಣ: ಅಕ್ಷರ, ಜಾತಿ: ಕೃತಿ-೨೦, ಮಟ್ಟು: ಉತ್ಪಲಮಾಲೆ ವೃತ್ತಸೂತ್ರ: ಭ ರ ನ ಭ ಭ ರ ಲ ಗಂಭ ರ ನ ಭ ಭ ರ ಲ ಗಂ - ಸೂತ್ರದ ಅಕ್ಷರ ಗಣ, ಕೃತಿ-೨೦ ಜಾತಿ:, ಉತ್ಪಲಮಾಲೆ ವೃತ್ತ ಎನ್ನುವ ಮಟ್ಟಿನಲ್ಲಿರುವ‌ ಇದು ನೇಮಿಚಂದ್ರನ ಲೀಲಾವತಿ ಪ್ರಬಂಧದಲ್ಲಿ ಬರುವ ಒಂದು ಪದ್ಯ.ನೇಮಿಚಂದ್ರ ೧೨ನೆ ಶತಮಾನದ ಕೊನೆಯ ಅರ್ಧದಲ್ಲಿ ಜೀವಿಸಿದ್ದ ಒಬ್ಬ ಕವಿ. ಸವದತ್ತಿಯ ರಟ್ಟ ವಂಶದ ಲಕ್ಷ್ಮಣರಾಜನ ಆಶ್ರಯದಲ್ಲಿ, ಅಂದರೆ ೧೧೭೦ರ ಆಸುಪಾಸಿನಲ್ಲಿ, ಲೀಲಾವತಿ ಪ್ರಬಂಧ ಎನ್ನುವ ಹದಿನಾಲ್ಕು ಆಶ್ವಾಸಗಳುಳ್ಳ ಪ್ರೌಢ ಚಂಪೂ ಕಾವ್ಯವನ್ನು ರಚಿಸಿದ. ಶೃಂಗಾರ ರಸವೆ ಈ ಕಾವ್ಯದ ಕೇಂದ್ರ ಬಿಂದು. ನೇಮಿನಾಥ ಪುರಾಣ ಎನ್ನುವುದು ಈತನ ಇನ್ನೊಂದು ಚಂಪೂ ಕಾವ್ಯ. ಮೊದಲೆನೆಯದಾಗಿ, ಹೀಗೆ, ಪಂಪ ರನ್ನರ ನಂತರ, ಅಳಿದು ಹೋಗುತ್ತಿದ್ದ ಚಂಪೂ ಕಾವ್ಯ ಪರಂಪರೆಯನ್ನು ಮತ್ತೆ ಪ್ರಚಲಗೊಳಿಸಿದ ಕೀರ್ತಿ ನೇಮಿಚಂದ್ರನಿಗೆ ಸಲ್ಲುತ್ತದೆ.ಅಸಾಧ್ಯವೆಲ್ಲವೂ ಸುಳ್ಳೆ?ಕ᳒ಟ್ಟು᳴ಗೆ᳴| ಕ᳒ಟ್ಟ᳴ದಿ᳒|ರ್ಕೆ᳴ ಕ᳴ಡ᳴|ಲಂ᳒ ಕ᳴ಪಿ᳴|ಸಂ᳒ತ᳴ತಿ᳴|, ವಾ᳒ಮ᳴ನ᳒|ಕ್ರ᳴ಮಂ᳒|ಮು᳒ಟ್ಟು᳴ಗೆ᳴| ಮು᳒ಟ್ಟ᳴ದಿ᳒|ರ್ಕೆ᳴ ಮು᳴ಗಿ᳴|ಲಂ᳒, ಹ᳴ರ᳴|ನಂ᳒ ನ᳴ರ᳴|ನೊ᳒ತ್ತಿ᳴ ಗಂ᳒|ಟ᳴ಲಂ᳒|ಮೆ᳒ಟ್ಟು᳴ಗೆ᳴| ಮೆ᳒ಟ್ಟ᳴ದಿ᳒|ರ್ಕೆ᳴, ಕ᳴ವಿ᳴|ಗ᳒ಳ್‌ ಕೃ᳴ತಿ᳴|ಬಂ᳒ಧ᳴ದೊ᳴|ಳ᳒ಲ್ತೆ᳴ ಕ᳒|ಟ್ಟಿ᳴ದ᳒|ರ್‌,ಮು᳒ಟ್ಟಿ᳴ದ᳴|ರೊ᳒ತ್ತಿ᳴ ಮೆ᳒|ಟ್ಟಿ᳴ದ᳴ರ᳴|ದೇ᳒ನ᳴ಳ᳴|ವ᳒ಗ್ಗ᳴ಳ᳴|ಮೋ᳒ ಕ᳴ವೀಂ᳒|ದ್ರ᳴ರಾ᳒|!ಎರಡನೆಯದಾಗಿ, ಒಂದು ಮುಖ್ಯ ಪ್ರಶ್ನೆಯನ್ನು ಇಲ್ಲಿ ಕೇಳುತ್ತಿದ್ದಾನೆ ನೇಮಿಚಂದ್ರ. ಸತ್ಯ ಎಂದರೆ ಏನು? what is Truth? ಪ್ರತ್ಯಕ್ಷವಾಗಿ ನಿಷ್ಕರ್ಷಿಸಬಹುದಾದ ವಾಸ್ತವಿಕ ಸತ್ಯವೋ, ಅಂತರ್ಗೋಚರ ಅನುಭವವೇದ್ಯ ಸತ್ಯವೋ? ವಸ್ತುನಿಷ್ಠ ವೈಜ್ಞಾನಿಕ ಸತ್ಯವೋ, ಅನುಭವನಿಷ್ಠ ಸಂವೇದ್ಯ ಕಾವ್ಯಸತ್ಯವೋ? Experimental truth or experiential truth?ಕಟ್ಟುಗೆ ಕಟ್ಟದಿರ್ಕೆ : ಕಟ್ಟಲಿ ಕಟ್ಟದೆ ಇರಲಿ. ಏನು ಕಟ್ಟುವುದು? ಕಡಲಂ : ಸಮುದ್ರಕ್ಕೆ ಸೇತುವೆಯನ್ನು ಕಟ್ಟುವುದು. ಯಾರು ಕಟ್ಟಿದರು? ಕಪಿಸಂತತಿ : ಕೋತಿಗಳು! ಎಲ್ಲಿ?! : ರಾಮಾಯಣದಲ್ಲಿ.ಮುಟ್ಟುಗೆ ಮುಟ್ಟದಿರ್ಕೆ: ಮುಟ್ಟಲಿ ಮುಟ್ದೆ ಇರಲಿ. ಏನು ಮುಟ್ಟುವುದು? ಮುಗಿಲಂ : ಆಕಾಶವನ್ನು. ಯಾರು? ವಾಮನಕ್ರಮಂ : ಕುಳ್ಳ ವಾಮನ ಮುಗಿಲೆತ್ತರಕ್ಕೆ ಬೆಳೆದು ಬೆಳೆದು, ಮೊದಲನೆ ಹೆಜ್ಜೆಯಿಂದ ಭೂಮಿಯನ್ನು ಆಕ್ರಮಿಸಿ, ಎರಡನೆ ಹೆಜ್ಜೆಯಿಂದ ಆಕಾಶವನ್ನು ಆವರಿಸಿ, ಮೂರನೆಯ ಹೆಜ್ಜೆಯಿಂದ ಬಲಿಯನ್ನು ಪಾತಾಳಕ್ಕಿಳಿಸಿ ತ್ರಿವಿಕ್ರಮನಾದನಲ್ಲ! ಎಲ್ಲಿ? ದಶಾವತಾರದಲ್ಲಿ!ಮೆಟ್ಟುಗೆ ಮೆಟ್ಟದಿರ್ಕೆ: ತುಳಿಯಲಿ ತುಳಿಯದೆ ಇರಲಿ. ಏನು ತುಳಿಯುವುದು? ಹರನಂ: ಶಿವನನ್ನು. ಯಾರು? ಹೇಗೆ? ನರನೊತ್ತಿ ಗಂಟಲಂ : ಅರ್ಜುನನು ಶಿವನ ಗಂಟಲನ್ನು ಹಿಸುಕಿ. ಎಲ್ಲಿ? ಮಹಾಭಾರತದ ವನಪರ್ವದಲ್ಲಿ.ಇದೆಲ್ಲ ಸಾಧ್ಯವೋ? ಸತ್ಯ ಎನಿಸಿಕೊಳ್ಳಬೇಕಾಗಿದ್ದರೆ ಸಾಧ್ಯವಾಗಿರಬೇಕಿಲ್ಲ, (ಸಂಭವನೀಯವಾಗಿದ್ದರೆ) ಸಾಧ್ಯವಾಗಬಹುದಾಗಿದ್ದರೆ ಸಾಕು; ಅಂದರೆ ಊಹೆಗೆ ನಿಲುಕಿ ಮನಸ್ಸಿನ ಕಣ್‌ ಮುಂದೆ ಮಿಂಚಿ ಪುಳಕವಾದರೆ ಅದು ಕಾವ್ಯಸತ್ಯ. ಹಗ್ಗದಲ್ಲಿ ಹಾವನ್ನು ಮೊದಲ ಬಾರಿ ಕಂಡಾಗ ನಿಜ ಹಾವೇ ಎಂದು ಹೆದರಿಕೆ ಆಗುವದು ಸಹಜ. ಆದರೆ ಒಮ್ಮೆ ವಸ್ತುನಿಷ್ಠ ಸತ್ಯದ ಅರಿವಾದರೆ, ಮತ್ತೆ ಮತ್ತೆ ಹಗ್ಗದಲ್ಲಿ ಹಾವನ್ನು ಕಾಣುವುದು ಅಸಾಧ್ಯ ಮತ್ತು ಒಲ್ಲದ ಮಾತು. ಆದರೆ, ಕಾವ್ಯಸತ್ಯವನ್ನು ಮತ್ತೆ ಮತ್ತೆ ಅನುಭವಿಸಲು ಸಾಧ್ಯವೂ ಹೌದು ಮತ್ತು ಇಷ್ಟವೂ ಹೌದು. ಇದೇ ಕಾವ್ಯದ ಮಹತ್ವ. , ವಿರಹ-ಪ್ರೇಮಗಳ ರಸವನ್ನು ಹರಿಸಿ, ಸಂದೇಶ ಒಂದನ್ನು ಮುಟ್ಟಿಸುವಂತೆ, ಮುಗಿಲಲ್ಲಿ ಮನ ಬಂದಂತೆ ಹಾರಾಡುವ ಮೋಡ ಒಂದನ್ನು ಒಪ್ಪಿಸುವುದು ಸಾಧ್ಯವೆ? ಅಸಾಧ್ಯ! ಆದರೂ‌, ಕಾಳಿದಾಸನ ಮೇಘದೂತವನ್ನು ಮತ್ತೆ ಮತ್ತೆ ಓದಬೇಕೆನಿಸುವುದಿಲ್‌ಲವೆ? ಮತ್
2023-08-1007 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಬೆಳಕು ತೋರಿದ ಬದುಕು : ಹೆಲನ್ ಕೆಲರ್ : Helen KellerLike it? ...... Subscribe and Share! https://www.youtube.com/mykannadakali/?sub_confirmation=1Watch at https://www.youtube.com/channel/UCCON6n4lEgj6NsPqCLZdDSwRead at http://kannadakali.com/publications/podcastsListen at https://anchor.fm/kannadakaliSubscribe to our newsletter: https://kannadakali.com/kankalimitraru/?p=subscribeಬೆಳಕು ತೋರಿದ ಬದುಕು: ಹೆಲನ್ ಕೆಲರ್ಎಸ್. ಜಿ. ಸೀತಾರಾಮ್[’ಹೆಲನ್ ಕೆಲರ್’ ಎಂದೊಡನೆ ಕಣ್ಣರಳುವುದು, ಕಿವಿ ನಿಮಿರುವುದು, ಮಾತು ನಿಲ್ಲುವುದು. ಮಗುವಾಗಿದ್ದಾಗಲೇ ನೋಡುವ, ಕೇಳುವ ಮತ್ತು ಮಾತನಾಡುವ ಮೂರು ಮೂಲ ಚೇತನಗಳನ್ನೇ ತಾನು ಕಳೆದುಕೊಂಡರೂ, ಬೆಳವಣಿಗೆಯ ತೊಡಕುಗಳಿಂದ ಹತಾಶರಾಗಿರುವವರಿಗೆ ಆಶಾದೀಪವಾಗಿಯೂ, ನೊಂದಜೀವಿಗಳಿಗೆ “Helen Healer” ಎಂದಾಗಿಯೂ, ಜಗವೇ ಬೆಕ್ಕಸಬೆರಗಾಗುವಂತೆ, ೮೮ ವರ್ಷಗಳ ಪರ್ಯಂತ ಚಕಚಕಿಸಿದ “ಹೆಲನ್ ಕೆಲರ್‍” ಜನಿಸಿದ್ದು, ಜೂನ್ ೨೭, ೧೮೮೦; ಕಾಲವಾಗಿದ್ದು, ಜೂನ್ ೧, ೧೯೬೮. ಅವಳ ವೈವಿಧ್ಯಮಯ, ಸಾಹಸಪೂರ್ಣ, ವಾತ್ಸಲ್ಯಪೂರಿತ, ಜ್ಞಾನಕೌತೂಹಲಭರಿತ ಜೀವನ ಮತ್ತು ಸಾಧನೆಗಳನ್ನೂ, ಅವಳು ಮಾಡಿದ ಲೋಕಾಧಿಕ ಉಪಕಾರವನ್ನೂ ಸ್ಮರಿಸಲು ನೆರವಾಗುವಂತೆ, ಸಂಕ್ಷಿಪ್ತ ವೃತ್ತಾಂತವೊಂದು ಇಲ್ಲಿದೆ]___________________________Reference: https://www.youtube.com/@IamHelenKeller [Video1] Helen Keller in her office (1919-54), https://www.youtube.com/watch?v=Pqb9B8EIY-c‌ [Video2] Helen Keller photo album (India visit-1955), https://www.youtube.com/watch?v=FeWBg63TMDo [Video3] Helen Keller visits India, https://youtu.be/5xNulmM9c-k [Video4] Helen Keller speaks out, https://www.youtube.com/watch?v=8ch_H8pt9M8 ಕನ್ನಡ ಕಲಿ ಬಿತ್ತರಿಕೆ, ಜುಲೈ ೨೨, ೨೦೨೩ ಬೆಳಕು ತೋರಿದ ಬದುಕು : ಹೆಲನ್ ಕೆಲರ್ ಬರೆಹ: ಎಸ್. ಜಿ. ಸೀತಾರಾಮ್ ಓದು : ರಾಜೇಶ್ವರಿ ಎಚ್.‌ ರಾವ್ಚಿತ್ರಗಳು: ಅಂತರ್ಜಾಲ ಕೃಪೆBeḷaku Tōrida Baduku, Helen‌ Kelar Author: Es. Ji. Sītārām, Maisūru Reader: Rājēśvari ec‌. rāv‌, Arvain‌
2023-07-2215 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuತೋಳಬಂದಿ ಮತ್ತು ಸೌಂದರ್ಯಸಾಧನೆ Tōḷabandi Mattu SaundaryaLike it? ...... Subscribe and Share!Watch at https://www.youtube.com/channel/UCCON6n4lEgj6NsPqCLZdDSwRead at http://kannadakali.com/publications/podcastsListen at https://anchor.fm/kannadakaliSubscribe to our newsletter: https://kannadakali.com/kankalimitraru/?p=subscribe ಚೆನ್ನುಡಿ ತೋಳಬಂದಿ ಮತ್ತು ಸೌಂದರ್ಯಸಾಧನೆಮನುಷ್ಯ‌, ಹೆಂಗಸಾಗಲಿ ಗಂಡಸಾಗಲಿ, ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಏನೇನೋ ಮಾಡುತ್ತಾನೆ. ಹಾಲು, ಜೇನು, ತೈಲ, ತುಪ್ಪ ಗಳೊಂದಿಗೆ, ಸುಗಂಧ ದ್ರವ್ಯಗಳನ್ನು ಬೆರೆಸಿ, ಉಜ್ಜಿ ಉಜ್ಜಿ ಅಭ್ಯಂಜನ ಸ್ನಾನ ಮಾಡುತ್ತಾನೆ. ನಯವಾದ ರೇಷ್ಮೆಯ ಬಟ್ಟೆಯನ್ನು, ನಾಗಚರ್ಮದ ಪಾದರಕ್ಷೆಗಳನ್ನು ತೊಡುತ್ತಾನೆ. ಹೊಳೆಯುವ ಚಿನ್ನದ ಆಭರಣಗಳನ್ನು, ಕೋರೈಸುವ ವಜ್ರದ ಓಲೆ ಉಂಗುರಗಳನ್ನು, ನಡುವಲ್ಲಿ ವಂಕಿ, ಡಾಬುಗಳನ್ನು, ಕಾಲಲ್ಲಿ ಗೆಜ್ಜೆ, ಪಿಲ್ಲೆ, ಪೈಜಣ, ರುಳಿ, ಸರಪಳಿಗಳನ್ನು, ಮೂಗುತಿಯನ್ನು, ಕೈಗಳಲ್ಲಿ, ತೋಡೆ, ಕಡಗ, ಬಳೆಗಳನ್ನು ಹಾಕಿಕೊಳ್ಳುತ್ತಾನೆ. ಇವುಗಳಲ್ಲಿ ಯಾವುದು ನಿಜವಾದ ಸೌಂದರ್ಯವರ್ಧಕ? ಯಾವುದು ಶಾಶ್ವತ?ಇದಕ್ಕೆ ೭ನೆ ಶತಮಾನದ, ವಿದ್ವಾಂಸನಾದ ಭರ್ತೃಹರಿಯನ್ನು ಕೇಳೋಣ. ಈತ "ಸುಭಾಷಿತ ತ್ರಿಶತೀ" ಎನ್ನುವ ಗ್ರಂಥವನ್ನು ಬರೆದಿದ್ದಾನೆ. ಇದರಲ್ಲಿ ನೀತಿಶತಕ, ಶೃಂಗಾರಶತಕ, ವೈರಾಗ್ಯಶತಕ ಎನ್ನುವ ಮೂರು ಶತಕಗಳು - ಅಂದರೆ ನೂರು ಬಿಡಿ ಪದ್ಯಗಳ ಕಂತೆಗಳು ಇವೆ. ಈಗ ನೀತಿಶತಕದಲ್ಲಿನ ಪದ್ಯ ಒಂದನ್ನು ನೋಡೋಣ:ಕೇಯೂರಾ ನ ವಿಭೂಷಯಂತಿ ಭರ್ತೃಹರಿ, ನೀತಿಶತಕ, ಪದ್ಯ ೧೭.ಕೇಯೂರಾ ನ ವಿಭೂಷಯಂತಿ ಪುರುಷಂ ಹಾರಾ ನ ಚಂದ್ರೋಜ್ವಲಾಃ ನ ಸ್ನಾನಂ ನ ವಿಲೇಪನಂ ನ ಕುಸುಮಂ ನಾಲಂಕೃತಾ ಮೂರ್ಧಜಾಃ ವಾಣ್ಯೇಕಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾ ಧಾರ್ಯತೇ ಕ್ಷೀಯಂತೇ ಖಲು ಭೂಷಣಾನಿ ಸತತಂ ವಾಗ್ಭೂಷಣಂ ಭೂಷಣಂ ತೋಳಬಂದಿ ಒಡವೆಯಲ್ಲಚಂದ್ರ ಹೊಳಪಿನ ಹಾರ ತೋಳಬಂದಿಗಳೊಡವೆಯಲ್ಲ; ಮೈ ತೊಳೆದು ಪರಿಮಳಿಸಿ ತಲೆಯಲ್ಲಿ ಹೂ ಮುಡಿದರಲ್ಲ! ಕಂನಡೆಯು ತುಂಬಿರುವ ಕಂನುಡಿಯೆ ಚೆನ್ನೊಡವೆ ನರಗೆ; ನುಡಿಯೊಡವೆಯೇ ಒಡವೆ, ಅಳಿಯುವವು ಮಿಗಿದೊಡವೆ ಎಲ್ಲ.ಮೈ ಕೈ, ತೋಳು, ನಡು, ತಲೆ, ಕಾಲುಗಳಲ್ಲಿ ಏನೇ ಹಾಕಿಕೊಂಡರೂ ಅವು ಎಲ್ಲ ಕ್ರಮೇಣ ಮಸುಕಾಗಿ, ಕ್ಷೀಣಿಸುತ್ತ, ಅಳಿದು ಹೋಗುತ್ತವೆ. ಆದರೆ, ಒಳ್ಳೆಯ ನಡೆ ನಡತೆಯ ಜೊತೆ ಓಳ್ಳೆಯ ಮಾತುಗಳು ಅವು ನಿಜವಾದ, ಯಾವಾಗಲೂ ಕೆಡದೆ ಇರುವ, ಯವಾಗಲೂ ಶೋಭೆಯನ್ನು ಕೊಡುವ ಅಲಂಕಾರಗಳು, ಒಡವೆಗಳು.ಪ್ರಶ್ನೆ / ಚಾಲೆಂಜ್‌ : ಪ್ರಯತ್ನಿಸಿ೧. ಈ ಬಿತ್ತರಿಕೆಯಲ್ಲಿ ಹೇಳಿದವುಗಳಲ್ಲದೆ^ ಇತರ ಒಂದು ನೂರು (೧೦೦) ಸಾಂಪ್ರದಾಯಿಕ ಮತ್ತು ಆಧುನಿಕ ಉಡುಗೆ/ತೊಡುಗೆ/ಒಡವೆ/ಆಭರಣಗಳನ್ನು ಪಟ್ಟಿ ಮಾಡಬಲ್ಲಿರಾ? ೨. ಮನುಷ್ಯ ಸ್ನಾನಕ್ಕೆ ಬಳಸುವ ಒಂದು ನೂರು (೧೦೦) ಸಾಧನ/ದ್ರವ್ಯಗಳನ್ನು ಪಟ್ಟಿ ಮಾಡಬಲ್ಲಿರಾ? _________^ ರೇಷ್ಮೆಯ ಬಟ್ಟೆ, ನಾಗಚರ್ಮದ ಪಾದರಕ್ಷೆ, (ಚಿನ್ನದ / ವಜ್ರದ) ಓಲೆ ಉಂಗುರಗಳು, ವಂಕಿ, ಡಾಬು, ಗೆಜ್ಜೆ, ಪಿಲ್ಲೆ, ಪೈಜಣ, ರುಳಿ, ಸರಪಳಿ,, ಮೂಗುತಿ, ತೋಡೆ, ಕಡಗ, ಬಳೆಕನ್ನಡ ಕಲಿ, ಬಿತ್ತರಿಕೆ, ತೋಳಬಂದಿ ಮತ್ತು ಸೌಂದರ್ಯಸಾಧನೆKannada Kali Bittarike, July 08, 2023
2023-07-0804 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಮುಗ್ಧ ಮನಸ್ಸುಗಳ ಸಾಕ್ಷಾತ್ಕಾರವೇ ಸಾಕೇತ ಸಿದ್ಧಾಂತ Mugdha Manas'sugaḷa Sākṣātkāravē Sākēta Sid'dhāntaLike it? ...... Subscribe and Share! Watch at https://www.youtube.com/channel/UCCON6n4lEgj6NsPqCLZdDSwRead at http://kannadakali.com/publications/podcastsListen at https://anchor.fm/kannadakaliSubscribe to our newsletter: https://kannadakali.com/kankalimitraru/?p=subscribeಮುಗ್ಧ ಮನಸ್ಸುಗಳ ಸಾಕ್ಷಾತ್ಕಾರವೇ ಸಾಕೇತ ಸಿದ್ಧಾಂತ ಒಂದು ಸಂದೇಶಬರೆಹ ಮತ್ತು ಓದು: ರೂಪ ಮಂಜುನಾಥಮೊನ್ನೆ ತಾನೆ ಕನ್ನಡ ಕಲಿಯ ಬಿತ್ತರಿಕೆ ಬಿಕಾಸ ೧೧-೨೦೨೩-೦೧ರಲ್ಲಿ ನಿಮಗೆ ಪರಿಚಯಿಸಿದ ಸಾಕೇತ ಸಿದ್ದಾಂತಕ್ಕೆ ಸ್ಪಂದಿಸಿ ಒಂದು ಸಂದೇಶವನ್ನು, ಲಲಿತ ಪ್ರಬಂಧವನ್ನು ಅನ್ನಿ, ಕಳಿಸಿದ್ದಾರೆ ರೂಪ ಮಂಜುನಾಥ. ಕರ್ನಾಟಕ ಸಾಂಸ್ಕೃತಿಕ ಸಂಘದ ಸುವರ್ಣ ಮಹೋತ್ಸವ‌ ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ, ಕವನ ಓದಿದ ಮಕ್ಕಳ ಬಗ್ಗೆ, ಅವರನ್ನು ಬೆಳೆಸಿದ ತಾಯಿ ತಂದೆಯರ ಬಗ್ಗೆ, ಅರಳು ಮಲ್ಲಿಗೆ ಮತ್ತು ಗೋಕುಲ ಮಕ್ಕಳು ಎನ್ನುವ ಪುಟ್ಟ ಕನ್ನಡ ಸಾಂಸ್ಕೃತಿಕ ಸಮುದಾಯಗಳ ಬಗ್ಗೆ, ಹಾಗೂ ಸಾಕೇತ ಸಿದ್ಧಾಂತರ ಕವನಗಳನ್ನು ಪ್ರಕಟಿಸಿದ ಕನ್ನಡ ಕೂಟದ ಸ್ಮರಣ ಸಂಚಿಕೆಯ ಬಗ್ಗೆ, ತಮ್ಮ ಅನಿಸಿಕೆಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ. ರೂಪ ಮಂಜುನಾಥಕಲೆ ಹಾಗೂ ಸಾಹಿತ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿರುವ, ಹಾಸನ ಜಿಲ್ಲೆಯ ಹೊಳೆ ನರಸೀಪುರದ ರೂಪ ಮಂಜುನಾಥ ಅವರು, ಬಹುಮುಖ ಪ್ರತಿಭೆ ಎಂಬ ಗೌರವಕ್ಕೆ ಪಾತ್ರರಾದ ಲೇಖಕಿ, ಕವಯಿತ್ರಿ, ಚಿತ್ರಕಲಾವಿದೆ, ಮತ್ತು ಗಮಕ ಸಂಗೀತಗಳನ್ನು ಕಲಿತವರು. ಯೋಗ, ಧ್ಯಾನ, ಚಾರಣ, ಪ್ರವಾಸ, ಆರೋಗ್ಯಪಾಕಶಾಸ್ತ್ರಗಳಲ್ಲಿ ಇವರಿಗೆ ಅಪಾರ ಆಸಕ್ತಿ. ಈಗಾಗಲೆ ವಚನಾರ್ಪಣೆ, ಭಾವ-ಚಿತ್ತಾರ, ಮತ್ತು ಸ್ವಲ್ಪ ನಗೀ ಪ್ಲೀಸ್ ಎನ್ನುವ ಇವರ ಮೂರು ಪುಸ್ತಕಗಳು ಪ್ರಕಟವಾಗಿವೆ. ಇನ್ನೆರಡು ಪುಸ್ತಕಗಳು‌ ಬಿಡುಗಡೆಯ ಹಂತದಲ್ಲಿವೆ. Kannada Kali Bittarike June 24, 2023
2023-06-2409 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಕನ್ನಡಕ್ಕೊಂದು ಸಾಕೇತ ಸಿದ್ಧಾಂತ Saketa Theory for KannadaA Saketa Theory for KannadaLike it? ...... Subscribe and Share!Watch at https://www.youtube.com/channel/UCCON6n4lEgj6NsPqCLZdDSwRead at http://kannadakali.com/publications/podcastsListen at https://anchor.fm/kannadakaliಕನ್ನಡ ಕೇವಲ ಒಂದು ವ್ಯಾವಹಾರಿಕ ಮಾಧ್ಯಮವೋ?‌ ಆಥವ ಅದಕ್ಕಿಂತ ಮಿಗಿಲಾದ ಮೌಲ್ಯ ಏನಾದರೂ ಅದರಲ್ಲಿ ಇದೆಯೋ?ನಡೆ-ನುಡಿಗಳ ಸಾಪೇಕ್ಷ ವಾದವನ್ನು ಪುಷ್ಟೀಕರಿಸಿ ಕನ್ನಡ ಸಂಸ್ಕೃತಿಯ ನೆಲೆಯಲ್ಲಿ ಕನ್ನಡ ಕಲಿಯುವುದು ಮತ್ತು ಕನ್ನಡ ನುಡಿಯಲ್ಲಿ ಕನ್ನಡ ಸಂಸ್ಕೃತಿಯನ್ನು ಗಳಿಸುವುದು ಇವು ಅತ್ಯಂತ ಪರಿಣಾಮಕಾರಿ ವಿಧಾನಗಳು. ಎರಡು ಪ್ರಾತ್ಯಕ್ಷಿಕೆಗಳು.00:00 ಕನ್ನಡದ ಗುಟ್ಟು 00:36 ಕನ್ನಡಕ್ಕೊಂದು ಸಾಕೇತ ಸಿದ್ಧಾಂತ00:55 ನಡೆ ನುಡಿಗಳ ಸಂಕೀರ್ಣ01:12 ಸಾಕೇತ ಸಿದ್ಧಾಂತ03:10 ಹಿನ್ನೆಲೆ03:53 ಸಂದರ್ಭ - ಕವಿಗೋಷ್ಠಿ04:27 ಕವಿಗಳು05:27 ಪ್ರಾತ್ಯಕ್ಷಿಕೆ08:46 ಕನ್ನಡ ಕಲಿ ಕವಿತಾ ಚಾಲೆಂಜ್09:‌03 Credits
2023-06-1009 minSecret of Kannada ಕನ್ನಡದ ಗುಟ್ಟು Kannadada Guttu2023-03-0901 minशिव ज्योतिर्लिंग की कहानी | Shiv Jyotirlinga (12 Wonderful Stories of 12 Jyotirlinga)2023-02-2305 minSecret of Kannada ಕನ್ನಡದ ಗುಟ್ಟು Kannadada Guttu2023-02-1906 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuನಮ್ಮ ನಡುವಿದ್ದ ನಾಡೋಜ - Dr. Srinivas HavanurLike it? ...  Subscribe and Share!  Watch it ... https://www.youtube.com/mykannadakaliRead  it ...  http://kannadakali.com/publications/podcastsListen it ... https://anchor.fm/kannadakali ನಮ್ಮ ನಡುವಿದ್ದ ನಾಡೋಜ ಲೇಖನ: *** ಸಂಜಯ ಹಾವನೂರ ಓದು:        ವಿಶ್ವೇಶ್ವರ ದೀಕ್ಷಿತ  [ ಇಂದು, ಡಿಸೆಂಬರ ೨೮. ಕನ್ನಡದ ಹೊಸ ಬೆಳಕು ಮೂಡಿದ ದಿನ.  ಶ್ರೀನಿವಾಸ ಎಂಬ ಒಬ್ಬ ಹಳ್ಳಿಯ ಬಡ ಹುಡುಗ ಹುಟ್ಟಿದ ದಿನ. ಎಲ್ಲ ಕಷ್ಟಗಳನ್ನೂ ಮೀರಿ, ತನ್ನ ಕಲಿಯುವ ಉತ್ಕಟತೆ, ಪುಸ್ತಕ ಪ್ರೇಮ, ಮತ್ತು ಹೊಸತನದ ಹಂಬಲಿಕೆಗಳಿಂದ ಒಬ್ಬ ಉತ್ಕೃಷ್ಟ ಸಂಶೋಧಕನಾಗಿ, ಸಂಶೊಧನೆಗೇ ಒಂದು ಹೊಸ ಅಯಾಮವನ್ನು ಜೋಡಿಸಿ, ನಾಡೋಜನಾಗಿ ಬೆಳೆದು ನಿಂತ ಕತೆ ಇದು.  ಕನ್ನಡ ಕಲಿಗಳಿಗಷ್ಟೆ ಅಲ್ಲ, ಎಲ್ಲರಿಗೂ ಸ್ಫೂರ್ತಿ ನೀಡುವ,  ಡಾ. ಶ್ರಿನಿವಾಸ ಹಾವನೂರರನ್ನು ಇದಕ್ಕಿಂತ ಹತ್ತಿರವಾಗಿ ಕಂಡು ಹೇಳಿದ ಕತೆ ನಿಮಗೆ ಬೇರೆ ಎಲ್ಲಿಯೂ ಸಿಗದು. – ಸಂ. ]  0:0.0 ಪೀಠಿಕೆ 1:09 ಬಾಲ್ಯ, ಮತ್ತು ವಿದ್ಯಾರ್ಥಿ ಜೀವನ 2:41.5 ದಿಗ್ಗಜರ ಸಂಗಡ 3:56.5 ಸೃಜನಶೀಲ ಲೇಖಕನಾಗಿ 5:17.5 ಜನ್ಮಜಾತ ಸಂಶೋಧಕ 7:01 ಸಂಶೋಧನೆಗೆ ಮೂರನೆಯ ಆಯಾಮ 9:58 ಕನ್ನಡಕ್ಕೆ ಹೊಸತನ ತಂದರು 1:31 ಕನ್ನಡವೆ ಜೀವನ 12:55 ನಮ್ಮನ್ನು ಅಗಲಿಸಿ ಅಗಲಿದ ನಾಡೋಜ  13:44.5 ಸಂಪರ್ಕ
2022-12-2814 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಶಂಖಣ್ಣನ ಹಣೆಬರಹ - Śaṅkhaṇṇana haṇebarahaLike it? ...  Subscribe and Share!Watch it ... at https://www.youtube.com/mykannadakaliRead  it ...  http://kannadakali.com/publications/podcastsListen it ... https://anchor.fm/kannadakaliಶಂಖಣ್ಣನ ಹಣೆಬರಹ  ಯಾವ ಮನೆತನದಲ್ಲಿ ಹುಟ್ಟಿದರೇನು? ಏನು ಕಲಿತರೇನು? ಏನು ಮಾಡಿದರೇನು? ಮುಂದೆ ಏನಾಗುವುದು? ಎಲ್ಲವೂ ಹಣೆಬರಹ ಎಂದುಕೊಳ್ಳುವುದು ಸಾಮಾನ್ಯ. ವಿಶೇಷವಾಗಿ, ನಿರೀಕ್ಷಿಸಿದ್ದು ಆಗದಿದ್ದಾಗ, ಅಥವ,  ಕೆಲವರಿಗೆ ಸಿರಿ, ಸಂಪತ್ತು, ಸೌಲಭ್ಯ, ಖ್ಯಾತಿ, ಹೀಗೆಲ್ಲ, ಪಾತ್ರರಿದ್ದರೂ ಸಿಗದಿದ್ದಾಗ, ಅಪಾತ್ರರಿದ್ದರೂ ಅನಾಯಾಸವಾಗಿ ಸಿಕ್ಕಾಗ ಅಂದುಕೊಳ್ಳುವುದು ಹಣೆಬರಹ, ದೈವ, ಭಾಗ್ಯ, ಲಕ್ಕು,  ಅಂತ! ಇದು ನಿಜವೋ, ಕೆವಲ ಸಮಾಧಾನಕ್ಕೋಸ್ಕರ ಹೇಳಿಕೊಳ್ಳುವ ಮಾತೋ? ಅಂತೂ ಒಂದಾನೊಂದು ಸಂದರ್ಭದಲ್ಲಿ ನಿಮಗೂ ಹೀಗೆ ಅನಿಸಿರಬಹುದು. ಎಲ್ಲವನ್ನೂ ಆದಂತೆ ಒಪ್ಪಿಕೊಂಡು ಕೂಡುವ ಜಾಯಮಾನ ಚಾಣಕ್ಯನದು ಅಲ್ಲ ಅದರೂ ಅವನು ಹೇಳಿದ್ದು ಹೀಗೆ:  ದೇವ ದಾನವರು ಕೂಡಿ ಸಮುದ್ರಮಂಥನ ಮಾಡಿದಾಗ, ಅಮೃತಕ್ಕಿಂತ ಮೊದಲು ನವರತ್ನಗಳು, ಕಲ್ಪವೃಕ್ಷ, ಕಾಮಧೇನು. ಹೊರಬಂದವು; ವಾರುಣಿ ಅಪ್ಸರೆಯರು ಬಂದರು; ಲಕ್ಷ್ಮಿಯೂ ಉದಿಸಿದಳು; ಶಂಖ ಕೂಡ ಹುಟ್ಟಿದ್ದು ಸಮುದ್ರದಲ್ಲೆ.  ಅಂದರೆ ಅಕ್ಕ ಲಕ್ಷ್ಮಿಗೂ ಅಣ್ಣ ಶಂಖನಿಗೂ ಸಮುದ್ರರಾಜನೇ ಅಪ್ಪ!  ಚಾಣಕ್ಯ ನೀತಿಯ, ೧೭ನೆ ಅಧ್ಯಾಯದ ಚೆನ್ನುಡಿ ೫: Chanakya Niti (Chap. 17 – Shloka 5 )  ಪಿತಾ ರತ್ನಾಕರೋ ಯಸ್ಯ,    ಲಕ್ಷ್ಮೀರ್ಯಸ್ಯ ಸಹೋದರೀ,  ಶಂಖೋ ಭಿಕ್ಷಾಟನಂ ಕುರ್ಯಾತ್‌ -     ಫಲಂ ಭಾಗ್ಯಾನುಸಾರತಃ!  ರತ್ನಗಳ ಆಕರವೆ ಆದ ಸಮುದ್ರರಾಜನೆ ಅಪ್ಪ;  ಸಿರಿಯೆ ತಾನಾದ ಲಕ್ಷ್ಮಿಯೆ ತನ್ನ ಅಕ್ಕ. ಆದರೂ, ಈ ಶಂಖಣ್ಣ, "ಭವತಿ, ಬಿಕ್ಷಾಂದೇಹಿ!" ಅಂತ ಮನೆ ಮನೆ ತಿರುಗುತ್ತಾನಲ್ಲ! ಅವನ ಹಣೆಬರಹ!  ಕಡಲರಸನೇ ತನ್ನ ಅಪ್ಪ ,    ಸಿರಿಯಕ್ಕ ತನ್ನ ಒಡಹುಟ್ಟು ; ಆದರೂ ತಿರಿವ ಶಂಖಣ್ಣ !    ಅವರವರ ಹಣೆಬರಹ ಎಲ್ಲ!   ಆದರೆ ಇದೇ ಚೆನ್ನುಡಿಯ ಇನ್ನೊಂದು ಪಾಠಾಂತರ ಹೀಗಿದೆ:  ಪಿತಾ ರತ್ನಾಕರೋ ಯಸ್ಯ,     ಲಕ್ಷ್ಮೀರ್ಯಸ್ಯ ಸಹೋದರೀ,  ಶಂಖೋ ಭಿಕ್ಷಾಟನಂ ಕುರ್ಯಾತ್‌ -    ನ ದತ್ತಮುಪತಿಷ್ಠತೇ!  ಕಡಲರಸನೇ ತನ್ನ ಅಪ್ಪ ,    ಸಿರಿಯಕ್ಕ ತನ್ನ ಒಡಹುಟ್ಟು ; ಆದರೂ ತಿರಿವ ಶಂಖಣ್ಣ !    ಕೊಡದೆಯೇ ಪಡೆಯುವುದು ಎಂತು?   ಇದರಲ್ಲಿ ಕೊನೆಯ ಒಂದು ಸಾಲು ಮಾತ್ರ ಬೇರೆ ಆಗಿದೆ. ಬಹಳ ಅರ್ಥಗರ್ಭಿತವಾಗಿದೆ.  ಮೊದಲನೆ ಚೆನ್ನುಡಿಯಲ್ಲಿ‌, ಎಲ್ಲವೂ ಹಣೆಬರಹ ಎಂದು ಕೈಚಾಚಿ ಕುಳಿತದ್ದಾದರೆ, ಎರಡನೆಯದರಲ್ಲಿ, "ಕೊಡದೆಯೆ ಪಡೆಯುವುದು ಹೇಗೆ?" ಎಂದು ಕೇಳುತ್ತಾನೆ ಚಾಣಕ್ಯ.  ಇಲ್ಲಿ "ಕೊಡದೆಯೇ " ಅಂದರೆ,  ಬರಿ ದಾನ ಕೊಡದೆ ಅಂತ ಅಲ್ಲ, ಪಾಪ-ಪುಣ್ಯ ಅಂತ ಪರಲೋಕದ ಚಿಂತೆಯೂ ಅಲ್ಲ. ಇಲ್ಲಿ, ಇಹಲೋಕದಲ್ಲಿ, ನಿಮ್ಮನ್ನು ನೀವು ಅರ್ಪಿಸಿಕೊಳ್ಳದೆ, ಪೂರ್ತಿ ತೊಡಗಿಸಿಕೊಳ್ಳದೆ, invest ಮಾಡದೆ, ಶಕ್ತಿಯನ್ನು ವ್ಯಯಿಸದೆ ಜೀವನದಲ್ಲಿ ಏನೂ ದೊರೆಯುವುದಿಲ್ಲ, ಏನನ್ನೂ ಸಾಧಿಸಲು ಆಗುವುದಿಲ್ಲ. ಬಿತ್ತದೇ ಬೆಳೆ ಬರುವುದು ಉಂಟೆ? No action, No reaction!   ಅದಕ್ಕೆ, ಹಣೆಬರಹ ಹಣೆಯಲ್ಲೆ ಇರಲಿ. ಬದುಕು ಕೈಯಲ್ಲಿದೆ.  ಕೈ ಕೆಸರಾದರೆ ಬಾಯ್‌ ಮೊಸರು! ಇಲ್ಲವಾದರೆ, ಇಂದೋ ನಾಳೆಯೋ, ಶಂಖಣ್ಣನ ಜೊತೆಗೆ ತಿರುಪೆ ಎತ್ತುತ್ತ ತಿರುಗುವುದೆ ಗತಿ.  ನಿಮ್ಮವನೆ ಆದ ವಿಶ್ವೇಶ್ವರ ದೀಕ್ಷಿತ  ಕನ್ನಡ ಕಲಿ, ಬಿತ್ತರಿಕೆ,  ಶಂಖಣ್ಣನ ಹಣೆಬರಹ ಸಂಗೀತ : ಶ್ರೀಮತಿ ವಾಣಿ ಯದುನಂದನ December 5,2022  0:00  ಪೀಠಿಕೆ 1:38 ಚೆನ್ನುಡಿ ೧ - ಅವರವರ ಹಣೆಬರಹ ಎಲ್ಲ 3:07  ಚೆನ್ನುಡಿ ೨ - ಕೊಡದೆಯೇ ಪಡೆಯುವುದು ಎಂತು? 5:12  Credits
2022-12-0505 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಚಾತಕ - ಕವಿಸಮಯ Chataka KaviSamayaA Kannada Lesson - ಕನ್ನಡ ಪದ್ಯ ಪಾಠLike it? ...  Subscribe and Share!Watch it ... at https://www.youtube.com/mykannadakaliRead  it ...  http://kannadakali.com/publications/podcastsListen it ... https://anchor.fm/kannadakaliಚಾತಕ, Clamator jacobinus, Jacobin cuckoo , pied cuckoo or pied crested cuckoo ಎಂದು ಸಾಮಾನ್ಯವಾಗಿ ಗುರುತಿಸಲ್ಪಟ್ಟ, ಒಂದು ಕೋಗಿಲ ಜಾತಿಯ ಪಕ್ಷಿ. ಇದಕ್ಕೆ ಶಾರಂಗ,  ಮಾತಂಗ,  ಸ್ತೋಕಕ ಎಂದು ಕೂಡ ಹೆಸರುಗಳು ಇವೆ.      ಸ್ತೋಕ  ಅಂದರೆ ಕಣ , ಹನಿ.  ಮಳೆಯ ಹನಿಗಳನ್ನು ಮಾತ್ರ, ನೇರವಾಗಿ,  ಕುಡಿದು ಬದುಕುವ ಪಕ್ಷಿ ಸ್ತೋಕಕ, ಚಾತಕ . ಅದರಲ್ಲೂ, ಸ್ವಾತಿ ನಕ್ಷತ್ರದ ಮಳೆಗಾಗಿ ಹಾತೊರೆಯುತ್ತ, ಒಂಟಿ ಕಾಲಿನ ಮೇಲೆ, ಬಾಯ್ತೆರೆದು, ವರ್ಷವಿಡೀ ನಿಂತುಕೊಳ್ಳುವ ಪಕ್ಷಿ.  ಇದೊಂದು ಕವಿಸಮಯ.  ಕವಿ ಕಾಳಿದಾಸ ತನ್ನ ಮೇಘದೂತದಲ್ಲಿ ಯಕ್ಷ-ಯಕ್ಷಿಯರ ಪ್ರೇಮದ ಹಂಬಲಿಕೆಯ ರೂಪಕವಾಗಿ ಇದನ್ನು ಬಳಸಿದ್ದಾನೆ. ಇದು ಇತರ ಕಾವ್ಯಗಳಲ್ಲಿ  ಮುಂದುವೆರೆದು ಜನಜನಿತವಾಗಿದೆ. ಈ ಕವಿಸಮಯದ ಆಧಾರದ ಮೇಲೆ ರಚಿತವಾದ ಮೂರು ಚೆನ್ನುಡಿಗಳು ಹೀಗಿವೆ:  ಮೊದಲನೆಯ ಚೆನ್ನುಡಿ:    ಗೆಳತಿ ಚಾತಕಿ - ರೇ ರೇ ಚಾತಕ  ಎಲೆ ಎಲೇ ಗೆಳತಿ ಚಾತಕಿಯೆ, ಚಣವೊಮ್ಮೆ,        ಕಿವಿಗೊಟ್ಟು ನೀ ನನ್ನ ಮಾತೊಂದ ಕೇಳು: ಗಗನದಲಿ ಹಾರುವವು ಮೋಡಗಳು ಬಹಳ,        ಕರಿ ನೀಲಿ ಬಿಳಿ ಬೂದಿ ಹಿರಿ ಕಿರಿದು ತೆರನ;  ಮಳೆಗರೆದು ಇಳೆಯನ್ನು ತೋಯಿಸಲು ಕೆಲವು,     ನಗೆ ಮಿಂಚು ಸೂಸಿ ಬರಿ ಗುಡುಗುವವು  ಹಲವು :  ಕಂಡಕಂಡವರಿಗೆರಗುತ್ತ, ನೀ ಗೆಳತಿ,ಮೊರೆ ಇಡುತ ಬೇಡದಿರು, ನಾ ಬಡವಿ, ಎಂದು ಸಂಸ್ಕೃತ ಮೂಲ:  ಭರ್ತೃಹರಿ, ನೀತಿಶತಕ-೪೯   ರೇ ರೇ ಚಾತಕ, ಸಾವಧಾನಮನಸಾ, ಮಿತ್ರ ಕ್ಷಣಂ ಶ್ರೂಯತಾಂ.  ಅಂಭೋದಾ ಬಹವೋ ಹಿ ಸಂತಿ ಗಗನೇ ಸರ್ವೇಽಪಿ ನೈತಾದೃಶಾಃ ;ಕೇಚಿದ್ ವೃಷ್ಟಿಭಿರಾರ್ದ್ರಯಂತಿ ವಸುಧಾಂ ಗರ್ಜಂತಿ ಕೇಚಿದ್ ವೃಥಾ ;ಯಂ ಯಂ ಪಶ್ಯಸಿ ತಸ್ಯ ತಸ್ಯ ಪುರತೋ  ಮಾ ಬ್ರೂಹಿ ದೀನಂ ವಚಃ.         -----------------ಎರಡನೆಯ ಚೆನ್ನುಡಿ:      ಹಕ್ಕಿ ಚಾತಕಕೆ - ಏಕ ಏವ ಖಗಹಕ್ಕಿ ಚಾತಕಕೆ ಬಲು ಹೆಮ್ಮೆ,   ಮಳೆಯ ನೀರೇ ಬೇಕು ಸೊಗಕೆ;ಬೇಡುವುದು ಘನರಾಜನನ್ನೆ:   ಕೀಳ್ಜನಕೆ ಬಾಯ್ತೆರೆಯಲೇಕೆ?ಸಂಸ್ಕೃತ ಮೂಲ:    ಶ್ರೀಧರದಾಸನ ಸದುಕ್ತಿ ಕರ್ಣಾಮೃತಏಕ ಏವ ಖಗೋ ಮಾನೀ     ಸುಖಂ ಜೀವತಿ ಚಾತಕಃ; ಅರ್ಥಿತ್ವಂ  ಯಾತಿ ಶಕ್ತಸ್ಯ     ನ ನೀಚಮುಪಸರ್ಪತಿ.       ------------------ಮೂರನೆಯ ಚೆನ್ನುಡಿ:      ಮೂರು ಯಾ ನಾಲ್ಕು - ಚಾತಕಸ್ತ್ರಿಚತುರಾನ್ಮೂರು ಯಾ ನಾಲ್ಕು ಹನಿ ನೀರು ನೀಡೆಂದು    ಚಾತಕವು ಬಾಯ್ದೆರೆದು ಬೇಡಲಾ ಮುಗಿಲುಮಳೆಗರೆದು ತುಂಬಿಸಿತು ಇಡಿಯ ಇಳೆಯನ್ನು    ದೊಡ್ಡವರ ಔದಾರ್ಯಕಿದೆಯೆ ಇತಿಮಿತಿಯು!ಸಂಸ್ಕೃತ ಮೂಲ:  ಪೂರ್ವಜಾತಕಾಷ್ಟಕಂ ಚಾತಕಸ್ತ್ರಿಚತುರಾನ್ ಪಯಃ ಕಣಾನ್     ಯಾಚತೇ ಜಲಧರಂ ಪಿಪಾಸಯಾ; ಸೋಽಪಿ  ಪೂರಯತಿ ವಿಶ್ವಮಂಭಸಾ :    ಹಂತ ಹಂತ ಮಹತಾಮುದಾರತಾ!      ---------------0:00 ಪರಿಚಯ 1:18 ಗೆಳತಿ ಚಾತಕಿ - ರೇ ರೇ ಚಾತಕ 3:25 ಹಕ್ಕಿ ಚಾತಕಕೆ - ಏಕ ಏವ ಖಗ 4:21 ಮೂರು ಯಾ ನಾಲ್ಕು - ಚಾತಕಸ್ತ್ರಿಚತುರಾನ್
2022-11-0205 minSecret of Kannada ಕನ್ನಡದ ಗುಟ್ಟು Kannadada Guttu2022-09-2804 minSecret of Kannada ಕನ್ನಡದ ಗುಟ್ಟು Kannadada Guttu2022-08-3105 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಕಾಲ: ಪ್ರಕಿರಿತ ಪ್ರಜ್ಞಾನ - kāla: prakirita prajñānaLike it? ......  Subscribe and Share! See it  at https://www.youtube.com/channel/UCCON6n4lEgj6NsPqCLZdDSwRead   at http://kannadakali.com/publications/podcastsListen at https://anchor.fm/kannadakali ಕಾಲ ಎಂದರೆ ಸದಾ ಉರುಳುತ್ತಿರುವ, ಮುನ್ನಡೆಯುತ್ತಿರುವ, ಮತ್ತು ಕಳೆಯುತ್ತಿರುವ ಸಮಯ; ಎಲ್ಲವನ್ನೂ ಆವರಿಸಿರುವ ವಿಷ್ಣು, ಎಲ್ಲವನ್ನೂ ಮೀರಿರುವ ಎಲ್ಲಕ್ಕೂ ಮೂಲ ಪರಮಾತ್ಮ ಶಿವ, ಅವ್ಯಕ್ತದಿಂದ ಹೊಡಕರಿಸಿದ ಕೃಷ್ಣ, ಮತ್ತು ಕಪ್ಪು ಎನ್ನುವ ಸಾಮಾನ್ಯ ಅರ್ಥಗಳು.  ಶಿವ ಎಂದರೆ ಶುಭ್ರ, ಬಿಳಿ ಕೂಡ.   "ನೀ ಯಾರು ಹೇಳು" ಎಂದು ಅರ್ಜುನ ಕೇಳಿದಾಗ ಕೃಷ್ಣ ಹೇಳಿದ್ದು, " ಕಾಲೋಽಸ್ಮಿ, ಲೋಕಕ್ಷಯಕೃತ್ಪ್ರವೃದ್ಧಃ, ಲೋಕಗಳನಳಿಸುವ ಮಹಾನ್ ಕಾಲ ನಾನು."  ...  Kaala means Time that is continuously turning, going forth, and getting sent; Vishnu who envelopes and fills everything, Paramatma  Shiva beyond everything, Krishna who manifested from the unmanifest, and black. Shiva means unblemished and white as well.  When Arjuna asks, "Who are you?" , Krishna says, "Kālō̕smi, lōkakṣayakr̥tpravr̥d'dhaḥ, lōkagaḷanaḷisuva mahān kāla nānu" - I am the Kaala, engaged in annihilation of the worlds ...  0:00 ಮುನ್ನುಡಿ 1:07 ಕವನ : ಕಾಲ 3:58 Credits
2022-08-1704 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಮನ್ವಂತರದ ಮನುಜೆ: ಮೇರಿ ಕ್ಯೂರಿ MarieCurieನೊಬೆಲ್ ಬಿರುದಿಗೇ ಒಂದು ವಿಶಿಷ್ಟ, ವಿಶ್ವವ್ಯಾಪಿ ಪ್ರತಿಷ್ಠೆಯನ್ನು ತಂದು ಕೊಟ್ಟು, ಇತಿಹಾಸದಲ್ಲಿ ಅಮರಳಾಗಿ ನಿಂತ ಮೇರಿ ಕ್ಯೂರಿಯ ಜೀವನ್ಮಹಿಮೆಯು, ವಿಜ್ಞಾನಿಗಳಷ್ಟೇ ಅಲ್ಲ, ಸರ್ವರೂ, ಸರ್ವದಾ ಮೆಲುಕು ಹಾಕಬೇಕಾದಂಥ ಮಹಾರ್ಥಕ ಚರಿತೆ; “ಮಾನವನಾಗಿ ಹುಟ್ಟಿದ್ಮೇಲೆ ಏನೇನ್ ಓದ್ದೀ?” ಎಂದರೆ “ಮೇರಿ ಕ್ಯೂರಿ ಕತೆ ಓದಿದೆ!” ಎಂಬ ಹರ್ಷೋದ್ಗಾರವನ್ನು ಹೊರಪಡಿಸುವ, ಹುರಿಯುಕ್ಕಿಸುವಂಥ ವಿಷಯ.   "ಚಾಲೆಂಜರ್ ಆಳದಿಂದ ಗೌರೀಶಂಕರ ಶಿಖರದ ತುದಿಗೆ" ಅವಳ ಏರಿಕೆಯು ಮಾನವ ಇತಿಹಾಸದಲ್ಲಿ, ಮೀರಿಸಲು ಅಸಾಧ್ಯವಾದ, ಅಸಮಾನ, ಅಪ್ರತಿಮ,  ಸಾಧನೆಯ ಸಂಕೇತ.  Read   at https://kannadakali.com/publications/podcastsWatch at https://www.youtube.com/channel/UCCON6n4lEgj6NsPqCLZdDSwListen at https://anchor.fm/kannadakali Like it ? Subscribe and Share  ಕನ್ನಡ ಕಲಿ ಬಿತ್ತರಿಕೆ, ಜುಲೈ ೨೨, ೨೦೨೨ಮನ್ವಂತರದ ಮನುಜೆ: ಮೇರಿ ಕ್ಯೂರಿಬರೆಹ: ಎಸ್. ಜಿ. ಸೀತಾರಾಮ್ಓದು  : ಶ್ರುತಿ ಅರವಿಂದಚಿತ್ರಗಳು: ವಿಕಿ ಮೀಡಿಯ ಕೃಪೆManvantarada manuje : mēri kyūriAuthor: Es. Ji. SītārāmRead by: Śruti aravinda0:00 ನುಡಿ ನಮನ 1:06 ತಲೆಬರಹ 1:16 ಮೇರಿಯ ಮಹಿಮೆ 3:18 ಹಿರಿಮೆಯ ಗಣಿ 4:24 ಸಾಧನೆಗಳಿಂದ ಅಮರತ್ವ 5:33 ಜೀವನದಲ್ಲಿ ಬೆಂದಳು - ವಿಜ್ಞಾನಕ್ಕೆ ಅತ್ಮಾಹುತಿ ಕೊಟ್ಟಳು 8:00 ಮನುಕುಲಕ್ಕೆ ಮೇರು ತಾರೆ ಆದಳು 9:34 ಕ್ರೆಡಿಟ್ಸ, ಸಂಪರ್ಕ
2022-07-2309 minSecret of Kannada ಕನ್ನಡದ ಗುಟ್ಟು Kannadada Guttu2022-06-1803 minSecret of Kannada ಕನ್ನಡದ ಗುಟ್ಟು Kannadada Guttu2022-05-1606 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಕೆ.ಟಿ. ಗಟ್ಟಿ Ke.Ṭi. Gaṭṭiಕೆ.ಟಿ. ಗಟ್ಟಿ - ಸಾಹಿತಿ, ಭಾಷಾ ತಜ್ಞ, ಪ್ರಾಧ್ಯಾಪಕ, ಕೃಷಿಕ.ಏಕೀಕರಣದ ಚಳುವಳಿ ಅವರನ್ನು ಸೆಳೆದಿತ್ತು. ಬರವಣಿಗೆ ಚಿಗುರಿತು, ಕರ್ನಾಟಕ ಹುಟ್ಟಿತು, ಆದರೆ ಕಾಸರಗೋಡು ಕೇರಳದಲ್ಲೇ ಉಳಿಯಿತು. ಕನಸು ನನಸಾಗಲಿಲ್ಲ.  ಗಟ್ಟಿ ಅವರ ಮೊತ್ತ ಮೊದಲ ಕಾದಂಬರಿ 'ಶಬ್ದಗಳು' ೧೯೭೬ರಲ್ಲಿ ಸುಧಾ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಇವರ ೧೪ ಕಾದಂಬರಿಗಳು ೨೮ ವರ್ಷಗಳ ಕಾಲ ಅವ್ಯಾಹತವಾಗಿ ಸುಧಾ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಹರಿದವು.  ಒಬ್ಬನೇ ಲೇಖಕನ ಇಷ್ಟೊಂದು ಕಾದಂಬರಿಗಳು ಇಷ್ಟೊಂದು ವರ್ಷಗಳ ಕಾಲ ಧಾರಾವಾಹಿಯಾಗಿ ಹರಿದುದು ... Read   at https://kannadakali.com/publications/podcastsWatch at https://www.youtube.com/channel/UCCON6n4lEgj6NsPqCLZdDSwListen at https://anchor.fm/kannadakali 0:17 ಹುಟ್ಟು 1:09 ಶಿಕ್ಷಕ  1:44 ಸಾಹಿತಿ  3:12 ಭಾಷಾ ತಜ್ಞ  3:40 ಕೃಷಿಕ 4:04 ಪ್ರಶಸ್ತಿ-ಗೌರವ 4:40 ಕೆಲವು ಗಟ್ಟಿ ಕೃತಿಗಳು  4:26 ಮುಚ್ಚಳಿಕೆ
2022-05-0205 minSecret of Kannada ಕನ್ನಡದ ಗುಟ್ಟು Kannadada Guttu2022-04-1501 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಯುಗಾದಿಯ ಚೇತನ BendreLike it? Subscribe! ’ರಸವೆ ಜನನ, ವಿರಸ ಮರಣ, ಸಮರಸವೆ ಜೀವನ’ ಇದು ಜೀವನದ ಕಷ್ಟ-ಸುಖಗಳನ್ನು ಎಲ್ಲ ಸ್ತರಗಳಲ್ಲೂ ಅನುಭವಿಸಿ, ಜೀವನದ ಕುದಿಯಲ್ಲಿ ಬೆಂದ ಬೇಂದ್ರೆ ತತ್ವ. ’ಬೆಂದರೆ ಬೇಂದ್ರೆ’ ಎನ್ನುವುದು ಈಗ ಕನ್ನಡ ಪಡೆನುಡಿ.  ಅದಕ್ಕೆ, ಅವರು ಕಾಲ ಕಳೆದಂತೆ ಇನ್ನೂ ರೆಲೆವಂಟ್ ಆಗುತ್ತ ಹೋಗುತ್ತಾರೆ; ಬೇಂದ್ರೆ ಅಜ್ಜ ಬಹಳ ಹತ್ತಿರವಾಗುತ್ತಾನೆ. ಬಂಡಾಯದ ಬಿಸಿ ಆರಿದರೂ, ನವ್ಯದ ಪ್ರತಿಮೆಗಳು ಮಾಸಿದರೂ ಬೇಂದ್ರೆ ಬಾಳಗೀತೆ ಮತ್ತೆ ಮತ್ತೆ ನವ ಉದಯವನ್ನು ತಳೆಯುತ್ತದೆ. ಒಮ್ಮೆ ಭಾವಗೀತೆಯಾಗಿ ಮನ ಸೂರೆಗೊಳ್ಳುತ್ತದೆ; ಇನ್ನೊಮ್ಮೆ ಭಕ್ತಿಗೀತೆಯಾಗಿ ಬೆಳಕು ತೋರುತ್ತದೆ. ಮತ್ತೊಮ್ಮೆ ಜಾನಪದವಾಗಿ ಮಣ್ಣಿನ ವಾಸನೆ ಬೀರುತ್ತದೆ. ಕೆಲವೊಮ್ಮೆ ’ಆನ ತಾನನ’ ಎಂದು ಸುಲಭವಾಗಿ ಕಂಡರೂ, ಮಾಂತ್ರಿಕನ ಮುಷ್ಟಿಯಲ್ಲಿನ ಬಟ್ಟೆಯಂತೆ ಎಳೆದಷ್ಟೂ ಉದ್ದವಾಗಿ ಹರಿಯುತ್ತದೆ. ಇದೆ ಈ ಗಾರುಡಿಗನ ಗಮ್ಮತ್ತು. more ....  Read   at https://kannadakali.com/publications/podcastsWatch at https://www.youtube.com/channel/UCCON6n4lEgj6NsPqCLZdDSwListen at https://anchor.fm/kannadakali
2022-03-3105 minSecret of Kannada ಕನ್ನಡದ ಗುಟ್ಟು Kannadada Guttu2022-03-1401 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಗೀತಾ ಪ್ರವಿಧಾನ ಭಾಗ ೧/೬ ಸಾರ, ಸಂದೇಶ Gītā pravidhāna: Part 1/6 sāra, sandēśaLike it...? Subscribe!Watch at  https://www.youtube.com/playlist?list=PL691xAmMBA-Ep6ct8hX0DYybuzXFU_j1cListen at  https://anchor.fm/kannadakaliಭಗವದ್ಗೀತೆಯ ಸಾರ ಸಂದೇಶದ ಜೊತೆಗೆ, ಭಗವದ್ಗೀತೆಯನ್ನು ವೈಧಾನಿಕ ದೃಷ್ಟಿಕೋನದಿಂದ ಅವಲೋಕಿಸುವ  ಪ್ರಯತ್ನ.(ಕರ್ನಾಟಕ ಸಾಂಸ್ಕೃತಿಕ ಸಂಘ,  ದಕ್ಷಿಣ ಕ್ಯಾಲಿಫೋರ್ನಿಯದ "ಕೂಡಿ ಕಲಿ ಕೂಡಿ ನಲಿ"   ಸರಣಿಯಲ್ಲಿ,  ಮಂಗಳವಾರ, ಜನೆವರಿ,  ೧೯, ೨೦೨೧ ರಂದು ನಡೆದ ಕಾರ್ಯಕ್ರಮ. A program in the series Kudi Kali Kudi Nali of Karnataka Cultural Association of Southern California)ಆರು ಭಾಗಗಳಲ್ಲಿ In six parts:ಭಾಗ ೧/೬ ಸಾರ, ಸಂದೇಶ  Part 1/6 Essence, Message  https://youtu.be/FczvmeHjAoAಭಾಗ ೨/೬  ವಿಧಾನ ಮತ್ತು ಗೀತೆಯ ಸಮಸ್ಯೆ Part 2/6 Method, Problem of Gita https://youtu.be/oPDQhANg-B0ಭಾಗ ೩/೬  ಮನ ಒಲಿಸುವ ಕಲೆ Part 3/6 Art of Persuasion https://youtu.be/ys9-5Nm1Fngಭಾಗ ೪/೬  ಕಾಲ, ಅವಕಾಶ Part 4/6 Time, Space https://youtu.be/21OGv5xfikYಭಾಗ ೫/೬  ಪಾರ್ಥನ ಪ್ರಾರ್ಥನೆ, ಭಕ್ತಿ ಸಾಧನ  Part 5/6 Arjuna's Prayer, Devotion as Instrument https://youtu.be/aFiqgy9R9Msಭಾಗ ೬/೬  ಪ್ರಶ್ನೋತ್ತರ, ಚರ್ಚೆ, ಹರಟೆ Part 6/6 Q&A, Chat https://youtu.be/7EPDV4onhPM
2022-02-2814 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಗೀತಾ ಪ್ರವಿಧಾನ: ಭಾಗ ೨/೬ ವಿಧಾನ ಮತ್ತು ಗೀತೆಯ ಸಮಸ್ಯೆ Gītā pravidhāna: Part 2/6 Method & Problem of GitaLike it...?  Subscribe!Watch at  https://www.youtube.com/playlist?list=PL691xAmMBA-Ep6ct8hX0DYybuzXFU_j1cListen at  https://anchor.fm/kannadakaliಭಗವದ್ಗೀತೆಯ ಸಾರ ಸಂದೇಶದ ಜೊತೆಗೆ, ಭಗವದ್ಗೀತೆಯನ್ನು ವೈಧಾನಿಕ ದೃಷ್ಟಿಕೋನದಿಂದ ಅವಲೋಕಿಸುವ  ಪ್ರಯತ್ನ.(ಕರ್ನಾಟಕ ಸಾಂಸ್ಕೃತಿಕ ಸಂಘ,  ದಕ್ಷಿಣ ಕ್ಯಾಲಿಫೋರ್ನಿಯದ "ಕೂಡಿ ಕಲಿ ಕೂಡಿ ನಲಿ"   ಸರಣಿಯಲ್ಲಿ,  ಮಂಗಳವಾರ, ಜನೆವರಿ,  ೧೯, ೨೦೨೧ ರಂದು ನಡೆದ ಕಾರ್ಯಕ್ರಮ. A program in the series Kudi Kali Kudi Nali of Karnataka Cultural Association of Southern California)ಆರು ಭಾಗಗಳಲ್ಲಿ In six parts:ಭಾಗ ೧/೬ ಸಾರ, ಸಂದೇಶ  Part 1/6 Essence, Message  https://youtu.be/FczvmeHjAoAಭಾಗ ೨/೬  ವಿಧಾನ ಮತ್ತು ಗೀತೆಯ ಸಮಸ್ಯೆ Part 2/6 Method, Problem of Gita https://youtu.be/oPDQhANg-B0ಭಾಗ ೩/೬  ಮನ ಒಲಿಸುವ ಕಲೆ Part 3/6 Art of Persuasion https://youtu.be/ys9-5Nm1Fngಭಾಗ ೪/೬  ಕಾಲ, ಅವಕಾಶ Part 4/6 Time, Space https://youtu.be/21OGv5xfikYಭಾಗ ೫/೬  ಪಾರ್ಥನ ಪ್ರಾರ್ಥನೆ, ಭಕ್ತಿ ಸಾಧನ  Part 5/6 Arjuna's Prayer, Devotion as Instrument https://youtu.be/aFiqgy9R9Msಭಾಗ ೬/೬  ಪ್ರಶ್ನೋತ್ತರ, ಚರ್ಚೆ, ಹರಟೆ Part 6/6 Q&A, Chat https://youtu.be/7EPDV4onhPM
2022-02-2808 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಗೀತಾ ಪ್ರವಿಧಾನ: ಭಾಗ ೩/೬ ಮನ ಒಲಿಸುವ ಕಲೆ Gītā pravidhāna: Part 3/6 Art of PersuasionLike it...? Subscribe!Watch at  https://www.youtube.com/playlist?list=PL691xAmMBA-Ep6ct8hX0DYybuzXFU_j1cListen at  https://anchor.fm/kannadakaliಭಗವದ್ಗೀತೆಯ ಸಾರ ಸಂದೇಶದ ಜೊತೆಗೆ, ಭಗವದ್ಗೀತೆಯನ್ನು ವೈಧಾನಿಕ ದೃಷ್ಟಿಕೋನದಿಂದ ಅವಲೋಕಿಸುವ  ಪ್ರಯತ್ನ.(ಕರ್ನಾಟಕ ಸಾಂಸ್ಕೃತಿಕ ಸಂಘ,  ದಕ್ಷಿಣ ಕ್ಯಾಲಿಫೋರ್ನಿಯದ "ಕೂಡಿ ಕಲಿ ಕೂಡಿ ನಲಿ"   ಸರಣಿಯಲ್ಲಿ,  ಮಂಗಳವಾರ, ಜನೆವರಿ,  ೧೯, ೨೦೨೧ ರಂದು ನಡೆದ ಕಾರ್ಯಕ್ರಮ. A program in the series Kudi Kali Kudi Nali of Karnataka Cultural Association of Southern California)ಆರು ಭಾಗಗಳಲ್ಲಿ In six parts:ಭಾಗ ೧/೬ ಸಾರ, ಸಂದೇಶ  Part 1/6 Essence, Message  https://youtu.be/FczvmeHjAoAಭಾಗ ೨/೬  ವಿಧಾನ ಮತ್ತು ಗೀತೆಯ ಸಮಸ್ಯೆ Part 2/6 Method, Problem of Gita https://youtu.be/oPDQhANg-B0ಭಾಗ ೩/೬  ಮನ ಒಲಿಸುವ ಕಲೆ Part 3/6 Art of Persuasion https://youtu.be/ys9-5Nm1Fngಭಾಗ ೪/೬  ಕಾಲ, ಅವಕಾಶ Part 4/6 Time, Space https://youtu.be/21OGv5xfikYಭಾಗ ೫/೬  ಪಾರ್ಥನ ಪ್ರಾರ್ಥನೆ, ಭಕ್ತಿ ಸಾಧನ  Part 5/6 Arjuna's Prayer, Devotion as Instrument https://youtu.be/aFiqgy9R9Msಭಾಗ ೬/೬  ಪ್ರಶ್ನೋತ್ತರ, ಚರ್ಚೆ, ಹರಟೆ Part 6/6 Q&A, Chat https://youtu.be/7EPDV4onhPM
2022-02-2820 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಗೀತಾ ಪ್ರವಿಧಾನ: ಭಾಗ ೪/೬ ಕಾಲ, ಅವಕಾಶ Gītā pravidhāna: Part 4/6 Time, SpaceLike it...? Subscribe!Watch at  https://www.youtube.com/playlist?list=PL691xAmMBA-Ep6ct8hX0DYybuzXFU_j1cListen at  https://anchor.fm/kannadakaliಭಗವದ್ಗೀತೆಯ ಸಾರ ಸಂದೇಶದ ಜೊತೆಗೆ, ಭಗವದ್ಗೀತೆಯನ್ನು ವೈಧಾನಿಕ ದೃಷ್ಟಿಕೋನದಿಂದ ಅವಲೋಕಿಸುವ  ಪ್ರಯತ್ನ.(ಕರ್ನಾಟಕ ಸಾಂಸ್ಕೃತಿಕ ಸಂಘ,  ದಕ್ಷಿಣ ಕ್ಯಾಲಿಫೋರ್ನಿಯದ "ಕೂಡಿ ಕಲಿ ಕೂಡಿ ನಲಿ"   ಸರಣಿಯಲ್ಲಿ,  ಮಂಗಳವಾರ, ಜನೆವರಿ,  ೧೯, ೨೦೨೧ ರಂದು ನಡೆದ ಕಾರ್ಯಕ್ರಮ. A program in the series Kudi Kali Kudi Nali of Karnataka Cultural Association of Southern California)ಆರು ಭಾಗಗಳಲ್ಲಿ In six parts:ಭಾಗ ೧/೬ ಸಾರ, ಸಂದೇಶ  Part 1/6 Essence, Message  https://youtu.be/FczvmeHjAoAಭಾಗ ೨/೬  ವಿಧಾನ ಮತ್ತು ಗೀತೆಯ ಸಮಸ್ಯೆ Part 2/6 Method, Problem of Gita https://youtu.be/oPDQhANg-B0ಭಾಗ ೩/೬  ಮನ ಒಲಿಸುವ ಕಲೆ Part 3/6 Art of Persuasion https://youtu.be/ys9-5Nm1Fngಭಾಗ ೪/೬  ಕಾಲ, ಅವಕಾಶ Part 4/6 Time, Space https://youtu.be/21OGv5xfikYಭಾಗ ೫/೬  ಪಾರ್ಥನ ಪ್ರಾರ್ಥನೆ, ಭಕ್ತಿ ಸಾಧನ  Part 5/6 Arjuna's Prayer, Devotion as Instrument https://youtu.be/aFiqgy9R9Msಭಾಗ ೬/೬  ಪ್ರಶ್ನೋತ್ತರ, ಚರ್ಚೆ, ಹರಟೆ Part 6/6 Q&A, Chat https://youtu.be/7EPDV4onhPM
2022-02-2809 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಗೀತಾ ಪ್ರವಿಧಾನ: ಭಾಗ ೫/೬ ಪಾರ್ಥನ ಪ್ರಾರ್ಥನೆ, ಭಕ್ತಿ ಸಾಧನ Gītā Pravidhāna: Part 5/6 Prayer, DevotionLike it...? Subscribe!Watch at  https://www.youtube.com/playlist?list=PL691xAmMBA-Ep6ct8hX0DYybuzXFU_j1cListen at  https://anchor.fm/kannadakaliಭಗವದ್ಗೀತೆಯ ಸಾರ ಸಂದೇಶದ ಜೊತೆಗೆ, ಭಗವದ್ಗೀತೆಯನ್ನು ವೈಧಾನಿಕ ದೃಷ್ಟಿಕೋನದಿಂದ ಅವಲೋಕಿಸುವ  ಪ್ರಯತ್ನ.(ಕರ್ನಾಟಕ ಸಾಂಸ್ಕೃತಿಕ ಸಂಘ,  ದಕ್ಷಿಣ ಕ್ಯಾಲಿಫೋರ್ನಿಯದ "ಕೂಡಿ ಕಲಿ ಕೂಡಿ ನಲಿ"   ಸರಣಿಯಲ್ಲಿ,  ಮಂಗಳವಾರ, ಜನೆವರಿ,  ೧೯, ೨೦೨೧ ರಂದು ನಡೆದ ಕಾರ್ಯಕ್ರಮ. A program in the series Kudi Kali Kudi Nali of Karnataka Cultural Association of Southern California)ಆರು ಭಾಗಗಳಲ್ಲಿ In six parts:ಭಾಗ ೧/೬ ಸಾರ, ಸಂದೇಶ  Part 1/6 Essence, Message  https://youtu.be/FczvmeHjAoAಭಾಗ ೨/೬  ವಿಧಾನ ಮತ್ತು ಗೀತೆಯ ಸಮಸ್ಯೆ Part 2/6 Method, Problem of Gita https://youtu.be/oPDQhANg-B0ಭಾಗ ೩/೬  ಮನ ಒಲಿಸುವ ಕಲೆ Part 3/6 Art of Persuasion https://youtu.be/ys9-5Nm1Fngಭಾಗ ೪/೬  ಕಾಲ, ಅವಕಾಶ Part 4/6 Time, Space https://youtu.be/21OGv5xfikYಭಾಗ ೫/೬  ಪಾರ್ಥನ ಪ್ರಾರ್ಥನೆ, ಭಕ್ತಿ ಸಾಧನ  Part 5/6 Arjuna's Prayer, Devotion as Instrument https://youtu.be/aFiqgy9R9Msಭಾಗ ೬/೬  ಪ್ರಶ್ನೋತ್ತರ, ಚರ್ಚೆ, ಹರಟೆ Part 6/6 Q&A, Chat https://youtu.be/7EPDV4onhPM
2022-02-2809 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಗೀತಾ ಪ್ರವಿಧಾನ: ಭಾಗ ೬/೬ ಪ್ರಶ್ನೋತ್ತರ, ಚರ್ಚೆ, ಹರಟೆ Gītā pravidhāna:Part 6/6 Q&A, ChatLike it...? Subscribe!Watch at  https://www.youtube.com/playlist?list=PL691xAmMBA-Ep6ct8hX0DYybuzXFU_j1cListen at  https://anchor.fm/kannadakaliಭಗವದ್ಗೀತೆಯ ಸಾರ ಸಂದೇಶದ ಜೊತೆಗೆ, ಭಗವದ್ಗೀತೆಯನ್ನು ವೈಧಾನಿಕ ದೃಷ್ಟಿಕೋನದಿಂದ ಅವಲೋಕಿಸುವ  ಪ್ರಯತ್ನ.(ಕರ್ನಾಟಕ ಸಾಂಸ್ಕೃತಿಕ ಸಂಘ,  ದಕ್ಷಿಣ ಕ್ಯಾಲಿಫೋರ್ನಿಯದ "ಕೂಡಿ ಕಲಿ ಕೂಡಿ ನಲಿ"   ಸರಣಿಯಲ್ಲಿ,  ಮಂಗಳವಾರ, ಜನೆವರಿ,  ೧೯, ೨೦೨೧ ರಂದು ನಡೆದ ಕಾರ್ಯಕ್ರಮ. A program in the series Kudi Kali Kudi Nali of Karnataka Cultural Association of Southern California)ಆರು ಭಾಗಗಳಲ್ಲಿ In six parts:ಭಾಗ ೧/೬ ಸಾರ, ಸಂದೇಶ  Part 1/6 Essence, Message  https://youtu.be/FczvmeHjAoAಭಾಗ ೨/೬  ವಿಧಾನ ಮತ್ತು ಗೀತೆಯ ಸಮಸ್ಯೆ Part 2/6 Method, Problem of Gita https://youtu.be/oPDQhANg-B0ಭಾಗ ೩/೬  ಮನ ಒಲಿಸುವ ಕಲೆ Part 3/6 Art of Persuasion https://youtu.be/ys9-5Nm1Fngಭಾಗ ೪/೬  ಕಾಲ, ಅವಕಾಶ Part 4/6 Time, Space https://youtu.be/21OGv5xfikYಭಾಗ ೫/೬  ಪಾರ್ಥನ ಪ್ರಾರ್ಥನೆ, ಭಕ್ತಿ ಸಾಧನ  Part 5/6 Arjuna's Prayer, Devotion as Instrument https://youtu.be/aFiqgy9R9Msಭಾಗ ೬/೬  ಪ್ರಶ್ನೋತ್ತರ, ಚರ್ಚೆ, ಹರಟೆ Part 6/6 Q&A, Chat https://youtu.be/7EPDV4onhPM
2022-02-2822 minSecret of Kannada ಕನ್ನಡದ ಗುಟ್ಟು Kannadada Guttu2022-02-1402 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಸಿಂಹತ್ವ - ರಾಜತ್ವKannada version of  1. nAbhiShEko na saMskAraH and 2. EkohamsahAyOhamRead    at  https://kannadakali.com/publications/podcastsWatch at  https://www.youtube.com/channel/UCCON6n4lEgj6NsPqCLZdDSwListen at https://anchor.fm/kannadakali ಕಂನುಡಿ - ೧ವೇದ ಮಂತ್ರವನುಲಿದು, ಎರೆದುಕಟ್ಟಿಹರೆ ಸಿಂಹಕ್ಕೆ ಪಟ್ಟ?ತನ್ನಳವಿನಿಂದ ಮಿಗಗಳನುಗೆದ್ದು ಗಳಿಸಿಹುದು ರಾಜತ್ವ.ಸಂಸ್ಕೃತ ಮೂಲ:       ಗರುಡ ಪುರಾಣ, ಆಚಾರಕಾಂಡ, ಅಧ್ಯಾಯ ೧೧೫ನಾಭಿಷೇಕೋ ನ ಸಂಸ್ಕಾರಃಸಿಂಹಸ್ಯ ಕ್ರಿಯತೇ ವನೇ;ವಿಕ್ರಮಾರ್ಜಿತ ಸತ್ವಸ್ಯಸ್ವಯಮೇವ ಮೃಗೇಂದ್ರತಾ.----------------------ಕಂನುಡಿ - 2"ಒಂಟಿಗನು, ನೆರವಿಲ್ಲ ನನಗೆ,ಸೊರಗಿ ಬೆತ್ತಲೆ ಸಾಯುತಿರುವೆ"ಈ ಪರಿಯ ಚಿಂತೆ ಕನಸಲ್ಲುಬರದು ವನರಾಜ ಸಿಂಹಕ್ಕೆ!ಸಂಸ್ಕೃತ ಮೂಲ: ಸುಭಾಷಿತಾವಲಿ – 582"ಏಕೋಽಹಮಸಹಾಯೋಽಹಂ,ಕೃಶೋಽಹಮಪರಿಚ್ಛದಃ"ಸ್ವಪ್ನೇಪ್ಯೇವಂ ವಿಧಾ ಚಿಂತಾಮೃಗೇಂದ್ರಸ್ಯ ನ ಜಾಯತೇ.#kannadakali #secretofkannada #vishweshwar_dixit
2022-01-1102 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttu(ಇ + ಅ)ಷ್ಟು = ಎಷ್ಟು? (i + a)ṣṭu = eṣṭu?ಕನ್ನಡದ ಗುಟ್ಟು Secret of Kannadaಕನ್ನಡ ಬಲ್ಲವರಿಗೆ ಒಂದು ಪ್ರಶ್ನೆ ಷ ಸಂಸ್ಕೃತದಿಂದ ಕನ್ನಡಕ್ಕೆ ಬಂದದ್ದು ಎಂದಾದರೆ, [ಅ।ಇ।ಎ]ಷ್ಟು ಪದಗಳ ಹುಟ್ಟು ಹೇಗೆ?   ಈ ಪ್ರಶ್ನೆ ಪಂಡಿತರಿಗೆ ವಿದ್ವಾಂಸರಿಗೆ ಅಷ್ಟೇ ಅಲ್ಲ; ಕನ್ನಡ ಬಲ್ಲ ಎಲ್ಲರೂ ಉತ್ತರಿಸಬಹುದುif ṣ came into Kannada from Sanskrit, what is the origin of Kannada words aṣṭu,  iṣṭu,  and eṣṭu? ------------------------------------------------------------------------------Read    at  https://kannadakali.com/publicationsWatch at  https://www.youtube.com/channel/UCCON6n4lEgj6NsPqCLZdDSwListen at https://anchor.fm/kannadakaliLike    it? ......  Subscribe and Share!----------------------------------------------------------------------------00:00 ಕನ್ನಡದ ಗುಟ್ಟು 00:36  ಪೀಠಿಕೆ: (ಇ + ಅ)ಷ್ಟು = ಎಷ್ಟು? ಕನ್ನಡ ಬಲ್ಲವರಿಗೆ ಒಂದು ಪ್ರಶ್ನೆ 01:21 ಇಷ್ಟು ಅಷ್ಟು ಅಂದರೆ ಎಷ್ಟು?02:38 ಸಶೇಷ ಕನ್ನಡದ ವಿಶೇಷ04:45 ಇತಿಹಾಸ 05:56 ವಾದ ೧: ಸಂಸ್ಕೃತದಿಂದ ಕನ್ನಡಕ್ಕೆ ಬಂದವು06:44 ವಾದ ೨: ಷ ಕಾರ ದೇಸಿ ವರ್ಣ07:33 ವಾದ ೩:  ಅಚ್ಚ ಕನ್ನಡ  ಪದಗಳು08:00 ಒಂದು ಊಹೆ (conjecture)09:06 ಏನ್‌ಅಂತೀರಿ 09:26 Credits  
2021-11-2109 minSecret of Kannada ಕನ್ನಡದ ಗುಟ್ಟು Kannadada Guttu2021-11-0102 minSecret of Kannada ಕನ್ನಡದ ಗುಟ್ಟು Kannadada Guttu
Secret of Kannada ಕನ್ನಡದ ಗುಟ್ಟು Kannadada Guttuಅನೇಕದಂತಾಲಂಕಾರ anēkadantālaṅkāraಕನ್ನಡದ ಗುಟ್ಟು:  ಅಸಾಧ್ಯವನ್ನು ಸಾಧ್ಯಗೊಳಿಸುವುದೆ ಕನ್ನಡ - ಅನೇಕದಂತಾಲಂಕಾರ   ಇದು "ಅನೇಕದಂತಾಲಂಕಾರ" ದ ನಿರೂಪಣೆ  ಅಗಜಾನನ ಪದ್ಮಾರ್ಕಂ ಶ್ಲೋಕದಿಂದ ಪ್ರೇರಿತವಾಗಿ, ಅದನ್ನು ಚಾಲೆಂಜ್ ಆಗಿ ಗಣಿಸಿ, "ಸರಸ ಸಾಹಿತ್ಯ ಸಲ್ಲಾಪ" ವಾಟ್ಸಾಪ್‌ ಗುಂಪಿನಲ್ಲಿ ನಡೆದ  ಚಮತ್ಕಾರಕ ಪದ್ಯ ರಚನೆಯ ಪ್ರಯೋಗದ ವಿವರ ಮತ್ತು ಫಲಿತಾಂಶಗಳು   Secret of Kannada :  anēkadantālaṅkāra - Asādhyavannu sādhyagoḷisuvude kannaḍa This serves as exposition on Anekadantalankara. Description and results of an experiment, conducted in "Sarasa sAhitya SallApa" WhatsApp group,  in constructing "ingenious" poems   Read    at  https://kannadakali.com/publications/... Watch at  https://www.youtube.com/channel/UCCON6n4lEgj6NsPqCLZdDSw  Listen at https://anchor.fm/kannadakali  Like    it? ......  Subscribe and Share! 00:00 ಕನ್ನಡದ ಗುಟ್ಟು  00:36  ಪೀಠಿಕೆ: ಅನೇಕದಂತಾಲಂಕಾರ  01:42 ಪ್ರೇರಣೆ : ಅಗಜಾನನ ಪದ್ಮಾರ್ಕಂ  05:28 ಅನೇಕದಂತಾಲಂಕಾರ  06:17 ಇಂಪಾಸಿಬಲ್ ಚಾಲೆಂಜು  07:13 ಗಣೇಶ ಒಲಿಯುವನೆ?  07:51 ಹಲವೊಂದು ಚಮತ್ಕಾರ  08:53 ಹೊರೆ, ತೊಂದರೆ ದೂರಿಸು 10:41 ಸಾವಿರದುರುವ ವರ ಕೊಡುವ  14:34 ವರ್ಣಾಲಂಕಾರ  15:16 ಕರಿಮೊಗದವನಲ್ಲ  16:53 Read/download/watch/listen  17:11 Credits  
2021-09-2217 minSecret of Kannada ಕನ್ನಡದ ಗುಟ್ಟು Kannadada Guttu2021-09-1000 minSecret of Kannada ಕನ್ನಡದ ಗುಟ್ಟು Kannadada Guttu2021-09-0504 minSecret of Kannada ಕನ್ನಡದ ಗುಟ್ಟು Kannadada Guttu2021-08-2901 minSecret of Kannada ಕನ್ನಡದ ಗುಟ್ಟು Kannadada Guttu2021-08-0917 minSecret of Kannada ಕನ್ನಡದ ಗುಟ್ಟು Kannadada Guttu2021-07-2201 minSecret of Kannada ಕನ್ನಡದ ಗುಟ್ಟು Kannadada Guttu2021-06-2901 minSecret of Kannada ಕನ್ನಡದ ಗುಟ್ಟು Kannadada Guttu2021-06-2807 minSecret of Kannada ಕನ್ನಡದ ಗುಟ್ಟು Kannadada Guttu2021-05-2415 minSecret of Kannada ಕನ್ನಡದ ಗುಟ್ಟು Kannadada Guttu2021-04-0811 minSecret of Kannada ಕನ್ನಡದ ಗುಟ್ಟು Kannadada Guttu2021-02-1923 minSecret of Kannada ಕನ್ನಡದ ಗುಟ್ಟು Kannadada Guttu2021-01-2503 minSecret of Kannada ಕನ್ನಡದ ಗುಟ್ಟು Kannadada Guttu2020-12-1707 minSecret of Kannada ಕನ್ನಡದ ಗುಟ್ಟು Kannadada Guttu2020-10-3004 minSecret of Kannada ಕನ್ನಡದ ಗುಟ್ಟು Kannadada Guttu2020-10-2208 minSecret of Kannada ಕನ್ನಡದ ಗುಟ್ಟು Kannadada Guttu2020-10-1009 minSecret of Kannada ಕನ್ನಡದ ಗುಟ್ಟು Kannadada Guttu2020-08-0107 minSecret of Kannada ಕನ್ನಡದ ಗುಟ್ಟು Kannadada Guttu2020-07-2812 minJ-POD: The Podcast on Journalists and Journalism2020-04-2400 minSecret of Kannada ಕನ್ನಡದ ಗುಟ್ಟು Kannadada Guttu2020-04-0204 minSecret of Kannada ಕನ್ನಡದ ಗುಟ್ಟು Kannadada Guttu2020-03-2007 minSecret of Kannada ಕನ್ನಡದ ಗುಟ್ಟು Kannadada Guttu2020-01-1108 min